ಮಂಜೇಶ್ವರ ಟೈಮ್ಸ್
ನಿಮಗೆ ಇಷ್ಟವಾಯಿತೇ

ಹಾಗಾದರೆ, ನಿಮ್ಮ ಸ್ನೇಹಿತರಿಗೂ ಒಂದು ಮಾತು ತಿಳಿಸಲು ಮರೆಯಬೇಡಿ.......

ಆಗಲೇ ನಮ್ಮ ಈ ಪರಿಶ್ರಮ ಸಾರ್ಥಕ !!!

Saturday 26 May 2012

ಎಸ್ಕೆಎಸ್ಸೆಸ್ಸೆಎಫ್ ಹಾಗು ಎಸ್ಸೆಸ್ಸೆಎಫ್ ನ ಒಳ ಜಗಳ ಮಸೀದಿಯಲ್ಲಿ ಸ್ಪೋಟ



 26 May 2012 ಮಂಜೇಶ್ವರ್ ಟೈಮ್ಸ್


ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ ವಿವಾದ
ಉಪ್ಪಿನಂಗಡಿ: ಇಲ್ಲಿಗೆ ಸಮೀ ಪದ ಜಾರಿಗೆಬೈಲು ಎಂಬಲ್ಲಿ ಬದ್ರ್ ಜುಮ್ಮಾ ಮಸೀದಿ ನಾಳ ಬದ್ರಿಯಾ ಹಯಾತುಲ್ ಇಸ್ಲಾಂ ಯಂಗ್ ಮೆನ್ಸ್ ಎಸೋಸಿಯೇಶನ್ ಇದರ ರಜತ ಮಹೋತ್ಸವದ ಪ್ರಯುಕ್ತ ಆಯ್ದ ಅನಾಥ ಹಾಗೂ ನಿರ್ಗತಿಕ ಕುಟುಂಬದ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮಕ್ಕೆ ಸಂಗ್ರಹಿಸಲಾದ ನಿಧಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ವಿಚಾರ ಜುಮ್ಮಾ ನಮಾಜಿನ ಬಳಿಕ ಸ್ಪೋಟಗೊಂಡು ಜಮಾತ್ ಕಮಿಟಿ ಹಾಗೂ ಜಮಾಅತರ ಮಧ್ಯೆ ಮಾರಾಮಾರಿ ನಡೆದಿದೆ.
ಕೆಲವು ದಿನಗಳ ಹಿಂದೆ ಜಾರಿಗೆ ಬೈಲ್‌ನಲ್ಲಿ ಸುಮಾರು ೫ ಜೋಡಿಗಳಿಗೆ ಸರಳ ವಿವಾಹ ನಡೆಸಲಾಗಿದ್ದು, ಈ ಕಾರ್ಯಕ್ರಮವನ್ನು ನಡೆಸುವ ಸಲುವಾಗಿ ಕಳೆದ ೫ ವರ್ಷಗಳ ಹಿಂದೆಯೇ ನಿಧಿ ಸಂಗ್ರಹಕ್ಕೆ ಆರಂಭಿಸಲಾಗಿದೆ. ಒಟ್ಟಿನಲ್ಲಿ ಸಂಗ್ರಹಿಸಲಾದ ಹಣದ ಬಗ್ಗೆ ಯಾವುದೇ ರೀತಿಯಲ್ಲಿ ಬಹಿರಂಗ ವಾದ ಲೆಕ್ಕಾಚಾರವನ್ನು ಮಂಡಿಸಲಿಲ್ಲ ಎಂಬ ಆರೋಪವು ಈ ವೇಳೆ ವ್ಯಕ್ತ ವಾಗಿದೆ. ಬೆಳ್ತಂಗಡಿ ಜ್ಯುವೆಲ್ಲರಿ ಒಂದಕ್ಕೆ ಹಣ ಬಾಕಿ ಇಟ್ಟು ಸಾಲವಾಗಿ ಚಿನ್ನ ಖರೀದಿ ಮಾಡಿದ್ದು ನಕಲಿ ಬಿಲ್ಲು ತಯಾರಿಸುವ ಹುನ್ನಾರ ಅಡಗಿದೆ ಎಂಬ ಆರೋಪವು ಜಮಾಅತರಿಂದ ಕೇಳಿಬರುತ್ತಿತ್ತು. ಸಂಗ್ರಹ ಮಾಡಿದ ಹಣದಲ್ಲಿ ಬಹುಪಾಲು ಸಮಿತಿ ಸದಸ್ಯರುಗಳು ಓಡಾಡಿದ ವಾಹನದ ಬಾಡಿಗೆಗಾಗಿ ವಿನಿಯೋಗಿಸಿದ್ದಾರೆ. ಒಟ್ಟಿನಲ್ಲಿ ೫ ಜೋಡಿ ಮದುವೆ ಮಾಡಲು ತಲಾ ೧೦.೫ ಲಕ್ಷ ಖರ್ಚು ಎಂಬ ಸುದ್ದಿಯನ್ನು ಎಬ್ಬಿಸಿ ಸಮಿತಿಯ ಕಾರ್ಯಕರ್ತ ನೋರ್ವ ತಮ್ಮ ಹೆಸರು ಪ್ರಚಾರ ಮಾಡುವ ಉದ್ದೇಶದಿಂದ ಸ್ಥಳೀಯ ಪತ್ರಿಕೆಯೊಂದಕ್ಕೆ ೨೦ ಸಾವಿರದ ಜಾಹೀ ರಾತು ಕೂಡಾ ನೀಡಿದ್ದು, ಸರಳ ವಿವಾ ಹದ ನಿಧಿ ಸಂಗ್ರಹದ ಅವ್ಯವಹಾರದ ಇನ್ನೊಂದು ಮುಖ ಎಂಬುವುದನ್ನು ಜಮಾಅತರು ಸಾಬೀತುಪಡಿಸಿದ್ದಾರೆ. ಸಮಿತಿಯಲ್ಲಿ ಉನ್ನತ ಮಟ್ಟದಲ್ಲಿ ಗುರುತಿಸಿಕೊಳ್ಳುವ ವ್ಯಕ್ತಿಯೋರ್ವರು ಚಿನ್ನದ ಅಂಗಡಿಯಲ್ಲಿ ಕಮೀಷನ್ ಲಾಬಿ ಕೂಡಾ ಈ ಮಧ್ಯೆ ನಡೆಸಿದ್ದಾರೆ ಎಂಬ ಆರೋಪವೂ ಸಾರ್ವಜನಿಕವಾಗಿ ವ್ಯಕ್ತವಾಗಿದೆ.
ಒಟ್ಟಿನಲ್ಲಿ ೫ ವರ್ಷಗಳಿಂದ ನಡೆದ ನಿಧಿ ಸಂಗ್ರಹ ವಿದೇಶದಿಂದ ಬಂದ ನಿಧಿ ಇವೆಲ್ಲವೂ ಎಸ್ಕೆಎಸ್ಸೆಸ್ಸೆಎಫ್ ಹಾಗೂ ಎಸ್ಸೆಸ್ಸೆಎಫ್ ಮಧ್ಯೆ ಈ ಮಸೀದಿಯ ಒಳಜಗಳ ಸ್ಪೋಟಗೊಂಡಿತೇ ಎಂಬುವುದು ಪ್ರಶ್ನೆಯಾಗಿ ಉಳಿದಿದೆ

ನೀವು ಅವಿವಾಹಿತರೇ ತಮಿಳುನಾಡು ಸರಕಾರದ ನಿಮಗಿದೋ ಭರ್ಜರಿ ಆಫರ್


 ಮೇ 26, 2012, ಮಂಜೇಶ್ವರ್ ಟೈಮ್ಸ್

ಚೆನ್ನೈ, ಮಾ 26: ಹೋಮ, ಹವನ ಏನು ನಡೆಸಿದರೂ ನಿಮಗಿನ್ನೂ ಮದುವೆಯೋಗ ಕೂಡಿ ಬಂದಿಲ್ಲಾಂದ್ರೆ ಚಿಂತಿಸಬೇಡಿ, ಇಲ್ಲೊಂದು ಪರಿಹಾರವಿದೆ. ಅದು ನಮ್ಮ ಪಕ್ಕದ ಸೆಲ್ವಿ ಜಯಲಲಿತಾ ಸರಕಾರ ನೀಡುತ್ತಿರುವ ಸಹಾಯ ಹಸ್ತ. ಅದಕ್ಕಾಗಿ ದೇವಾಲಯಗಳ ಪ್ಯಾಕೇಜ್ ಟೂರ್ ಮೂಲಕ ತನ್ನ ಪ್ರವಾಸೋದ್ಯಮ ಇಲಾಖೆಗೂ ಅನುಕೂಲವಾಗುವಂತೆ ಅವಿವಾಹಿತರಿಗೆ ಈ ಆಫರ್ ನೀಡಿದ್ದಾರೆ.

ಇದೇ ಬರುವ ಜೂನ್ 1ರಿಂದ ಅನ್ವಯವಾಗುವಂತೆ ಮೂರು ದಿನಗಳಲ್ಲಿ 11 ದೇವಾಲಯಗಳ ದರ್ಶನ ಮಾಡಿಸುವ ವ್ಯವಸ್ಥೆಯನ್ನು ತಮಿಳುನಾಡು ಪ್ರವಾಸೋದ್ಯಮ ಇಲಾಖೆ ಆಯೋಜಿಸಿದೆ. ಅಲ್ಲದೆ ಪ್ರವಾಸಿಗರ ಹೆಸರಿನಲ್ಲಿ ಲಕ್ಷಾರ್ಚನೆ, ಕುಂಕುಮಾರ್ಚನೆ, ವಿಶೇಷ ಪೂಜೆ ಕೂಡಾ ಇಲಾಖೆ ಆಯೋಜಿಸುತ್ತದೆ. ಆಸ್ತಿಕರು ಕಂಕಣ ಭಾಗ್ಯ, ಸಂತಾನಪ್ರಾಪ್ತಿಗಾಗಿ ಈ ದೇವಾಲಯಗಳ ದರ್ಶನ ಮಾಡುವುದು ವಾಡಿಕೆ.

ಈ ಪ್ರವಾಸ ಮತ್ತು ವಿಶೇಷ ಪೂಜೆ, ಪುನಸ್ಕಾರಗಳಲ್ಲಿ ಅವಿವಾಹಿತರು ಭಾಗವಹಿಸಬೇಕು. ಈಗಾಗಲೇ ಇಲಾಖೆ ಸಂಬಂಧಪಟ್ಟ ದೇವಾಲಯಗಳಲ್ಲಿ ಮಾತುಕತೆ ನಡೆಸಿದ್ದು ಸಕಲ ಸಿದ್ದತೆಗಳನ್ನು ನಡೆಸಿದೆ.

ಈ ಮೂರು ದಿನಗಳ ಪ್ರವಾಸ ಮುಡಿಚೂರು ದೇವಾಲಯದಿಂದ ಆರಂಭವಾಗಿ ತಿರುಮನ್ಮೇರಿ, ತಿರುವೀಳಮಚಾಲೆ, ನಲ್ಲೂರು, ನಾಥಚೆರ್, ಉಪ್ಪಲಿಯಪ್ಪನ್, ಮಧುರೈ ಮೀನಾಕ್ಷಿ ಸುಂದರೇಶ್ವರ, ತಿರುವೆಂಗಾದಂ, ತಿರುಚೇರಿ, ತಿರುಕರುಕಾವೂರ್ ದೇವಾಲಯದಲ್ಲಿ ಮುಕ್ತಾಯಗೊಳ್ಳಲಿದೆ.

ಪ್ರತಿ ಶುಕ್ರವಾರ ಸಂಜೆ ಹೊರಟು ದೇವಾಲಯಗಳ ದರ್ಶನ ಮಾಡಿಕೊಂಡು ಸೋಮವಾರ ಮುಂಜಾನೆ ಹೊರಟ ಸ್ಥಳಕ್ಕೆ ವಾಪಾಸ್ ಬಿಡಲಾಗುವುದು ಮತ್ತು ಈ ಪ್ಯಾಕೇಜ್ ಟೂರ್ ವೆಚ್ಚ 2600 ರೂಪಾಯಿ ಎಂದು ತಮಿಳುನಾಡು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

ಈ ಮೇಲಿನ ಎಲ್ಲಾ ದೇವಾಲಯಗಳು ಶಿವ ಅಥವಾ ವಿಷ್ಣುವಿನ ದೇವಾಲಯಗಳಾಗಿದ್ದು ವಿವಾಹ ದೋಷಕ್ಕೆ ಸಂಬಂಧಿಸಿದಂತೆ ವಿಶೇಷ ಪೂಜೆ ನಡೆಸಲಾಗುತ್ತದೆ. ಎರಡು ಮೂರು ಬಾರಿ ಜಯಲಲಿತಾ ತಮಿಳುನಾಡು ಮುಖ್ಯಮಂತ್ರಿಯಾಗಿದ್ದರೂ ಈ ಎಲ್ಲಾ ದೇವಾಲಯಗಳಿಗೆ ಭೇಟಿ ನೀಡಿ ತನ್ನ ವಿವಾಹದೋಷಕ್ಕೆ ಪರಿಹಾರಕ್ಕೆ ಯಾಕೆ ಮುಂದಾಗಿಲ್ಲ ಎಂದು ನಾಸ್ತಿಕರ ಪ್ರಶ್ತ್ನೆಗೆ ನಮ್ಮಲ್ಲಿ ಉತ್ತರವಿಲ್ಲ.

ವಿಶ್ವದ ಅತೀ ಕಡಿಮೆ ದರದ ಬೈಕ್‌ಗೆ ಇನ್ನೂ ಹೆಸರಿಟ್ಟಿಲ್ಲ!


  ಶನಿವಾರ, 26 ಮೇ 2012ManjeshwarTimes

ವಿಶ್ವದ ಅತೀ ಕಡಿಮೆ ದರದ ಕಾರು ನ್ಯಾನೊ ಆಯ್ತು, ಇದೀಗ ವಿಶ್ವದ ಅತೀ ಕಡಿಮೆ ದರದ ದ್ವಿಚಕ್ರ ವಾಹನ ತಯಾರಿಕೆಗೆ ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಯಮಹಾ ಮೊಟಾರ್ಸ್ ಮುಂದಾಗಿದೆ. ಇನ್ನೂ ಹೆಸರಿಡದ ಈ ಬೈಕಿನ ಬೆಲೆ 30,000 ರೂಪಾಯಿಗಿಂತಲೂ ಕಡಿಮೆಯಿರಲಿದೆ ಎಂದು ಯಮಹಾ ಘೋಷಿಸಿದೆ.

ಭಾರತ ಮತ್ತು ಆಫ್ರಿಕಾ ಖಂಡಗಳಲ್ಲಿ ಕಡಿಮೆ ದರದ ದ್ವಿಚಕ್ರ ವಾಹನಗಳಿಗೆ ಸಾಕಷ್ಟು ಬೇಡಿಕೆ ಹೆಚ್ಚುತ್ತಿರುವುದರಿಂದಾಗಿ ಅಂತಹಾ ಬೈಕ್‌ಗಳನ್ನೇ ಹೆಚ್ಚೆಚ್ಚು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿರುವುದಾಗಿ ಯಮಹಾ ತಿಳಿಸಿದೆ.

ಇದೀಗ ಭಾರತದಲ್ಲಿ ಮಾರಾಟಕ್ಕಿರುವ ಅತೀ ಕಡಿಮೆ ದರದ ಬೈಕ್ ಸಿಡಿ ಡಾನ್ ಬೆಲೆ ಕೇವಲ 36,000 ರೂಪಾಯಿ. ಆದ್ದರಿಂದ, ಸುಮಾರು 27,500 ರೂಪಾಯಿ ಮಟ್ಟದಲ್ಲಿ ಬೈಕ್ ಸಿದ್ದಪಡಿಸಲು ನಿರ್ಧರಿಸಲಾಗಿರುವುದಾಗಿ ಯಮಹಾ ತಿಳಿಸಿದೆ

ಫೇಸ್‌ಬುಕ್’ ಪ್ರೇಮ: ಗಂಡ ಸ್ಮಶಾನಕ್ಕೆ; ಹೆಂಡತಿ, ಪ್ರಿಯಕರ ಜೈಲಿಗೆ


ಶನಿವಾರ - ಮೇ -26-2012

ಜಾಗ್ರಾಂವ್: ‘ಫೇಸ್‌ಬುಕ್’ನಲ್ಲಿ ‘ಹರಟೆ’ ಹೊಡೆಯುತ್ತಿದ್ದ ವೇಳೆ ಉಂಟಾದ ಪ್ರೇಮ ಒಂದು ಹತ್ಯೆ ಮತ್ತು ಮೂವರು ಜೈಲಿಗೆ ಹೋಗುವುದರೊಂದಿಗೆ ಪರ್ಯಾವಸಾನಗೊಂಡಿದೆ. ಕೊಲೆ ರಹಸ್ಯವೊಂದನ್ನು ಗುರುವಾರ ಪೊಲೀಸರು ಭೇದಿಸಿದ್ದಾರೆ.
ಮುಲ್ಲಾನ್‌ಪುರ ಧಾಕದ ನಿವಾಸಿ 32 ವರ್ಷ ಪ್ರಾಯದ ಸುಖದೀಪ್ ಕೌರ್ ತನ್ನ ಗಂಡನನ್ನೇ ಕೊಂದಳು. ಅದಕ್ಕಾಗಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಪ್ರೀತಿಸಲಾರಂಭಿಸಿದ ಕರಮ್‌ಜೀತ್ ಸಿಂಗ್ ಎಂಬಾತನ ಸಹಾಯ ಪಡೆದಿದ್ದಳು. ವಿಚಾರಣೆಯ ವೇಳೆ ಆಕೆ ತನ್ನ ಆರೋಪವನ್ನು ಒಪ್ಪಿಕೊಂಡಿದ್ದಾಳೆ.
36 ವರ್ಷ ಪ್ರಾಯದ ಅಮರ್‌ಜೀತ್ ಸಿಂಗ್ ಮೇ 11ರಂದು ಮಧ್ಯರಾತ್ರಿ ಸುಮಾರಿಗೆ ಹರಿತ ಆಯುಧದಿಂದ ಇರಿಯಲ್ಪಟ್ಟು ಕೊಲೆಯಾಗಿದ್ದರು ಹಾಗೂ ಅವರ ದೇಹವನ್ನು ಜಿಲ್ಲೆಯ ಸೋಹಿಯಾನ್ ಗ್ರಾಮದಲ್ಲಿ ಬಿಸಾಡಲಾಗಿತ್ತು.
‘‘ಫೇಸ್‌ಬುಕ್ ಬಗ್ಗೆ ತಾನು ತುಂಬಾ ಕೇಳಿದ್ದೇನೆ ಹಾಗೂ ಅದರಲ್ಲಿ ತನಗೊಂದು ಖಾತೆಯನ್ನು ತೆರೆಯುವಂತೆ ಸ್ನೇಹಿತೆಯೊಬ್ಬಳಲ್ಲಿ ಹೇಳಿದ್ದೆ ಎಂದು ಸುಖ್‌ದೀಪ್ ಹೇಳಿದಳು. ಆಕೆ ಫೇಸ್‌ಬುಕ್‌ನಲ್ಲಿ ಚಾಟಿಂಗ್ ನಡೆಸಿದಳು. ಆಕೆಗೆ ಕರಮ್‌ಜೀತ ಸಿಂಗ್ ಪರಿಚಯವಾದ. ಅವರು ಫೋನ್ ನಂಬರ್‌ಗಳನ್ನು ವಿನಿಮಯ ಮಾಡಿಕೊಂಡರು ಹಾಗೂ ಸಂಬಂಧ ಬೆಳೆಸಿಕೊಂಡರು. ತನ್ನ ಪ್ರಿಯತಮ ಮತ್ತು ಆತನ ಗೆಳೆಯ ಸತ್ನಾಮ್ ಸಿಂಗ್ (ಅವರು ಫತೇಗಢ್ ಸಾಹಿಬ್ ಜಿಲ್ಲೆಯ ಮಂಡಿ ಗೋಬಿಂದಗಢ್ ನಿವಾಸಿಗಳು) ಜೊತೆ ಸೇರಿ ಆಕೆ ತನ್ನ ಗಂಡನ ಹತ್ಯೆ ಸಂಚು ರೂಪಿಸಿದಳು’’ ಎಂದು ಲೂಧಿಯಾನ ಗ್ರಾಮೀಣ ಎಸ್‌ಎಸ್‌ಪಿ ಗುರ್‌ಪ್ರೀತ್ ಸಿಂಗ್ ತೂರ್ ತಿಳಿಸಿದರು.
ಮಗನಿಗೆ ಕಣ್ಣು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸುವ ನೆವದಿಂದ ಮೇ 11ರಂದು ಸುಖ್‌ದೀಪ್ ತನ್ನ ಗಂಡ ಮತ್ತು ಮಗನನ್ನು ಲೂಧಿಯಾನಕ್ಕೆ ಕರೆತಂದಳು. ಆಸ್ಪತ್ರೆಯಲ್ಲಿ ತನ್ನ ಪ್ರಿಯಕರ ಕರಮ್‌ಜೀತ್ ಮತ್ತು ಆತನ ಸ್ನೇಹಿತನನ್ನು ತನ್ನ ಸಂಬಂಧಿಕರು ಎಂಬುದಾಗಿ ಗಂಡನಿಗೆ ಪರಿಚಯಿಸಿದಳು. ಆಸ್ಪತ್ರೆಯಲ್ಲಿ ತುಂಬಾ ದಿನ ಇರಬೇಕಾಗುವುದರಿಂದ ಗಂಡನನ್ನು ತನ್ನ ಊರಿಗೆ ಕರೆದುಕೊಂಡುಹೋಗುವಂತೆ ಆಕೆ ತನ್ನ ಕರಮ್‌ಜೀತ್ ಮತ್ತು ಆತನ ಗೆಳೆಯನಿಗೆ ಹೇಳಿದಳು.
‘‘ಗಂಡ ಆರೋಪಿಗಳೊಂದಿಗೆ ಅವರ ಕಾರಿನಲ್ಲಿ ಹೋಗಲು ಒಪ್ಪಿಕೊಂಡ. ಮುಲ್ಲನಪುರಕ್ಕೆ ಹೋಗುವ ದಾರಿಯಲ್ಲಿ ಹೆಂಡದಂಗಡಿಯ ಬಳಿ ಅವರು ನಿಂತರು. ಆರೋಪಿಗಳು ಅಮರ್‌ಜೀತ್ ಸಿಂಗ್‌ಗೆ ಮಾದಕ ಪದಾರ್ಥ ಬೆರೆಸಿದ ಹೆಂಡವನ್ನು ಕುಡಿಯಲು ನೀಡಿದರು.
ಹೆಂಡ ಕುಡಿದು ಪ್ರಜ್ಞೆತಪ್ಪಿ ಬಿದ್ದ ಆತನನ್ನು ಅವರು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಚೂರಿಯಿಂದ ಇರಿದು ಹತ್ಯೆಗೈದರು. ಬಳಿಕ ಆರೋಪಿಗಳು ಮೃತನ ಚಿನ್ನದ ಬ್ರಾಸ್‌ಲೆಟ್, ಉಂಗುರ, ಸರ ಮತ್ತು 20,000 ರೂ. ನಗದು ಇದ್ದ ಪರ್ಸ್‌ನೊಂದಿಗೆ ಪರಾರಿಯಾದರು’’ ಎಂದು ತೂರ್ ತಿಳಿಸಿದರು.
ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಸಿರಿಯ: ತಲೆಕೆಳಗಾದ ಅಮೆರಿಕದ ಲೆಕ್ಕಾಚಾರ

ಮೇ -26-2012

ಲಿಬಿಯ ಮತ್ತು ಇರಾಕ್‌ಗಳಲ್ಲಿ ಮಾಡಿದಂತೆ ಸಿರಿಯದಲ್ಲೂ ಅಲ್ಲಿನ ಸರಕಾರವನ್ನು ಬುಡಮೇಲು ಮಾಡುವ ಅಂಗ್ಲೋ- ಅಮೆರಿಕನ್ ಶಕ್ತಿಗಳಿಗೆ ಹಿನ್ನಡೆಯಾಗಿದೆ.ಆ ದೇಶದ ಆಂತರಿಕ ಬಂಡಾಯವನ್ನು ಪ್ರಚೋದಿಸಿ ನೇರ ಮಿಲಿಟರಿ ಹಸ್ತಕ್ಷೇಪಕ್ಕೆ ವಾಶಿಂಗ್ಟನ್ ಸನ್ನಾಹ ನಡೆಸುತ್ತಾ ಬಂದಿತ್ತು.ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲ.ಈ ಕುರಿತು ನಿರ್ಣಯವನ್ನು ಮಂಡಿಸಿದಾಗ ರಶ್ಯ ಮತ್ತು ಚೀನಗಳು ವಿಟೋ ಅಧಿಕಾರವನ್ನು ಚಲಾಯಿಸಿ ಅದನ್ನು ತಡೆಹಿಡಿದಿದ್ದವು.ಭದ್ರತಾ ಮಂಡಳಿಯಲ್ಲಿ ಸಿರಿಯದ ವಿರುದ್ಧ ನಿರ್ಣಯ ಮಂಡಿಸುವ ಯತ್ನ ವಿಫಲಗೊಂಡ ನಂತರವೂ ಕೂಡ ಆ ದೇಶದಲ್ಲಿ ಆಂತರಿಕ ಕಲಹಕ್ಕೆ ಪ್ರಚೋದನೆ ನೀಡುವ ಯತ್ನವನ್ನು ಅಮೆರಿಕ ನಿಲ್ಲಿಸಿಲ್ಲ.ಡಮಾಸ್ಕನ್ ಮುಂತಾದ ನಗರಗಳಲ್ಲಿ ನಡೆದ ಆತ್ಮಹತ್ಯೆ ಬಾಂಬ್ ದಾಳಿಗಳು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿವೆ.ಇಂತಹ ಪರಿಸ್ಥಿತಿ ಆ ಭೂಪ್ರದೇಶದಲ್ಲಿ ಉಂಟಾಗಲು ಹೊರ ಜಗತ್ತಿನಲ್ಲಿರುವ ಒಡಕು ಮುಖ್ಯ ಕಾರಣವಾಗಿದೆ.ಟರ್ಕಿ,ಕತರ್,ಸೌದಿ ಅರೇಬಿಯಾದಂತಹ ದೇಶಗಳು ಪಾಶ್ಚಿಮಾತ್ಯ ದೇಶಗಳ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿವೆ.ಯಾವುದೇ ಸ್ವತಂತ್ರ ದೇಶಗಳಲ್ಲಿ ಅಲ್ಲಿನ ಸರಕಾರ ತನ್ನ ಆಣತಿಯಂತೆ ಕಾರ್ಯನಿರ್ವಹಿಸದಿದ್ದರೆ ಅದನ್ನು ಅಮೆರಿಕ ಸಹಿಸುವುದಿಲ್ಲ.
ಇರಾಕ್ ಮತ್ತು ಲಿಬಿಯಗಳಲ್ಲಿ ಸದ್ದಾಂ ಮತ್ತು ಗದಾಫಿ ಅಮೆರಿಕದ ಸೂತ್ರದ ಗೊಂಬೆಯಂತೆ ಕೆಲಸ ಮಾಡಲು ನಿರಾಕರಿಸಿದರು. ಅಂತಲೇ ಆ ದೇಶಗಳಲ್ಲಿ ಅರಾಜಕತೆಯನ್ನುಂಟು ಮಾಡಿ ಅವರಿಬ್ಬರನ್ನು ಅಮೆರಿಕ ಹೊಸಕಿ ಹಾಕಿತು. ಈಗ ಸಿರಿಯದ ಸರಕಾರವನ್ನು ಕೂಡ ಸರ್ವಾಧಿಕಾರ ಹಾಗೂ ದಮನಕಾರಿಯೆಂದು ಘೋಷಿಸಿ ಸಶಸ್ತ್ರ ಆಂತರಿಕ ಕಲಹಕ್ಕೆ ಪ್ರಚೋದನೆ ನೀಡುತ್ತಿದೆ. ಈ ರೀತಿ ಆಂತರಿಕ ಕಲಹವನ್ನು ಪ್ರಚೋದಿಸಿ ನಂತರ ನೇರ ಹಸ್ತಕ್ಷೇಪ ಮಾಡಿ ಆ ದೇಶದಲ್ಲಿ ತನ್ನ ಕೈಗೊಂಬೆ ಸರಕಾರವನ್ನು ಸ್ಥಾಪಿಸುವುದು ವಾಶಿಂಗ್ಟನ್ ಉದ್ದೇಶವಾಗಿತ್ತು.ಅಲ್ಲಿ ಕೈಗೊಂಬೆ ಸರಕಾರವನ್ನು ಸ್ಥಾಪಿಸಿದ ನಂತರ ಅಲ್ಲಿನ ನೈಸರ್ಗಿಕ ಸಂಪತ್ತನ್ನು ಕೊಳ್ಳೆಹೊಡೆಯುವುದು ಅಮೆರಿಕದ ದೂರಗಾಮಿ ಯೋಜನೆಯಾಗಿದೆ. ಅದರಲ್ಲೂ ತೈಲ ಸಂಪತ್ಭರಿತವಾದ ಅರಬ್ ದೇಶಗಳ ಮೇಲೆ ಸಾಮ್ರಾಜ್ಯಶಾಹಿ ಶಕ್ತಿ ದೇಶಗಳಿಗೆ ಮೊದಲಿನಿಂದಲೂ ಕಣ್ಣಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಮೆರಿಕ ಪ್ರಚೋದಿತ ನಿರ್ಣಯಕ್ಕೆ ಸೋಲುಂಟಾದ ನಂತರ ಪಾಶ್ಚಿಮಾತ್ಯ ನಾಯಕರು ರಶ್ಯ ಹಾಗೂ ಚೀನಗಳನ್ನು  ದೂಷಿಸಿ ಕೆಂಡಕಾರುತ್ತಿದ್ದಾರೆ. ಸಿರಿಯಾದಲ್ಲಿ ಸರ್ವಾಧಿಕಾರ ಆಡಳಿತ ಮುಂದುವರಿಯಲು ಚೀನ ಹಾಗೂ ರಶ್ಯ ಕಾರಣವೆಂದು ಅಮೆರಿಕ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಕೆಂಡಗಾರಿದ್ದಾರೆ. ಇದೇ ಹಿಲರಿ ಕ್ಲಿಂಟನ್ ಈ ಮೊದಲು ಭಾರತಕ್ಕೆ ಬಂದಿದ್ದರು. ಅದರಲ್ಲೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿ ಮಾಡಿದ್ದರು. ಇರಾನ್ ವಿರುದ್ಧ ಭಾರತವನ್ನು ಎತ್ತಿಕಟ್ಟುವುದು ಅವರ ಈ ಭೇಟಿಯ ಉದ್ದೇಶವಾಗಿತ್ತು.
ವಿಶ್ವಸಂಸ್ಥೆಯಲ್ಲಿ ಸಿರಿಯಾ ಪರವಾಗಿ ವಿಟೋ ಅಧಿಕಾರ ಚಲಾಯಿಸಿದ್ದುದ್ದಕ್ಕಾಗಿ ಚೀನಾ ಹಾಗೂ ರಶ್ಯ ದೇಶಗಳನ್ನು ಟೀಕಿಸುವ ಅಮೆರಿಕ ತನ್ನ ಚೇಲಾ ರಾಷ್ಟ್ರಗಳ ಪರವಾಗಿ ನೂರಾರು ಬಾರಿ ಇಂತಹದೇ ವಿಟೋ ಅಧಿಕಾರವನ್ನು ಚಲಾವಣೆ ಮಾಡಿದೆ.ತನ್ನ ಚೇಲಾ ದೇಶವಾದ ಇಸ್ರೇಲ್‌ನ ಸ್ವಾತಂತ್ರಕ್ಕಾಗಿ ಫೆಲೆಸ್ತೀನ್ ಜನರ ನರಮೇಧ ಮಾಡಿದಾಗ ಅದರ ವಿರುದ್ಧ ಜಗತ್ತಿನ ಬಹುತೇಕ ದೇಶಗಳು ಒಂದಾಗಿ ವಿಶ್ವಸಂಸ್ಥೆಯಲ್ಲಿ ನಿರ್ಣಯ ಅಂಗೀಕಾರವಾಗುವಂತೆ ಮಾಡಿದ್ದವು. ಆದರೆ ಅಮೆರಿಕ ತನ್ನ ವಿಟೋ ಅಧಿಕಾರವನ್ನು ಚಲಾಯಿಸಿ ಹಂತಕ ರಾಷ್ಟ್ರವನ್ನು ರಕ್ಷಿಸಿತು. ಈಗ ಚೀನ ಮತ್ತು ರಶ್ಯಗಳು ಮಾಡಿದರೆ ಅದನ್ನು ಹಿಲರಿ ಕ್ಲಿಂಟನ್ ಸಹಿಸುತ್ತಿಲ್ಲ.
ಸಿರಿಯದ ಆಂತರಿಕ ರಾಜಕೀಯ ಹೋರಾಟವನ್ನು ಅಂತಾರಾಷ್ಟ್ರೀಯಗೊಳಿಸಲು ಅಮೆರಿಕ ಎಲ್ಲ ರೀತಿಯ ಹುನ್ನಾರವನ್ನು ನಡೆಸಿದೆ.ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಮೊಸಳೆ ಕಣ್ಣೀರು ಹಾಕುತ್ತಿದೆ.ಆದರೆ ಗಾಝಾ ದಂಡೆ ಪ್ರದೇಶದಲ್ಲಿ ಅಮಾಯಕ ಫೆಲೆಸ್ತೀನಿಯರನ್ನು ಕೊಲ್ಲುತ್ತಾ ಇಸ್ರೇಲ್ ನಿತ್ಯವೂ ಮಾನವಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದ್ದರೂ ಆ ಕುರಿತು ತೆಪ್ಪಗಿದೆ.ಇರಾನ್ ಹಾಗೂ ಸಿರಿಯಗಳು ನಿಕಟ ಬಾಂಧವ್ಯ ಹೊಂದಿವೆ.ಇದನ್ನು ಅಮೆರಿಕಕ್ಕೆ ಸಹಿಸಲಾಗುತ್ತಿಲ್ಲ.ಸಿರಿಯದಲ್ಲಿ ಈಗ ಪದಚ್ಯುತಗೊಳಿಸಿ ತನ್ನ ಕೈಗೊಂಬೆ ಸರಕಾರವನ್ನು ಸ್ಥಾಪಿಸಿದರೆ ಇರಾನ್ ಏಕಾಂಗಿಯಾಗುತ್ತದೆ ಎಂಬುದು ಅಮೆರಿಕದ ಲೆಕ್ಕಾಚಾರವಾಗಿದೆ.ಆದರೆ ಅದರ ಲೆಕ್ಕಾಚಾರ ತಲೆಕೆಳಗಾಗುತ್ತಲೆ ಇದೆ. ಇತ್ತೀಚಿಗೆ ಭಾರತವೂ ಕೂಡ ಸಿರಿಯದ ಪರವಾಗಿ ದೃಢವಾಗಿ ನಿಂತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

മഞ്ചേശ്വരം ചെക്ക്‌പോസ്റ്റിലേക്ക് മാര്‍ച്ചും ധര്‍ണ്ണയും സംഘടിപ്പിച്ചു


: 2012-05-26 manjeshwartimes

kasaragod.com, news, vartha, kasaragodvartha, kasaragodnews
മഞ്ചേശ്വരം : സമഗ്രമായ ഗതാഗത നയം പ്രഖ്യാപിക്കുക, ചെക്ക്‌പോസ്റ്റിലെ കാലതാമസം ഒഴിവാക്കുക, തൊഴിലാളികള്‍ക്ക് പ്രാഥമിക സൗകര്യം ഉറപ്പാക്കുക, ആര്‍ ടി ഒ-പോലീസ് അധികാരികളുടെ പീഡനം അവസാനിപ്പിക്കുക, ചെക്ക്‌പോസ്റ്റുകളിലെ അഴിമതി അവസാനിപ്പിക്കുക എന്നീ ആവശ്യങ്ങളുന്നയിച്ച് കേരള സ്റ്റേറ്റ് ഗൂഡ്‌സ് ട്രാന്‍സ്‌പോര്‍ട്ട് വര്‍ക്കേഴ്‌സ് ഫെഡറേഷന്റെ (സി ഐ ടി യു) നേതൃത്വത്തില്‍ മഞ്ചേശ്വരം വാണിജ്യ നികുതി ചെക്ക്‌പോസ്റ്റിലേക്ക് മാര്‍ച്ചും ധര്‍ണ്ണയും സംഘടിപ്പിച്ചു. ധര്‍ണ്ണയ്ക്ക് മുന്നോടിയായി നിരവധി തൊഴിലാളികളെ അണിനിരത്ത് പ്രകടനം നടത്തി. തുടര്‍ന്നു ചെക്ക് പോസ്റ്റ് പരിസരത്ത് നടന്ന ധര്‍ണ്ണയുടെ ഉദ്ഘാടനം സി ഐ ടി യു ജില്ലാ ജനറല്‍ സെക്രട്ടറി പി രാഘവന്‍ നിര്‍വ്വഹിച്ചു. ടി കെ രാജന്‍ അധ്യക്ഷത വഹിച്ചു. ഫെഡറേഷന്‍ സംസ്ഥാന പ്രസിഡണ്ട് കാറ്റാടി കുമാരന്‍, ബേബി ഷെട്ടി, ചന്തപ്പ മാസ്റ്റര്‍, എം രാജന്‍, അബ്ബാസ്, തുടങ്ങിയവര്‍ സംബന്ധിച്ചു. വി ശശി സ്വാഗതം പറഞ്ഞു.

ಮಂಜೇಶ್ವರ:ಗ್ರಾಮ ಸಭೆಗಳನ್ನು ನಿರ್ಲಕ್ಷಿಸಿದ ಪಂಚಾಯತ್ ಸದಸ್ಯರ ವಿರುದ್ದ ಗ್ರಾಹಕರ ವೇದಿಕೆಯಿಂದ ಇಲಕ್ಷನ್ ಕಮೀಷನರ್ ಗೆ ದೂರು

ManjeshwarTimes   May-26-2012 Staff Reporter
ಮಂಜೇಶ್ವರ:ಮಂಜೇಶ್ವರ ಗ್ರಾ.ಪಂ.ನ ಪ್ರತೀ ವಾರ್ಡಿನಲ್ಲಿ ನಡೆದ ಗ್ರಾಮ ಸಭೆಯ ಲೆಕ್ಕಾಚಾರವನ್ನು ಗ್ರಾಮ ಪಂಚಾಯತ್ ಕಚೇರಿಯಿಂದ ಮಾಹಿತಿ ಹಕ್ಕು ಖಾಯಿದೆ ನಿಯಮ(2005) ರಂತೆ ಪಡೆದ ಮಂಜೇಶ್ವರ ಗ್ರಾಹಕರ ವೇದಿಕೆಯು ಗ್ರಾಮ ಸಭೆಯನ್ನು ನಿರ್ಲಕ್ಷಿಸಿದ ಸುಮಾರು 10 ವಾರ್ಡುಗಳ ಸದಸ್ಯರ ವಿರುದ್ದ ಈಗಾಗಲೇ ಇಲಕ್ಷನ್ ಕಮೀಷನರ್ ಗೆ ದೂರುಗಳನ್ನು ರವಾನಿಸಿದ್ದು ಬಾಕಿ ಇರುವ 11 ವಾರ್ಡುಗಳ ದೂರುಗಳನ್ನು ಆದಷ್ಟು ಬೇಗನೆ ರವಾನಿಸಲಾಗುವುದೆಂದು ತಿಳಿದು ಬಂದಿದೆ.
ಪಂಚಾಯತ್ ಆಕ್ಟ್ ಪ್ರಕಾರ 3 ತಿಂಗಳಿಗೊಮ್ಮೆ ಒಂದು ಗ್ರಾಮ ಸಭೆಯನ್ನು ಆಯಾಯ ವಾರ್ಡಿನ ಸದಸ್ಯ ನಡೆಸಬೇಕಾಗಿದೆ.ವಾರ್ಡಿನ ಸದಸ್ಯ ಕರೆದ ಗ್ರಾಮ ಸಭೆಯನ್ನು ಅಂಗೀಕರಿಸಬೇಕಾದರೆ ಆ ಗ್ರಾಮದ ಮತದಾರರ ಪೈಕಿ 10 ಶೇಕಡಾ ಮತದಾರರು ಹಾಜರಿರಬೇಕಾಗಿದೆ ಇದು ಸಭೆಯ ಕೋರಂ ಆಗಿದೆ.10 ಶೇಕಡಾಕ್ಕಿಂತ ಕಮ್ಮಿ ಮತದಾರರು ಪಾಲ್ಗೊಂಡ ಸಭೆಯನ್ನು ಪಂಚಾಯತ್ ಆಕ್ಟ್ ಪ್ರಕಾರ ಗ್ರಾಮ ಸಭೆಯಾಗಿ ಅಂಗೀಕರಿಸಲಾಗುವುದಿಲ್ಲ.ಆದರೆ ಮಂಜೇಶ್ವರ ಗ್ರಾಮ ಪಂಚಾಯತ್ ನ ಕೆಲವೊಂದು ವಾರ್ಡುಗಳಲ್ಲಿ 3 ತಿಂಗಳು ಬಿಟ್ಟು 6 ಕಳೆದರೂ ಗ್ರಾಮ ಸಭೆ ನಡೆಸದ ವಾರ್ಡುಗಳಿವೆಯೆಂಬುದು ಮಂಜೇಶ್ವರ ಗ್ರಾಹಕರ ವೇದಿಕೆಯ ಆರೋಪ.ಒಬ್ಬ ಪಂಚಾಯತ್ ಸದಸ್ಯ 3 ತಿಂಗಳಿಗೊಮ್ಮೆ ನಡೆಸಬೇಕಾದ ಗ್ರಾಮ ಸಬೆಯನ್ನು ನಂತ್ರದ 3 ತಿಂಗಳು ಕಳೆದು ಅಂದ್ರೆ 6 ತಿಂಗಳಿನ ನಂತ್ರ ನಡೆಸಿದರೆ ಇದರಿಂದ ಸದಸ್ಯನ ಸದಸ್ಯತ್ವ ನಷ್ಟವಾಗುವ ಸಾಧ್ಯತೆ ಇದೆ.ಮಾತ್ರವಲ್ಲದೆ  ಪಂಚಾಯತ್ ಆಕ್ಟ್ ಪ್ರಕಾರ ಒಂದು ವರ್ಷ ಕಡ್ಡಾಯವಾಗಿ 4 ಗ್ರಾಮ ಸಭೆಗಳು ನಡೆಯಬೇಕಾಗಿದೆ.ಈ ನಿಯಮಕ್ಕೆ ವಿರುದ್ದವಾಗಿ ವರ್ತಿಸಿದ ಸದಸ್ಯನ ವಿರುದ್ದ ಇಲಕ್ಷನ್ ಕಮೀಷನರ್ ಗೆ ಅಂತಹ ಸದಸ್ಯನನ್ನು ಮುಂದಿನ 6 ವರ್ಷಕ್ಕೆ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ನೋಟೀಸು ಜಾರಿ ಮಾಡುವ ಸಾಧ್ಯತೆ ಕೂಡಾ ಇರಬಹುದೆಂಬುದಾಗಿ ಗ್ರಾಹಕರ ವೇದಿಕೆ ಶಂಶಯವನ್ನು ವ್ಯಕ್ತಪಡಿಸಿದೆ.
ಮಂಜೇಶ್ವರ ಗ್ರಾಮ ಪಂಚಾಯತ್ ನ ಪ್ರತಿಯೊಂದು ವಾರ್ಡುಗಳಲ್ಲೂ ಸರಿಯಾದ ರೀತಿಯಲ್ಲಿ ಗ್ರಾಮ ಸಭೆ ನಡೆಯದ ಕಾರಣ 2011-2012 ನೇ ಇಸವಿಯ ಪದ್ದತಿಯಲ್ಲಿ ಮಂಜೂರಾದ ಸರಿ ಸುಮಾರು 2ಕೋಟಿ 30 ಲಕ್ಷ ರೂಪಾಯಿ ಹಣದಲ್ಲಿ 40  ಶೇಕಡಾ ಹಣ ಯಾವುದೇ ಪದ್ದತಿಗೂ ವಿನಿಯೋಗಿಸದೆ ವ್ಯರ್ಥವಾಗಿ ಹೋಗಿರುವುದಾಗಿ ಗ್ರಾಹಕ ವೇದಿಕೆ ಆರೋಪಿಸಿದ್ದು ಮಾತ್ರವಲ್ಲದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕ್ಕಾಗಿ ಮೀಸಲಿಟ್ಟ ಹಣದಿಂದ 80 ಶೇಕಡಾ ಹಣ ವಿನಿಯೋಗವಿಲ್ಲದೆ ಹಾಗೆಯೇ ವ್ಯರ್ಥವಾಗಿ ಹೋಗಿದೆ ಇದೆಲ್ಲದಕ್ಕೂ ಪ್ರಮುಖ ಕಾರಣ ಅಧಿಕಾರದಲ್ಲಿರುವ ಪಂಚಾಯತ್ ಜನ ಪ್ರತಿನಿಧಿಗಳ ವೈಪಲ್ಯವೇ ಕಾರಣವೆಂಬುದಾಗಿ ಗ್ರಾಹಕರ ವೇದಿಕೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ..

വൃദ്ധക്കെതിരെ വധഭീഷണി മുഴക്കിയ ഗ്യാസ് ഏജന്‍സി ഡ്രൈവര്‍ക്കെതിരെ നടപടി സ്വീകരിച്ചില്ലെന്ന് പരാതി


  2012-05-26 manjeshwartimes

kasaragod.com, news, vartha, kasaragodvartha, kasaragodnews മഞ്ചേശ്വരം : വൃദ്ധക്കെതിരെ വധഭീഷണി മുഴക്കുകയും, അപമാനിക്കുകയും ചെയ്ത ഗ്യാസ് ഏജന്‍സി ഡ്രൈവര്‍ക്കെതിരെ നടപടി സ്വീകരിച്ചില്ലെന്ന് പരാതി. മഞ്ചേശ്വരം അനന്ത ഗ്യാസ് ഏജന്‍സി ഡ്രൈവര്‍ അനില്‍ കുമാറിനെതിരെയാണ് വീണ്ടും പരാതി ഉയര്‍ന്നിരിക്കുന്നത്. അനില്‍കുമാറിനെ തന്നെ ഗ്യാസുമായി പരാതിക്കാരിയായ വൃദ്ധയുടെ വീട്ടിലേക്കയച്ചതാണ് വീണ്ടും പരാതിക്കിടയാക്കിയിരിക്കുന്നത്. രണ്ടാഴ്ച മുമ്പ് മഞ്ചേശ്വരം രാഗം ജംഗ്ഷനിലെ ഹാജിറയുടെ വീട്ടില്‍ ഗ്യാസുമായി എത്തിയ അനില്‍കുമാര്‍ ഹാജിറയെ അപമാനിക്കുകയും വധഭീഷണി മുഴക്കുകയും ചെയ്തിരുന്നു. ഇതുസംബന്ധിച്ച് ജില്ലാ കളക്ടര്‍, എച്ച് പി എല്‍ റീജ്യണല്‍ മാനേജര്‍, മഞ്ചേശ്വരം പോലീസ് സ്റ്റേഷന്‍, ഉപക്ഷോക്തൃഫോറം എന്നിവിടങ്ങളില്‍ ഹാജിറ പരാതി നല്‍കിയിരുന്നു. പരാതിയെക്കുറിച്ച് ഉപഭോക്തൃ ഫോറം പ്രസിഡണ്ട് മുരളീധര ഭട്ട് ഗ്യാസ് ഏജന്‍സി ഉടമസ്ഥയോട് അന്വേഷിച്ചപ്പോള്‍ ഡ്രൈവറെ ന്യായികരിക്കുകയാണുണ്ടായതത്രെ. ഇതിനിടയിലാണ് അനില്‍കുമാര്‍ വീണ്ടും ഗ്യാസുമായി ഹാജിറയുടെ വീട്ടിലെത്തിയത്. ആരോപണ വിധേയനായ ഡ്രൈവര്‍ക്കെതിരെ നടപടി സ്വീകരിക്കാതെ വീണ്ടും പരാതിക്കാരിയുടെ വീട്ടില്‍ ഗ്യാസുമായി ഇയാളെ തന്നെ അയച്ചതാണ് പരാതിക്കിടയാക്കിയത്.

Friday 25 May 2012

ಕುರುಕ್ಕನ ವಿಚಿತ್ರ ಕಾಯಿಲೆ (ಕುರುಕ್ಕನ ಜೋಕ್ಸ್)



ಜೋಕ್ಸ್ ಟೈಮ್ಸ್  ಮೇ-25-2012
ವಿಧ್ಯುತ್ ಕಚೇರಿಯ ಮುಂಬಾಗದಲ್ಲಿ ದಲ್ಲಾಳಿಯಾಗಿರುವ  40 ವರ್ಷದ ಕುರುಕ್ಕ ತನ್ನ ವಿಚಿತ್ರ ಕಾಯಿಲೆಗೆ ಚಿಕಿತ್ಸೆ ಪಡೆಯೋಣವೆಂದು ಡಾ.ಸುಬ್ಬು ನ ಬಳಿ ಬರುತ್ತಾನೆ.

ಕುರುಕ್ಕ : "ಡಾಕ್ಟ್ರೆ, ನನಗೊಂದು ವಿಚಿತ್ರ ತೊಂದರೆಯಿದೆ. ಯಾವಾಗಲೂ ಹೂಸು ಬಿಡುತ್ತಲೇ ಇರುತ್ತೇನೆ."

ಡಾ. ಸುಬ್ಬು : "ಇದೇನು ವಿಚಿತ್ರ ತೊಂದರೆಯಲ್ಲ.   ಎಲ್ಲರಿಗೂ ಇದು ಸಾಮಾನ್ಯ." ಅಂತ ತಾನೂ ಒಂದು ಹೂಸು ಬಿಡುತ್ತಾನೆ.

ಕುರುಕ್ಕ : "ಇದು ಸಾಮಾನ್ಯವೇ ಇರಬಹುದು. ನನ್ನ ಸಮಸ್ಯೆಯೆಂದರೆ, ಹೂಸು ಬಿಟ್ಟಾಗ ಶಬ್ದವೂ ಆಗುವುದಿಲ್ಲ, ವಾಸನೆಯೂ ಬರುವುದಿಲ್ಲ. ನಾನು ದಳ್ಳಾಳಿಯಾಗಿರುವ ಕಾರಣ ಅಸಿಸ್ಟಂಟ್ ಇಂಜಿನಿಯರ್  ಮುಂದೆ ನನಗಂತೂ ತುಂಬಾ ಮುಜುಗರವಾಗುತ್ತದೆ."

ಹೀಗೋ ಸಮಾಚಾರ ಅಂದ ಡಾ. ಸುಬ್ಬ ಸಕಲ ಕಲಾ ವಲ್ಲಭವನಾದ ಕುರುಕ್ಕನಿಗೆ  ಕೆಲ ಮಾತ್ರೆಗಳನ್ನು ನೀಡಿ, ಒಂದು ವಾರ ಬಿಟ್ಟು ಬಾ ಎಂದು ಹೇಳುತ್ತಾನೆ. ವಾರ ಬಿಟ್ಟು  ಕುರುಕ್ಕ ಬರುತ್ತಾನೆ. ಹೂಸಿನ ತೊಂದರೆ ಇನ್ನೂ ಜಾಸ್ತಿಯಾಗಿರುತ್ತದೆ.

ಕುರುಕ್ಕ : "ಎಂಥ ಮಾತ್ರೆ ಕೊಟ್ಟಿದ್ರಿ ಡಾಕ್ಟ್ರೆ? ಇವುಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ತಡಕೊಳ್ಳಲಾಗದಷ್ಟು ಹೂಸುಗಳು ಬರುತ್ತಲೇ ಇರುತ್ತವೆ. ಇತ್ತೀಚೆಗೆ ವಾಸನೆಯೂ ಸಿಕ್ಕಾಪಟ್ಟೆ ಬರುತ್ತಿದೆ."ಅಸಿಸ್ಟಂಟ್ ಇಂಜಿನಿಯರ್  ನನ್ನನ್ನು ದೂರದಿಂದ ನೋಡುವಾಗಲೇ ಓಡಿ ಹೋಗುತಿದ್ದಾರೆ

ಡಾ. ಸುಬ್ಬ  : "ಯೋ ಕುರುಕ್ಕ  ತಡ್ಕಳ್ಳಯ್ಯ. ನಿನ್ನ ನೆಗಡಿ ಪ್ರಾಬ್ಲಂ ಈಗ ಸರಿಹೋಗಿದೆ. ಇನ್ನು ಕಿವಿಯ ತೊಂದರೆ ಏನಿದೆಯೆಂದು ನೋಡೋಣ ಬಾ!"

ನಿರೋದ್ ಬಳಸಿ ಅಂತಾರೆ. ಬಸ್ನಲ್ಲಿ ಆಗುತ್ತಾ (ಕುರುಕ್ಕನ ಜೋಕ್ಸ್ )

ಜೋಕ್ಸ್ ಟೈಮ್ಸ್ ಮೇ-25-2012 

ಕುರುಕ್ಕ ಬಿಎಂಟಿಸಿ ಬಸ್ ನಲ್ಲಿ ಕೂತ. ಸೀಟ್ ನಲ್ಲಿ ಕೂತು ಸಿಗರೇಟ್ ಎಳೆಯೋಕೆ ಶುರು ಮಾಡಿದ.. ಅಲ್ಲಿಗೆ ಬಂದ ಕಂಡಕ್ಟರ್..
ಕಂಡಕ್ಟರ್: ಏಯ್, ಬುದ್ದಿ ಇದ್ಯಾ ನಿನಗೆ.. ಧೂಮಪಾನ ನಿಷೇಧಿಸಲಾಗಿದೆ ಎಂದು ಅಲ್ಲಿ ಬೋರ್ಡ್ ಹಾಕಿದ್ದು ಕಾಣಿಸಲ್ವಾ?
 ಕುರುಕ್ಕ: ಬೋರ್ಡ್ ನಲ್ಲಿ ಬರೆದಿದ್ದೆಲ್ಲಾ ಪಾಲಿಸಬೇಕಾ?
ಕಂಡಕ್ಟರ್: ಹೌದು ಮತ್ತೆ..
ಕುರುಕ್ಕ : ಅಲ್ಲೇ ಇನ್ನೊಂದು ಬೋರ್ಡ್ ಇದೆ ನೋಡಿ.. ನಿರೋದ್ ಬಳಸಿ ಅಂತಾ. ಅಲ್ಲಿ ಬರೆದ ಹಾಗೆ ಬಸ್ ನಲ್ಲಿ ನಿರೋದ್ ಬಳಸೋಕೆ ಆಗುತ್ತಾ?

ಕಿಡ್ನಿಸ್ಟೋನ್ ನಿಂದ ಬಳಲುತಿದ್ದೀರಾ? ಇದೊ ನಿಮಗಿದೆ ಇಲ್ಲೊಂದು ನಿವಾರಣೆಗೆ ಮನೆಮದ್ದು



 ಮೇ 25, 2012, ಆರೋಗ್ಯ ಟೈಮ್ಸ್

ಕಿಡ್ನಿಯಲ್ಲಿ ಕಲ್ಲು (ಕಿಡ್ನಿ ಸ್ಟೋನ್) ಬಂದರೆ ಅದನ್ನು ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ. ಆದರೆ calculusನಲ್ಲಿ 5mmನಷ್ಟು ಇದ್ದರೆ ಅದನ್ನು ಮನೆ ಮದ್ದಿನಿಂದ ಹೋಗಲಾಡಿಸಬಹುದಾಗಿದೆ.

ಈ ಕೆಳಗಿನ ವಿಧಾನಗಳು ಕಿಡ್ನಿಯಲ್ಲಿರುವ ಕಲ್ಲು ತೆಗೆಯಲು ಮಾತ್ರವಲ್ಲ, ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ತಡೆಯಲು ಸಹಕಾರಿಯಾಗಿದೆ.

1. ನೀರು: ಸಾಕಷ್ಟು ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದಲ್ಲಿ ನಿರಿನಂಶ ಕಡಿಮೆಯಾದರೆ ನಿಶ್ಯಕ್ತಿ, ಕಿಡ್ನಿಯಲ್ಲಿ ಕಲ್ಲು , ತ್ವಚೆ ಸೌಂದರ್ಯ ಹಾಳಾಗುವುದು ಮುಂತಾದ ಸಮಸ್ಯೆ ಉಂಟಾಗುತ್ತದೆ. ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡರೆ ದಿನಕ್ಕೆ 5-6 ಲೀಟರ್ ನೀರು ಕುಡಿದರೆ ಕಲ್ಲು ಮೂತ್ರದಲ್ಲಿ ಹೊರಹೋಗುವುದು.

2. ನೀರಿನಲ್ಲಿ ನೆನೆ ಹಾಕಿದ ಮೆಂತೆ: ಒಂದು ಚಮಚ ಮೆಂತೆಯನ್ನು ಒಂದು ಲೋಟ ನೀರಿನಲ್ಲಿ ನೆನೆ ಹಾಕಿ ಬೆಳ್ಳಗ್ಗೆ ತಿನ್ನಬೇಕು. ಈ ರೀತಿ ಮಾಡಿದರೆ ಕಿಡ್ನಿಯಲ್ಲಿರುವ ಕಲ್ಲು ಮಾತ್ರವಲ್ಲ ದೇಹದಲ್ಲಿರುವ ಕಷ್ಮಲಗಳನ್ನು ತೊಡೆದು ಹಾಕಲು ಸಹಕಾರಿಯಾಗಿದೆ.

3. ತಾಟಿನುಂಗು: ಇದನ್ನು ಪಾಮ್ ಫ್ರೂಟ್ ಅಂತ ಕೂಡ ಕರೆಯುತ್ತಾರೆ. ಇದರಿಂದ 'ತಾಲ್ ಮಿಶ್ರಿ' ಎಂಬ ಸಕ್ಕರೆ ತಯಾರಿಸಲಾಗುವುದು. ಇದನ್ನು ಒಂದು ರಾತ್ರಿ ನೀರಿನಲ್ಲಿ ಕಲೆಸಿ ಬೆಳಗ್ಗೆ ಎದ್ದು ಕುಡಿಯುವುದು ಒಳ್ಳೆಯದು. ಇದು ಸಿಗುವುದು ಸ್ವಲ್ಪ ಕಷ್ಟ. ಆದರೆ ಇದು ಕಿಡ್ನಿಯಲ್ಲಿರುವ ಕಲ್ಲು ನಿವಾರಣೆಗೆ ತುಂಬಾ ಸಹಕಾರಿಯಾಗಿದೆ. ಇಲ್ಲದಿದ್ದರೆ ತಾಟಿನುಂಗು ದಿನಾ ತಿನ್ನುವುದು ಕೂಡ ಒಳ್ಳೆಯದು.

4. ಬಾಳೆ ದಿಂಡು: ಬಾಳೆ ದಿಂಡಿನ ಒಳಭಾಗವನ್ನು ಪಲ್ಯ ಮಾಡಿ ತಿನ್ನಲಾಗುವುದು. ಇದು ಕಿಡಿಯಲ್ಲಿರುವ ಕಲ್ಲನ್ನು ಹೋಗಲಾಡಿಸಲು ಪರಿಣಾಮಕಾರಿಯಾದ ಮನೆ ಔಷಧಿಯಾಗಿದೆ.

5. ಕೊತ್ತಂಬರಿ ಸೊಪ್ಪು: ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದು ಕೂಡ ತುಂಬಾ ಒಳ್ಳೆಯದು.

ದಿನ ಬಳಕೆಯ ಈ ವಸ್ತುಗಳಲ್ಲಿದೆ ರೋಗಗಳ ಪರಿಹಾರ!

ಆರೋಗ್ಯ ಟೈಮ್ಸ್
 ಗಿಡ ಮೂಲಿಕೆಗಳನ್ನು ಬಳಸಿದರೆ ಕಾಯಿಲೆ ಗುಣ ಮುಖವಾಗುವುದರ ಜೊತೆಗೆ ಅತಿ ಮುಖ್ಯ ಪ್ರಯೋನಜವೆಂದರೆ ಇದರಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಆದ್ದರಿಂದಲೇ ವೈದ್ಯಕೀಯ ವೈಜ್ಞಾನ ಸಾಕಷ್ಟು ಮುಂದುವರೆದಿದ್ದರೂ ಆರ್ಯುವೇದದ ಔಷಧಿ ಇವತ್ತಿಗೂ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ.

ದಿನಬಳಕೆಯಲ್ಲಿ ಬಳಸುವ ಕೆಲ ವಸ್ತುಗಳು ಹೇಗೆ ಕಾಯಿಲೆ ಗುಣ ಪಡಿಸುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಯೋಣ ಬನ್ನಿ.


ಮಧುಮೇಹಕ್ಕೆ ಮನೆ ಮದ್ದು:

ಕರಿ ಬೇವಿನ ಎಲೆ: ಕರಿ ಬೇವಿನ ಎಲೆಯನ್ನು ದಿನನಿತ್ಯ ಬಳಸುತ್ತಿರುತ್ತೇವೆ. ಈ ಕರಿಬೇವು ಅಡುಗೆಗೆ ರುಚಿ ಮತ್ತು ಸುವಾಸನೆ ಕೊಡುವುದು ಮಾತ್ರವಲ್ಲ ಆರೋಗ್ಯಕ್ಕೆ ಒಳ್ಳೆಯದು. 3 ತಿಂಗಳವರೆಗೆ  8-10 ಕರಿಬೇವಿನ ಎಲೆಯನ್ನು ಪ್ರತಿದಿನ ಬೆಳ್ಳಗ್ಗೆ ತಿಂದರೆ ಮಧುಮೇಹವನ್ನು ತಡೆಗಟ್ಟುತ್ತದೆ ಅಲ್ಲದೆ ಇದು ತೂಕ ಇಳಿಸುವಲ್ಲಿ ತುಂಬಾ ಸಹಕಾರಿಯಾಗಿದೆ.

ಚಕ್ಕೆ: ಚಕ್ಕೆಯನ್ನು ದಿನವೂ ತಿಂದರೆ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ಅಲ್ಲದೆ ಪಲಾವ್ ಎಲೆ, ಅರಿಶಿಣ, ಬೆಳ್ಳುಳ್ಳಿ ಕೂಡ ಡಯಾಬಿಟಿಸ್ ಕಾಯಿಲೆಯನ್ನು ಬರದಂತೆ ತಡೆಯುವುದು.

ನೆಲ್ಲಿಕಾಯಿ: ನೆಲ್ಲಿ ಕಾಯಿ  ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕರಿಯಾಗಿದೆ. ಹಗಲಕಾಯಿ ಮತ್ತು ನೆಲ್ಲಿಕಾಯಿ ಹಾಕಿ ಜ್ಯೂಸ್ ಮಾಡಿ 2-3 ತಿಂಗಳು ಕುಡಿದರೆ ಉತ್ತಮ ಪರಿಣಾಮವನ್ನು ಪಡೆಯಬಹುದು.

ಕೆಮ್ಮು ಮತ್ತು ಶೀತಕ್ಕೆ ಮನೆ ಮದ್ದು:

ತುಳಸಿ: ತುಳಸಿ ಹಾಕಿ ಟೀ ಮಾಡಿ ಕುಡಿದರೆ ಅಥವಾ 1 ಚಮಚ ತುಳಸಿ ರಸಕ್ಕೆ 1/2 ಚಮಚ ಜೇನುಮತ್ತು 2 ಕಾಳು ಕರಿಮೆಣಸನ್ನು ಪುಡಿ ಮಾಡಿ ಹಾಕಿ ಮಿಶ್ರ ಮಾಡಿ ಕುಡಿಯ ಬೇಕು. ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಈ ರೀತಿ ಮಾಡಿದರೆ ಶೀತ ಮತ್ತು ಕೆಮ್ಮ ಕಡಿಮೆಯಾಗುವುದು.

ಶುಂಠಿ: ಕಾಫಿ ಅಥವಾ ಟೀ ಮಾಡುವಾಗ ಸ್ವಲ್ಪ ಶುಂಠಿ ಹಾಕಿ ಕುಡಿದರೆ ಅಥವಾ ಶುಂಠಿ ರಸಕ್ಕೆ ಸ್ವಲ್ಪ ಕರಿಮೆಣಸಿನ ಪುಡಿ ಮತ್ತು ಜೇನು ಸೇರಿಸಿ ಕುಡಿದರೆ ಕೆಮ್ಮು ನಿವಾರಣೆಯಾಗುತ್ತದೆ.

ಗಂಟಲು ತುರಿತ:
ಗಂಟಲಿನಲ್ಲಿ ತುರಿತ ಕಂಡು ಬಂದರೆ ಚಕ್ಕೆ ಟೀ ಮಾಡಿ ಕುಡಿದರೆ ಸಾಕು ಕಮ್ಮಿಯಾಗುವುದು.

ಗಾಯಗಳನ್ನು ಗುಣಪಡಿಸಲು ಮನೆಮದ್ದು:

ಚೆಂಡು ಹೂ: ಚೆಂಡು ಹೂವಿನ ಎಲೆಯನ್ನು ಕಿತ್ತು ಅದರ ರಸ ಹಿಂಡಿ ಗಾಯಕ್ಕೆ ಹಾಕಿದರೆ ಗಾಯ ಗುಣ ಮುಖವಾಗುವುದು.

ಅರಿಶಿಣ: ಅರಿಶಿಣ ಹಾಕಿದರೆ ಕೂಡ ಗಾಯ ಬೇಗನೆ ಗುಣಮುಖವಾಗುತ್ತದೆ. ಹಳ್ಳಿ ಕಡೆಗಳಲ್ಲಿ ಸಣ್ಣ ಪುಟ್ಟ ಗಾಯಗಳಿಗೆ ಆಸ್ಪತ್ರೆಗೆ ಹೋಗದೆ ಇದರಿಂದಲೇ ಗುಣಪಡಿಸುತ್ತಾರೆ.

ನಿಮಗೆ ವಯಸ್ಸು 30 ದಾಟಿದಯೇ ಮಧುಮೇಹ ಪರೀಕ್ಷೆ ಮಾಡಿಸಿ!



 ಮೇ 25, 2012, ಆರೋಗ್ಯ ಟೈಮ್ಸ್

ನಮ್ಮ ತಾತ ಮುತ್ತಾಂದಿರು ನೂರು ವರ್ಷಕ್ಕಿಂತ ಅಧಿಕ ಕಾಲ ಬಾಳಿರುವುದನ್ನು ಕೇಳಿದಾಗ ಅಥವಾ ಮನೆಯಲ್ಲಿ ಹಿರಿಯರಿದ್ದರೆ ಅವರು ಚಟುವಟಿಕೆಯಿಂದ ಓಡಾಡುವುದನ್ನು ನೋಡುವಾಗ ಈಗೀನ ಪೀಳಿಗೆಯವರಾದ ನಾವು ಇವರ ಹಾಗೆ ಇಷ್ಟು ಕಾಲ ಬದುಕಿರಲು ಸಾಧ್ಯವೇ? ಎಂಬ ಸಂಶಯ ಬಂದೇ ಬರುತ್ತದೆ. ಏಕೆಂದರೆ ಈವಾಗೆಲ್ಲಾ ವಯಸ್ಸು ಮೂವತ್ತು ದಾಟಿದರೆ ಸಾಕು ಕಾಯಿಲೆ ಕಸಾಲೆಗಳು ಬಂದು ಬಿಡುತ್ತವೆ. ಅದರಲ್ಲೂ ಮಧುಮೇಹದಂತಹ ಕಾಯಿಲೆಗಳು ಬರದಂತೆ ತುಂಬಾ ಎಚ್ಚರಿಕೆವಹಿಸಬೇಕು.

ನಮ್ಮ ಬದಲಾಗಿರುವ ಜೀವನ ಶೈಲಿಗಳು, ಮಾನಸಿಕ ಒತ್ತಡ, ಪರಿಸರ ಮಾಲಿನ್ಯ, ಆರೋಗ್ಯಕರವಲ್ಲದ ಆಹಾರ ಪದ್ಧತಿಗಳು ಚಿಕ್ಕ ಪ್ರಾಯದಲ್ಲಿಯೇ ನಮ್ಮನ್ನು ರೋಗಿಗಳನ್ನಾಗಿ ಮಾಡುತ್ತಿದೆ. ಈ ರೀತಿ ಉಂಟಾಗಲು ಮುಖ್ಯ ಕಾರಣ ನಮ್ಮ ಜೀವನ ಶೈಲಿ ಎಂಬುದರಲ್ಲಿ ಎರಡು ಮಾತಿಲ್ಲ. ಈ ಜೀವನ ಶೈಲಿ ಮಧುಮೇಹ ತರುವಲ್ಲಿ ಹೇಗೆ ಕಾರಣವಾಗುತ್ತದೆ ಎಂದು ನೋಡೋಣ ಬನ್ನಿ.

ಕೂತಲ್ಲೇ ಕೆಲಸ: ಈಗ ಪ್ರತಿಯೊಂದು ಕೆಲಸ ಕಾರ್ಯಗಳು ಕಂಪ್ಯೂಟರ್ ಮುಖಾಂತರವೇ ನಡೆಯುತ್ತಿವೆ. ಬೆಳಿಗ್ಗೆ ಕಂಪ್ಯೂಟರ್ ಎದುರು ಕುಳಿತರೆ ಏಳೋದು ರಾತ್ರಿನೇ. ಇದರಿಂದ ದೇಹಕ್ಕೆ ಯಾವುದೇ ವ್ಯಾಯಾಮವಿರುವುದಿಲ್ಲ. ಕುಳಿತುಕೊಂಡೇ ಮಾಡುವ ಕೆಲಸ ಇರುವವರಿಗೆ ವಾಕಿಂಗ್ ಅಥವಾ ಮೆಟ್ಟಿಲೇರುವುದು... ಇಂಥವೆಲ್ಲ ಬೇಕೇ ಬೇಕು. ಕುಳಿತೇ ಕೆಲಸ ಮಾಡುವವರು ಒಂದು ಗಂಟೆಗೊಮ್ಮೆಯಾದರೂ ಎದ್ದು ಅತ್ತಿತ್ತ ಹೋಗಿ, ನೀರು ಕುಡಿದು ಬಂದರೆ ಒಳಿತು. ಕೂತಲ್ಲೇ ಕೆಲಸ ಮಾಡುವುದರಿಂದ ಬೊಜ್ಜು ಹೆಚ್ಚುವುದು. ಈ ರೀತಿ ಮಾಡಿದರೆ ಮಧುಮೇಹ ಕಾಯಿಲೆಯನ್ನೂ ಕೂಡ ತಡೆಯಬಹುದು.

ಒತ್ತಡ: ಟಾರ್ಗೆಟ್, ಸ್ಪರ್ಧೆ ಅಂತ ನಮ್ಮ ಜೀವನನದ ಸಾಕಷ್ಟು ಭಾಗವನ್ನು ಒತ್ತಡದಲ್ಲಿಯೇ ಕಳಿಯುತ್ತೇವೆ. ಹೊರಗಿನಿಂದಲೂ ಬೆಲೆ ಏರಿಕೆ, ಸಂಸಾರ ತಾಪ್ರತಯಗಳು, ಕಚೇರಿಯಲ್ಲೂ ಮಿತಿ ಮೀರಿದ ಕೆಲಸ ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ, ನೇರವಾಗಿ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ ಮಾತ್ರವಲ್ಲದೆ, ಮಧುಮೇಹ ಹೆಚ್ಚಳಕ್ಕೂ ಕಾರಣವಾಗಿದೆ.

ಕುರುಕಲು ತಿಂಡಿ: ಟ್ರೆಂಡ್ ನ ಹೆಸರಿನಲ್ಲಿ ಪಿಜ್ಜಾ, ಪಾಸ್ತಾ, ನೂಡಲ್ಸ್, ಹೀಗೆ ಅಧಿಕ ಪೋಷಕಾಂಶಗಳಿಲ್ಲದ ಆಹಾರಕ್ಕೆ ಬಲಿಯಾಗುತ್ತಿದ್ದೇವೆ. ಬಾಯಿಗೆ ರುಚಿ ಬೇಕೆಂದು ಕುರುಕಲು ತಿಂಡಿ ತಿಂದರೆ ದೇಹದ ಆರೋಗ್ಯ ಬೇಗನೆ ಹಾಳಾಗುತ್ತದೆ. ಆದ್ದರಿಂದ ಆದಷ್ಟು ಆರೋಗ್ಯಕರ ಆಹಾರಕ್ರಮ ಪಾಲಿಸುವುದು ಒಳ್ಳೆಯದು.

ಅಲ್ಲದೆ ಮಧುಮೇಹ ಬರದಂತೆ ತಡೆಯಲು ಈ ಕೆಳಗಿನ ಮುನ್ನಚ್ಚರಿಕೆ ಕ್ರಮ ಅನುಸರಿಸುವುದು ಒಳ್ಳೆಯದು.

* ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಂಡು, ಡಯಾಬಿಟಿಸ್ ಇದೆಯೇ ಎಂದು ತಿಳಿದುಕೊಳ್ಳಬೇಕು. ಡಯಾಬಿಟಿಸ್ ಆರಂಭವಾದಾಗಲೇ ಇದು ಪತ್ತೆಯಾದರೆ, ಅದನ್ನು ಗುಣಪಡಿಸುವುದು ಸುಲಭ. ಇಲ್ಲದಿದ್ದರೆ ಡಯಾಬಿಟಿಸ್ ಅನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ.

* ತುಂಬಾ ತೂಕ ಇರುವವರು ತೂಕ ಇಳಿಸಿಕೊಳ್ಳಬೇಕು. ಬೊಜ್ಜು ಕಡಿಮೆಯಾದರೆ ಡಯಾಬಿಟಿಸ್ ಬರುವ ಸಾಧ್ಯೆತೆ ಕೂಡ ಕಡಿಮೆಯಾಗುತ್ತದೆ. ಜೀವನಶೈಲಿ - ಆಹಾರ ಸೇವನೆಯಲ್ಲಿ ಬದಲಾವಣೆ ಮತ್ತು ನಿಯಮಿತ ವ್ಯಾಯಾಮ, ಸೊಪ್ಪು-ತರಕಾರಿ, ದವಸ ಧಾನ್ಯದ ಆಹಾರಗಳನ್ನು ಧಾರಾಳವಾಗಿ ಸೇವಿಸಬೇಕು.

* ಕುರುಕಲು ತಿಂಡಿಯಿಂದ ದೂರ ಇರಬೇಕು.

* ದಿನಕ್ಕೆ ಕನಿಷ್ಠ ಅರ್ಧಗಂಟೆಯಂತೆ ಪ್ರತಿ ದಿನ ಅಥವಾ ವಾರದಲ್ಲಿ 5 ದಿನವಾದರೂ ವ್ಯಾಯಾಮ ಮಾಡಬೇಕು.

* ಸಾಧ್ಯವಿರುವಾಗಲೆಲ್ಲಾ ನಡೆಯಬೇಕು. ಲಿಫ್ಟ್ ಬಳಕೆಗೆ ಹೋಗಬಾರದು.

* ಮಾನಸಿಕ ಒತ್ತಡ ನಿವಾರಣೆಗಾಗಿ ಯೋಗ, ಪ್ರಾಣಯಾಮ ಅಥವಾ ಧ್ಯಾನ ಮಾಡಬೇಕು.

* ಕೆಟ್ಟ ಚಟಗಳಿಂದ ದೂರವಿರಬೇಕು.

ಅರಿವಿಲ್ಲದೆ ಅಪಾಯವನ್ನು ಆಹ್ವಾನಿಸುತ್ತಿರುವ ಫೇಸ್ ಬುಕ್ ಎಂಬ ಸಾಮಾಜಿಕ ತಾಣ

 

, 25 May 2012 ಮಂಜೇಶ್ವರ್ ಟೈಮ್ಸ್ 

ಈಗಿನ ಯುವಜನತೆ ಅದರಲ್ಲೂ ಹದಿ ಹರೆಯಕ್ಕೆ ಕಾಲಿಟ್ಟ ಮಕ್ಕಳು ಆರ್ಕುಟ್, ಫೇಸ್ ಬುಕ್‌ನಂತಹ ಸಾಮಾಜಿಕ ತಾಣಗಳಲ್ಲಿ ಹೆಚ್ಚಾಗಿ ಕಾಲ ಕಳೆಯುತ್ತಿರುವುದು ಆತಂಕಕಾರಿ ಸಂಗತಿ. ಯಾಕೆಂದರೆ ಸಾಮಾಜಿಕ ತಾಣಗ ಳಲ್ಲಿ ಮುಖ ಪರಿಚಯವಿಲ್ಲದ ಯಾರದ್ದೋ ಜೊತೆ ಸ್ನೇಹ ಬೆಳೆಸುವ ಮಕ್ಕಳು ತಮಗೆ ಅರಿವಿಲ್ಲದೆಯೇ ಅಪಾಯವನ್ನು ಆಹ್ವಾನಿಸು ತ್ತಾರೆ. ಇಲ್ಲಿ ಪ್ರೀತಿ, ಪ್ರೇಮ, ಸ್ವೇಚ್ಛೆ, ಸ್ವಚ್ಛಂದ ಕಾಮ ಎಲ್ಲವನ್ನೂ ಶೇರ್ ಮಾಡುತ್ತಾರೆ. ಫೇಸ್ ಬುಕ್ ದಿನಕಳೆದಂತೆ ಸಾಮಾಜಿಕ ತಾಣವಾಗಿ ಉಳಿದಿಲ್ಲ, ಅದೊಂದು ಸಲಿಂಗ ಕಾಮಿಗಳ, ವೇಶ್ಯೆಯರ, ತಲೆಹಿಡುಕರ ಅಡ್ಡೆಯಾಗುತ್ತಿದೆ. ಇಲ್ಲಿ ಯಾರ ಮುಖವನ್ನು ಯಾರಿಗೋ ಅಂಟಿಸಿ ಯಾರದ್ದೋ ಪ್ರೋಫೈಲ್ ಹಾಕಬಹುದು. ಇದನ್ನೇ ಸತ್ಯವೆಂದು ನಂಬಿ ಮೂರ್ಖರಾಗುವ ಅದೆಷ್ಟೋ ಮಂದಿ ಇರುತ್ತಾರೆ. ಚಂದದ ಹುಡುಗಿಯರ ಫೊಟೋ ಹಾಕಿದರೆ ಸಾಕು, ಅದಕ್ಕೆ ನೂರಾರು ಕಮೆಂಟ್ಸ್‌ಗಳು. ವಾಸ್ತವವಾಗಿ ಆ ಫೊಟೋ ಆಕೆ ಯದ್ದೇ, ಅಲ್ಲವೇ ಎನ್ನುವುದೂ ಕೂಡಾ ತಿಳಿದಿರು ವುದಿಲ್ಲ. ವೇಶ್ಯೆಯರು, ಸಲಿಂಗ ಕಾಮಿಗಳು ಇಂಥ ಸಾಮಾಜಿಕ ತಾಣಗಳನ್ನು ಹೆಚ್ಚಾಗಿ ಆಶ್ರಯಿಸಿ ಕೊಳ್ಳುತ್ತಿದ್ದು, ಭರ್ಜರಿ ವ್ಯವಹಾರವನ್ನೂ ಮಾಡು ತ್ತಿದ್ದಾರೆ ಎನ್ನಲಾಗುತ್ತಿದೆ. ಭಾರತ ಹೊರತುಪಡಿಸಿ ಮುಸ್ಲಿಂ ರಾಷ್ಟ್ರಗಳಲ್ಲಿ ಫೇಸ್‌ಬುಕ್ ಅನ್ನು ಈಗಾ ಗಲೇ ನಿಷೇಧಿಸಲಾಗಿದೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಅದನ್ನು ವ್ಯಾಪಕ ಪ್ರಚಾರ ಮಾಡಲಾಗು ತ್ತಿದೆ. ಶಾಲೆ, ಕಾಲೇಜ್ ಕಲಿಯುವ ಹೆಣ್ಣುಮ ಕ್ಕಳು ಮನೆಯಲ್ಲಿ ಕಂಪ್ಯೂಟರ್, ಇಂಟರ್‌ನೆಟ್ ಇರದಿದ್ದರೆ ಸೈಬರ್ ಕೆಫೆಯಲ್ಲಿ ಒಂದು ಗಂಟೆ ಯಾರೊಡನೆಯೋ ಚಾಟಿಂಗ್ ಮಾಡಿ ಮನೆಗೆ ಹಿಂತಿರುಗುತ್ತಾರೆ. ಇದಕ್ಕೆ ಸ್ಪೆಷಲ್ ಕ್ಲಾಸ್ ಎಂದು ಕಾರಣ ಹೇಳುವವರೇ ಹೆಚ್ಚು. ಆದ್ದರಿಂದ ಪೋಷಕರೇ ಜಾಗೃತರಾಗಿ. ನಿಮ್ಮ ಮಕ್ಕಳು ತಡವಾಗಿ ಮನೆ ಸೇರುತ್ತಿದ್ದರೆ, ರೂಮಿನಲ್ಲಿ ಇಂಟರ್‌ನೆಟ್ ಅಳವಡಿಸಿ ಬಾಗಿಲು ಮುಚ್ಚಿ ಹೆಚ್ಚಿನ ಸಮಯ ಕಳೆಯುತ್ತಿದ್ದರೆ ಫೇಸ್‌ಬುಕ್ ಹುಚ್ಚು ಹಿಡಿದಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ. ಅನ್ಯಾಯವಾಗಿ ಮಕ್ಕಳು ಸಲಿಂಗಿ ಗಳ, ವೇಶ್ಯೆಯರ ಜಾಲದಲ್ಲಿ ಸಿಲುಕಿಕೊಳ್ಳುವು ದನ್ನು ತಡೆಯಿರಿ.
ಶಶಿಕಾಂತ್, ರಥಬೀದಿ

ಮತ್ತೆ ತೆರೆದುಕೊಂಡ ನೀಲಿ ಚಿತ್ರ ವೀಕ್ಷಣೆ ಪ್ರಕರಣ


  ಮೇ 25, 2012,
 Indecent Video Watching By Ministers Case Reopened
 
ಬೆಂಗಳೂರು : ಕರ್ನಾಟಕ ವಿಧಾನಸಭೆಯಲ್ಲಿ ಫೆಬ್ರವರಿ 7ರಂದು ಅಶ್ಲೀಲ ವಿಡಿಯೋ ನೋಡಿ, ಇಡೀ ದೇಶದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಮೂವರು ಸಚಿವರಾದ ಲಕ್ಷ್ಮಣ ಸವದಿ, ಸಿಸಿ ಪಾಟೀಲ ಮತ್ತು ಕೃಷ್ಣ ಪಾಲೇಮಾರ್ ವಿರುದ್ಧದ ಪ್ರಕರಣ ಕೋರ್ಟಿನಲ್ಲಿ ಮತ್ತೆ ತೆರೆದುಕೊಂಡಿದೆ.

ಸದನ ಸಮಿತಿಯಿಂದ ಕ್ಲೀನ್ ಚಿಟ್ ಪಡೆದು, ಮ್ಯಾಜಿಸ್ಟ್ರೇಟ್‌ರಿಂದಲೂ ಬಚಾವಾಗಿ, ಎಲ್ಲ ಮುಗಿಯಿತಲ್ಲ ಎಂದು ಹಾಯಾಗಿದ್ದ ಮೂವರು ಸಚಿವರ ವಿರುದ್ಧ ತ್ವರಿತ ಗತಿ ಸೆಷನ್ಸ್ ಕೋರ್ಟಿನಲ್ಲಿ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಆನಂದ ಯದವಾಡ, ದೀಪಕ್ ಸಿಎನ್, ಫಣಿ ಸಾಯಿ, ಮಂಜುನಾಥ ಕೆ ಎಂಬುವವರು ಮೂವರು ಕಳಂಕಿತ ಸಚಿವರ ವಿರುದ್ಧ ಸೆಷನ್ಸ್ ಕೋರ್ಟಿನಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.

1ನೇ ಎಸಿಎಂಎಂ ನ್ಯಾಯಾಧೀಶ ವೆಂಕಟೇಶ ಹುಲಗಿ ಹೇಳಿದ್ದೇನೆಂದರೆ, ಸಚಿವರು ವಿಧಾನಸಭೆಯಲ್ಲಿ ಏನೇ ಮಾಡಿದರೂ ಸಂವಿಧಾನಾತ್ಮಕ ರಕ್ಷಣೆ ದೊರೆಯುವುದರಿಂದ ಅವರ ಮೇಲೆ ಕ್ರಿಮಿನಲ್ ಕೇಸು ನಿಲ್ಲುವುದಿಲ್ಲ. ಈ ಆದೇಶದ ವಿರುದ್ಧದ ಮೇಲ್ಮನವಿ ಈಗ ನೆಷನ್ಸ್ ನ್ಯಾಯಾಧೀಶ ಎಸ್.ಕೆ. ಒಂಟಿಗೋಡಿ ಅವರ ಮುಂದೆ ಮೇ 29ರಂದು ವಿಚಾರಣೆಗೆ ಬರಲಿದೆ.

ನಾಲ್ವರು ಫಿರ್ಯಾದುದಾರರು ವಾದಿಸುವುದೇನೆಂದರೆ, ಕರ್ನಾಟಕ ವಿಧಾನಸಭೆಯಲ್ಲಿ ಮೂವರು ಸಚಿವರು ನೀಲಿ ಚಿತ್ರ ಬಳಸಿದ್ದು ಸಾಧಾರಣ ಕ್ರೈಂ ಆಗಿದ್ದು, ಅದಕ್ಕೆ ಸಂವಿಧಾನಾತ್ಮಕವಾಗಿ ರಕ್ಷಣೆ ಸಿಗುವುದಿಲ್ಲ. ಆದ್ದರಿಂದ ಅವರ ವಿರುದ್ಧ ಪೊಲೀಸರಿಂದ ಕ್ರಮ ಜರುಗಿಸಬೇಕು. ಸಚಿವರ ವಿರುದ್ಧ ಎಫ್ಐಆರ್ ದಾಖಲು ಮಾಡಲು ಪೊಲೀಸರು ನಿರಾಕರಿಸುತ್ತಿರುವುದರಿಂದ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಪ್ರಕರಣದಲ್ಲಿ ಸಾಂವಿಧಾನಾತ್ಮಕ ರಕ್ಷಣೆಯನ್ನು ಸರಿಯಾಗಿ ಅರ್ಥೈಸಲಾಗಿಲ್ಲ ಎಂದು ಹೇಳಿರುವ ಫಿರ್ಯಾದುದಾರರು, ಸಮಾಜದ ಒಳಿತಿಗಾಗಿ ಮೂವರ ವಿರುದ್ಧ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ. ಅವರ ಪರವಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಕೆ.ವಿ. ಧನಂಜಯ ಅವರು ವಾದಿಸುತ್ತಿದ್ದಾರೆ.

ಅಶ್ಲೀಲ ಚಿತ್ರ ಹೊಂದಿ, ನೋಡಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆ, 1860ಯ ಸೆಕ್ಷನ್ 292ರ ಅಡಿಯಲ್ಲಿ, ಅಶ್ಲೀಲ ಚಿತ್ರ ಎಂದು ಗೊತ್ತಿದ್ದರೂ ಇತರರಿಗೆ ಹಂಚಿದ್ದಕ್ಕಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ಯ ಸೆಕ್ಷನ್ 67ರ ಅಡಿಯಲ್ಲಿ ಮತ್ತು ಮಹಿಳೆಯರನ್ನು ಅತ್ಯಂತ ಕೀಳುಮಟ್ಟದಲ್ಲಿ ನೋಡಿದ್ದಕ್ಕಾಗಿ ಮತ್ತು ಪ್ರತಿಬಿಂಬಿಸಿದ್ದಕ್ಕಾಗಿ ಇನ್‌ಡೀಸೆಂಟ್ ರೆಪ್ರೆಸೆಂಟೇಷನ್ ಆಫ್ ವಿಮೆನ್ (ಪ್ರಾಹಿಬಿಷನ್) ಆಕ್ಟ್ ಅಡಿಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಮನವಿ ಮಾಡಲಾಗಿದೆ.

ಅಕ್ರಮ ಆಸ್ತಿ ಸಂಪಾದನೆ: ಸಿಬಿಐನಿಂದ ಸಂಸದ ಜಗನ್ ವಿಚಾರಣೆ; ಬಂಧನ ಸಾಧ್ಯತೆ

ಅಕ್ರಮ ಆಸ್ತಿ ಸಂಪಾದನೆ: ಸಿಬಿಐನಿಂದ ಸಂಸದ ಜಗನ್ ವಿಚಾರಣೆ; ಬಂಧನ ಸಾಧ್ಯತೆ
 


  ಮೇ -25-2012

ಹೈದ್ರಾಬಾದ್: ಅಕ್ರಮ ಆಸ್ತಿ ಸಂಪಾದನೆಯ ಹಿನ್ನೆಲೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್‌ನ ಅಧ್ಯಕ್ಷ ಹಾಗೂ ಕಡಪ ಕ್ಷೇತ್ರದ ಸಂಸದ ವೈ.ಎಸ್. ಜಗನ್‌ಮೋಹನ್ ರೆಡ್ಡಿಯನ್ನು ಸಿಬಿಐ ಇಂದು ವಿಚಾರಣೆಗೊಳಪಡಿಸುತ್ತಿದ್ದು, ಜಗನ್‌ಮೋಹನ್ ರೆಡ್ಡಿ ಸಿಬಿಐನಿಂದ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಜಗನ್ ಮೋಹನ್ ರೆಡ್ಡಿ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಇಂದು ವಿಚಾರಣೆಗೆ ಆಗಮಿಸಲು ಸಿಬಿಐ ಜಗನ್‌ಮೋಹನ್ ರೆಡ್ಡಿಗೆ ಬುಲಾವ್ ನೀಡಿತ್ತು.
ಅದರಂತೆ ಹೈದ್ರಾಬಾದ್‌ನ ತನ್ನ ಲೋಟಸ್ ಪಾಂಡ್ ನಿವಾಸದಿಂದ ದಿಲ್‌ಖುಷ್ ಗೆಸ್ಟ್ ಹೌಸ್‌ಗೆ ತೆರಳಿದ ಜಗನ್‌ಮೋಹನ್ ರೆಡ್ಡಿ ಅಲ್ಲಿ ಸಿಬಿಐ ವಿಚಾರಣೆ ಎದುರಿಸುತ್ತಿದ್ದಾರೆ. ಇಂದು ಅವರು ಸಿಬಿಐಯಿಂದ ಬಂಧನಕ್ಕೊಳಗಾಗುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

സമഗ്ര വികസനം കാസര്‍കോട്ടുകാര്‍ക്ക് ഏറെ പ്രതീക്ഷകള്‍ നല്‍കുന്നു: പി.ബി.അബ്ദുല്‍ റസാഖ് എം.എല്‍.എ





may-25-2012 manjeshwarTimes
kasaragod.com, news, vartha, kasaragodvartha, kasaragodnews കാസര്‍കോട്: കാസര്‍കോടിന്റെ പിന്നോക്കാവസ്ഥ പരിഹരിക്കാന്‍ മുന്‍ ചീഫ് സെക്രട്ടറി പി.പ്രഭാകരന്‍ ചെയര്‍മാനായി കമ്മീഷനെ നിയമിച്ചതില്‍ യു.ഡി.എഫ്. സര്‍ക്കാറിനെയും മുഖ്യമന്ത്രി ഉമ്മന്‍ചാണ്ടിയെയും പി.ബി.അബ്ദുല്‍ റസാഖ് എം.എല്‍.എ. അഭിനന്ദിച്ചു. പിന്നോക്കം നില്‍ക്കുന്ന കാസര്‍കോട് ജില്ലയുടെ സമഗ്ര പുരോഗതി ലക്ഷ്യമാക്കി യു.ഡി.എഫ്. സര്‍ക്കാര്‍ സ്വീകരിക്കുന്ന നടപടികളില്‍ കാസര്‍കോട് ജില്ലക്കാര്‍ക്ക് അഭിമാനാര്‍ഹമായ നേട്ടങ്ങള്‍ സമ്മാനിക്കുന്നതാണെന്നും എം.എല്‍.എ. പറഞ്ഞു.

കാസര്‍കോട് ജില്ലയുടെ സമഗ്ര പുരോഗതിക്കായി ഉമ്മന്‍ചാണ്ടിയുടെ നേതൃത്വത്തിലുള്ള യു.ഡി.എഫ്. സര്‍ക്കാര്‍ പ്രതിജ്ഞാ ബദ്ധമാണെന്ന് തെളിയിക്കുന്നതാണ് കമ്മീഷന്റെ നിയമനമെന്ന് ഉംറ നിര്‍വ്വഹിക്കാനായി മക്കയിലുള്ള എം.എല്‍.എ. പ്രസ്താവനയില്‍ പറഞ്ഞു.

കാസര്‍കോട് ജില്ലയില്‍ വര്‍ഗ്ഗീയ സംഘര്‍ഷങ്ങള്‍ ഉള്‍പ്പെടെ മുഴുവന്‍ അക്രമ സംഭവങ്ങളും അവസാനിപ്പിച്ച് തീര്‍ത്തും സമാധാനപരമായ അന്തരീക്ഷം ജില്ലയില്‍ സംജാതമാക്കുന്നതിന് പ്രത്യേക പോലീസ് പാക്കേജ് അനുവദിച്ചത് ഏറെ ആശ്വാസകരമാണ്. കെ.പി.സി.സി. പ്രസിഡണ്ട് രമേശ് ചെന്നിത്തലയും വ്യവസായ വകുപ്പ് മന്ത്രി പി.കെ.കുഞ്ഞാലിക്കുട്ടിയും ജില്ലയിലെ യു.ഡി.എഫ്. നേതാക്കളും ജില്ലയുടെ പിന്നോക്കാവസ്ഥ ഉള്‍പ്പെടെയുള്ള വിഷയങ്ങള്‍ മുഖ്യമന്ത്രിയുമായി കഴിഞ്ഞ ദിവസം ചര്‍ച്ച നടത്തിയിരുന്നു. മുഖ്യമന്ത്രി തീര്‍ത്തും അനുകൂലമായ സമീപനം സ്വീകരിച്ചതിന്റെ ഫലമായി സമഗ്ര വികസനം ലക്ഷ്യമാക്കി കമ്മീഷനെ നിയമിച്ചുകൊണ്ട് മന്ത്രി സഭ എടുത്ത തീരുമാനങ്ങള്‍ കാസര്‍കോട്ടുകാര്‍ക്ക് ഏറെ പ്രതീക്ഷകള്‍ നല്‍കുന്നതാണെന്ന് എം.എല്‍.എ.പറഞ്ഞു.

വാര്‍ത്ത ശേഖരിക്കാന്‍ പോലീസ് സ്റ്റേഷനിലെത്തിയ മാധ്യമപ്രവര്‍ത്തകര്‍ക്ക് സി ഐ യുടെ വിലക്ക്


   2012-05-25 manjeshwarTimes

kasaragod.com, news, vartha, kasaragodvartha, kasaragodnews കാസര്‍കോട് : വാര്‍ത്ത ശേഖരിക്കാന്‍ പോലീസ് സ്റ്റേഷനിലെത്തിയ മാധ്യമപ്രവര്‍ത്തകര്‍ക്ക് സി ഐ യുടെ വിലക്ക്. ഇന്നു രാവിലെ കാസര്‍കോട് ടൗണ്‍ പോലീസ് സ്റ്റേഷനിലെത്തിയ മാധ്യമ പ്രവര്‍ത്തകരെയാണ് സി ഐ യുടെ വിലക്കുണ്ടെന്ന് പറഞ്ഞ് പാറാവുകാരന്‍ തടഞ്ഞത്. സാധാരണ പോലീസ് സ്റ്റേഷനില്‍ എത്തി വാര്‍ത്ത ശേഖരിക്കുന്ന മാധ്യമപ്രവര്‍ത്തകര്‍ ഇന്നു രാവിലെയും വാര്‍ത്ത ശേഖരിക്കാന്‍ പോയതായിരുന്നു. പോലീസ് സ്റ്റേഷനില്‍ കയറരുതെന്നും, വാര്‍ത്ത വേണമെങ്കില്‍ സി ഐ വന്നതിനു ശേഷം ചോദിച്ചാല്‍ മതിയെന്നും പാറാവുകാരനും, ചില പോലീസുകാരും മാധ്യമ പ്രവര്‍ത്തകരോട് പറഞ്ഞു. കാരണമന്വേഷിച്ചപ്പോള്‍ തങ്ങള്‍ക്കൊന്നും അറിയില്ലെന്ന മറുപടിയാണ് ലഭിച്ചത്. തുടര്‍ന്ന് സി ഐ ബാബു പെരിങ്ങേത്തുമായി ഫോണില്‍ ബന്ധപ്പെട്ടപ്പോള്‍ താന്‍ അറിയാതെ ഒരു കവര്‍ച്ചയുടെ വാര്‍ത്ത പത്രത്തില്‍ വന്നതിനെത്തുടര്‍ന്നാണ് വിലക്കെന്ന് അറിയിക്കുകയായിരുന്നു.

ಕೇರಳದಲ್ಲಿ ಲೀಟರ್ ಪೆಟ್ರೋಲ್ಗೆ 1.23ರು ಕಮ್ಮಿ



  ಮೇ 25, 2012, 
 Kerala Waives Sales Tax On Latest Petrol Hike
ತಿರುವನಂತಪುರಂ,: ಪೆಟ್ರೋಲ್ ದರ ಏರಿಕೆ ಬಿಸಿ ಎಲ್ಲೆಡೆ ವ್ಯಾಪಿಸುತ್ತಿದ್ದರೆ ಪಕ್ಕದ ರಾಜ್ಯ ಕೇರಳದಲ್ಲಿ ಮಾತ್ರ ಕೊಂಚ ತಂಪು ಹವೆ ಬೀಸುತ್ತಿದೆ. ಥ್ಯಾಂಕ್ಸ್ ಟು ಊಮ್ಮನ್ ಚಾಂಡಿ ಸರ್ಕಾರ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಗುರುವಾರ(ಮೇ.24) ದಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಹಿಂಪಡೆದಿದೆ.

"ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಯುಡಿಎಫ್ ಸರ್ಕಾರ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಜನರಿಗೆ ಸ್ವಲ್ಪವಾದರೂ ನೆಮ್ಮದಿ ನೀಡಬೇಕು ಎಂದು ನಿರ್ಧರಿಸಿ ಮಾರಾಟ ತೆರಿಗೆಯನ್ನು ಹಿಂಪಡೆದಿದ್ದೇವೆ. ಇದರಿಂದ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 1.23 ರು ಇಳಿಕೆಯಾಗಲಿದೆ" ಎಂದು ಕೇರಳದ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಹೇಳಿದ್ದಾರೆ.

ಚಾಂಡಿ ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ 218 ಕೋಟಿ ರು ನಷ್ಟವಾಗಲಿದೆ. ಆದರೆ, ಜನರ ವಿಶ್ವಾಸ ಗಳಿಸಲಿದೆ. ಇದಲ್ಲದೆ ಅನಗತ್ಯ ಖರ್ಚು ವೆಚ್ಚಕ್ಕ ಕಡಿವಾಣ ಹಾಕಲು ನಿರ್ಧರಿಸಿರುವ ಚಾಂಡಿ, ಸರ್ಕಾರಿ ಕಚೇರಿಗಳಲ್ಲಿ ಪೆಟ್ರೋಲ್ ಬಳಕೆ ಬಗ್ಗೆ ನಿಗಾವಹಿಸಲು ಯೋಜಿಸಿದ್ದಾರೆ.

ಯುಪಿಎ ಸರ್ಕಾರ ಪೆಟ್ರೋಲ್ ಬೆಲೆ 7.54 ರು/ಲೀಟರ್ ಗೆ ಏರಿಸಿದ್ದು, ಡೀಸೆಲ್ ಹಾಗೂ ಇತರೆ ಇಂಧನಗಳ ಬೆಲೆಯನ್ನು ಏರಿಸುವ ಸಾಧ್ಯತೆಯಿದೆ. ಪೆಟ್ರೋಲ್ ಬೆಲೆ 2 ರು ಇಳಿಕೆ ಮಾಡುವ ಬಗ್ಗೆ ಸುದ್ದಿ ಹರಿದಾಡಿದೆ.

ಉರಿಯುವ ಬದುಕಿಗೆ ಪೆಟ್ರೋಲ್ ಸುರಿದ ಸರಕಾರ


  ಮೇ -25-2012

ತಾನೇನು ಮಾಡುತ್ತಿದ್ದೇನೆನ್ನುವುದು ಸ್ವತಃ ಯುಪಿಎ ಸರಕಾರಕ್ಕಾದರೂ ಗೊತ್ತಿದೆಯೆ? ಕೇಂದ್ರ ಸರಕಾರದ ದೌರ್ಬಲ್ಯವನ್ನು ಬಳಸಿಕೊಂಡು ಆಯಿಲ್ ಕಂಪೆನಿಗಳು ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದೆ. ರೂಪಾಯಿಯ ಮೌಲ್ಯ ಪಾತಾಳ ಕಾಣುತ್ತಿದ್ದ ಹಾಗೆಯೇ, ತಮ್ಮನ್ನು ತಾವು ಉಳಿಸಿಕೊಳ್ಳುವುದಕ್ಕಾಗಿ ರಾತ್ರೋ ರಾತ್ರಿ, ಜನರ ಬದುಕಿಗೆ ಬೆಂಕಿ ಇಟ್ಟಿದೆ. ಇಳಿದದ್ದು ಕೇವಲ ರೂಪಾಯಿಯ ಮೌಲ್ಯ ಮಾತ್ರವಲ್ಲ, ನಮ್ಮ ಸರಕಾರದ ಮೌಲ್ಯ, ಜನಸಾಮಾನ್ಯರ ಜೀವದ ಮೌಲ್ಯ, ಎಲ್ಲವೂ ಪಾತಾಳ ಕಚ್ಚಿರುವುದರ ಸೂಚನೆಯಿದು. ಇಲ್ಲವೆಂದರೆ, ಏಕಾಏಕಿ ಈ ಪರಿಯಲ್ಲಿ ಪೆಟ್ರೋಲ್ ದರವನ್ನು ಏರಿಸುವ ಸಾಹಸಕ್ಕೆ ಇಳಿಯುತ್ತಿರಲಿಲ್ಲವೇನೋ.ಈ ಏರಿಕೆಯಿಂದಾಗಿ ಬೆಂಗಳೂರಿನಲ್ಲಿ ಹೊಸದರ ಲೀಟರ್‌ಗೆ 81.02ನ್ನು ತಲುಪಿದೆ. ಬಹುಶಃ ದೇಶದಲ್ಲೇ ಪೆಟ್ರೋಲ್‌ಗೆ ಅತ್ಯಧಿಕ ದರವಿರುವುದು ಕರ್ನಾಟಕದಲ್ಲಿ.ಕಂಪೆನಿಗಳ ದುರಾಸೆ ಇಲ್ಲಿಗೆ ಮುಗಿಯುತ್ತದೆ ಎನ್ನಲಾಗುವುದಿಲ್ಲ.ಮುಂದೆ ಡೀಸೆಲ್‌ಗೂ ಬೆಲೆಯೇರಿಕೆಯಾಗುವ ಸೂಚನೆಯಿದು.ಹಾಗೆಯೇ ಎಲ್‌ಪಿಜಿಯೂ ಸ್ಫೋಟಗೊಳ್ಳಲು ಕಾಯುತ್ತಿದೆ.ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆಯೆಂದರೆ ಅದೊಂದು ಆಹಾರ ಸರಪಣಿ. ಒಂದರ ಹಿಂದೆ ಮತ್ತೊಂದು ಎಂಬಂತೆ ಬೆಲೆಯೇರಿಕೆಯಾಗುತ್ತಲೇ ಹೋಗುತ್ತದೆ.
ತೈಲ ಬೆಲೆಯೇರಿಕೆಯನ್ನು ತೋರಿಸಿ, ವಾಹನಗಳ ಸಾಗಾಟ ಬೆಲೆ, ಆಟೋ, ಬಸ್ ಪ್ರಯಾಣ ಬೆಲೆ ಏರುತ್ತದೆ. ಸರಕು ಸಾಗಣೆ ದುಬಾರಿಯಾದಾಗ ತನ್ನಷ್ಟಕ್ಕೆ ಸರಕುಗಳ ಬೆಲೆಯೂ ಏರುತ್ತದೆ. ದಿನಸಿ, ತರಕಾರಿ ಕೈ ಸುಡತೊಡಗುತ್ತದೆ. ಈ ಬಾರಿಯ ಬೆಲೆಯೇರಿಕೆಯಂತೂ ಆಘಾತಕಾರಿ.ಇಂತಹದೊಂದು ಸ್ಫೋಟಕ ನಿರ್ಧಾರವನ್ನು ಯುಪಿಎ ಯಾವ ಕಾರಣಕ್ಕೆ ತೆಗೆದುಕೊಂಡಿತು, ಅದರ ಬೆನ್ನಿಗೆ ನಿಂತಿತು ಎನ್ನುವುದೇ ಅಚ್ಚರಿಯ ವಿಷಯ. ಯುಪಿಎ ಈಗಾಗಲೇ ಮೂರನೆ ವರ್ಷ ಪೂರೈಸಿದೆ. ಚುನಾವಣೆ ಹತ್ತಿರ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಇಂತಹ ತೀರ್ಮಾನಕ್ಕೆ ರೂಪಾಯಿ ಬೆಲೆ ಇಳಿದದ್ದಷ್ಟೇ ಕಾರಣ ಎಂದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವೆ?
ನಮಗೆಲ್ಲ ತಿಳಿದಿರುವಂತೆ ಪೆಟ್ರೋಲ್‌ನ ನಿಜವಾದ ಬೆಲೆ ಸುಮಾರು 45 ರೂ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೇರಿದ ವಿವಿಧ ತೆರಿಗೆಗಳ ಪರಿಣಾಮವಾಗಿ ಬೆಲೆ 80ರೂ.ವನ್ನು ತಲುಪುತ್ತದೆ. ಹಾಗೆಯೇ ಡೀಲರ್‌ಗಳ ಕಮಿಶನ್‌ಗಳನ್ನೂ ಜನರೇ ತೆರಬೇಕಾಗುತ್ತದೆ. ಮಾರಾಟ ತೆರಿಗೆ, ಅಬಕಾರಿ ತೆರಿಗೆ, ಆಮದು ಸುಂಕ ಹೀಗೆ ತೆರಿಗೆಗಳ ಮೇಲೆ ತೆರಿಗೆಗಳು ವಾಸ್ತವಿಕ 45 ರೂ. ಇರುವ ಪೆಟ್ರೋಲ್ ಬೆಲೆಯನ್ನು 80 ರೂ.ಗೆ ತಲುಪಿಸುತ್ತದೆ. ಪೆಟ್ರೋಲ್ ಬೆಲೆಯೇರಿಕೆಯಾದಾಕ್ಷಣ ರಾಜ್ಯ ಸರಕಾರಗಳು ಒಂದಿಷ್ಟು ದೊಡ್ಡ ಮನಸು ಮಾಡಿದರೆ, ಅದರಿಂದಾಗುವ ಹಾನಿಯನ್ನು ತಪ್ಪಿಸಬಹುದು. ಇಂದು ಪೆಟ್ರೋಲ್ ದರ ಏರಿಕೆಯಿಂದ ಹೊರಗೆ ಟೀಕಾ ಪ್ರಹಾರಗಳನ್ನು ಮಾಡಿದರೂ, ಒಳಗೊಳಗೆ ರಾಜ್ಯ ಸರಕಾರಗಳು ಸಂಭ್ರಮಿಸುತ್ತವೆ.
ಯಾಕೆಂದರೆ, ಇಲ್ಲಿ ಪೆಟ್ರೋಲ್‌ಗಳ ಮೇಲೆ ವಿಧಿಸಲಾಗುವ ತೆರಿಗೆಗಳ ಹೆಚ್ಚಿನ ಆದಾಯವೂ ರಾಜ್ಯ ಸರಕಾರದ ಬೊಕ್ಕಸಕ್ಕೆ ಹೋಗುತ್ತದೆ.ಶೇ.4ರಷ್ಟಿರುವ ಆಮದು ಸುಂಕ ಕೇಂದ್ರಕ್ಕೆ ಹೋದರೆ,ಉಳಿದ ಹೆಚ್ಚಿನ ತೆರಿಗೆಗಳಿಂದ ಲಾಭ ಮಾಡಿಕೊಳ್ಳುವುದು ರಾಜ್ಯ ಸರಕಾರಗಳು.ಒಂದು ವೇಳೆ,ಕೇಂದ್ರ ಪೆಟ್ರೋಲ್ ದರವನ್ನು ಹೆಚ್ಚಿಸಿದರೂ, ಜನರ ಮೇಲೆ ಚೂರು ಅನುಕಂಪವಿದ್ದರೂ, ರಾಜ್ಯ ಸರಕಾರಗಳು ಪೆಟ್ರೋಲ್ ಬೆಲೆ ಏರದಂತೆ ನೋಡಿಕೊಳ್ಳಬಹುದು.ಈಗಿರುವ ತೆರಿಗೆಗಳಲ್ಲಿ ಶೇ. 50 ರಷ್ಟನ್ನು ತಗ್ಗಿಸಿದರೂ ಸಾಕು, ಜನರಿಗೆ ಲಾಭವಾಗುತ್ತದೆ. ಪೆಟ್ರೋಲ್ ದರ ಏರಿಕೆಯಾದಾಗಲೆಲ್ಲ, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳು ಜನರ ನೆರವಿಗೆ ಧಾವಿಸಿದ ಉದಾಹರಣೆಯಿದೆ.
ಗೋವಾ ಸರಕಾರವೂ ಇದರಲ್ಲಿ ಒಂದು ಹೆಜ್ಜೆ ಮುಂದೆಯೇ ಇದೆ. ಆದರೆ ಕರ್ನಾಟಕ ಸರಕಾರ ಮಾತ್ರ, ಅತ್ಯಂತ ನಿಷ್ಟುರವಾಗಿ ನಡೆದುಕೊಂಡಿದೆ.ಆದುದರಿಂದಲೇ,ಇಂದು ದೇಶದಲ್ಲೇ ಪೆಟ್ರೋಲ್‌ಗೆ ಅತ್ಯಧಿಕ ಬೆಲೆಯಿರುವುದು ಕರ್ನಾಟಕದಲ್ಲಿ.ಇಂದು ಪೆಟ್ರೋಲ್ ಬೆಲೆಯೇರಿಕೆಯಾದಾಕ್ಷಣ ಪ್ರತಿಪಕ್ಷಗಳು ವಾಗ್ಬಾಣಗಳನ್ನು ಪ್ರಯೋಗಿಸುತ್ತಿವೆ. ನಿಜಕ್ಕೂ ಅದರಲ್ಲಿ ಒಂದಿಷ್ಟು ಪ್ರಾಮಾಣಿಕತೆಯಿದ್ದಿದ್ದರೆ, ತನ್ನ ಆಡಳಿತ ಪಕ್ಷವಿರುವ ರಾಜ್ಯಗಳಿಗೆ ತೆರಿಗೆಯನ್ನು ಕಡಿತಗೊಳಿಸಲು ಸೂಚನೆ ನೀಡಬಹುದಿತ್ತು.ಪೆಟ್ರೋಲ್ ಬೆಲೆಯೇರಿಕೆಯನ್ನು ವಿರೋಧ ಪಕ್ಷಗಳು ಕೇವಲ ರಾಜಕೀಯವಾಗಿ ಮಾತ್ರ ಬಳಸಲು ಮುಂದಾಗುತ್ತಿವೆ.ಯಾವ ಪಕ್ಷ ಆಡಳಿತಕ್ಕೆ ಬಂದರೂ,ಪೆಟ್ರೋಲ್ ಬೆಲೆಯೇರಿಕೆಯನ್ನು ನಿಯಂತ್ರಿಸಲು ಅವುಗಳಿಗೆ ಸಾಧ್ಯವಾಗದೇ ಇರುವುದು ನಿಜಕ್ಕೂ ವಿಪರ್ಯಾಸ.
ಎನ್‌ಡಿಎ ಸರಕಾರ ತನ್ನ ಅಧಿಕಾರಾವಧಿಯಲ್ಲಿ 30 ಬಾರಿ ಪೆಟ್ರೋಲ್ ದರವನ್ನು ಏರಿಸಿತ್ತು. ಅದರೊಂದಿಗೆ ಸ್ಪರ್ಧಿಸಲು ಹೊರಟಿದೆ ಯುಪಿಎ ಸರಕಾರ.ಎಲ್ಲಕ್ಕಿಂತ ವಿಪರ್ಯಾಸವೆಂದರೆ, ಒಂದೇ ಬಾರಿಗೆ ಜನರ ತಲೆಯ ಮೇಲೆ ಭಾರೀ ಹೊಡೆತವನ್ನು ಸರಕಾರ ನೀಡಿದೆ.ಇಂತಹ ಸಾಹಸಕ್ಕೆ ಈವರೆಗಿನ ಯಾವ ಸರಕಾರವೂ ಮುಂದಾಗಿರಲಿಲ್ಲ.ಇದೇ ಸಂದರ್ಭದಲ್ಲಿ ಪ್ರತಿಪಕ್ಷಗಳು ಮೇ 31ಕ್ಕೆ ಭಾರತ ಬಂದ್ ಘೋಷಿಸಿದೆ. ಅದರ ಬೆನ್ನಿಗೇ ಯುಪಿಎ ಸರಕಾರ ಮೃದುವಾಗಿದ್ದು, ಪೆಟ್ರೋಲ್‌ನ ಬೆಲೆಯನ್ನು ಇಳಿಕೆ ಮಾಡುವತ್ತ ಯೋಚಿಸುತ್ತಿದೆ. ಸರಕಾರ ಮೀನಾಮೇಷ ಎಣಿಸದೆ ತಕ್ಷಣ ಬೆಲೆಯನ್ನು ಇಳಿಸಬೇಕು ಮಾತ್ರವಲ್ಲ, ಡೀಸೆಲ್, ಎಲ್‌ಪಿಜಿಯ ಬೆಲೆಯೇರಿಕೆಯಾಗದಂತೆ ನೋಡಿಕೊಳ್ಳಬೇಕು.ರೂಪಾಯಿ ಬೆಲೆ ಇಳಿದಿರಬಹುದು. ಹಾಗೆಂದು ಮನುಷ್ಯನ ಬದುಕಿನ ಬೆಲೆ ಇಳಿದಿಲ್ಲ. ಅವನು ಕನಿಷ್ಠ ಒಂದು ಹೊತ್ತಿನ ಊಟವನ್ನು ನೆಮ್ಮದಿಯಿಂದ ಮಾಡುವ ವಾತಾವರಣವನ್ನು ಸರಕಾರ ನಿರ್ಮಾಣ ಮಾಡಬೇಕಾಗಿದೆ.

ದಿಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ವ್ಯವಹಾರದಲ್ಲಿ ರೂ. 1.63 ಲಕ್ಷ ಕೋಟಿ ಹಗರಣ: ಸಿಎಜಿ ವರದಿಯಲ್ಲಿ ಶಂಕೆ


  ಮೇ -25-2012

ಹೊಸದಿಲ್ಲಿ: ದಿಲ್ಲಿ ವಿಮಾನ ನಿಲ್ದಾಣ ಆಧುನಿಕೀಕರಣ ಯೋಜನೆಯಲ್ಲಿ ರೂ. 1.63 ಲಕ್ಷ ಕೋಟಿ ಹಗರಣ ನಡೆದಿರುವ ಸಾಧ್ಯತೆಯ ಬಗ್ಗೆ ಮಹಾಲೇಖಪಾಲ (ಸಿಎಜಿ) ವರದಿಯು ಅಂದಾಜಿಸಿರುವುದಾಗಿ ವರದಿಯೊಂದು ತಿಳಿಸಿದೆ.
ಈ ಯೋಜನೆಯ ಸಲುವಾಗಿ ಸರಕಾರವು ಪ್ರಮುಖ ಭೂಮಿಯೊಂದನ್ನು ತನ್ನ ಖಾಸಗಿ ಸಹಭಾಗಿ ಸಂಸ್ಥೆ ಡಯಲ್‌ಗೆ ಕಡಿಮೆ ಬೆಲೆಯಲ್ಲಿ ನೀಡಿರುವ ಹಿನ್ನೆಲೆಯಲ್ಲಿ, ಈ ಬೃಹತ್ ಮೊತ್ತದ ಹಗರಣವೊಂದು ನಡೆದಿರುವ ಸಾಧ್ಯತೆಯಿದೆ ಎಂದು ವರದಿಯು ಶಂಕಿಸಿದೆ.
ಸಿಎಜಿ ವರದಿಯು ಇನ್ನಷ್ಟೇ ಸಂಸತ್ತಿನಲ್ಲಿ ಮಂಡಿಸಲ್ಪಡಲಿದ್ದು, ಸುದ್ದಿ ವಾಹಿನಿಯೊಂದಕ್ಕೆ ಲಭಿಸಿರುವ ಮಾಹಿತಿಯ ಆಧಾರದಲ್ಲಿ ಈ ವಿಷಯಗಳು ಬಹಿರಂಗಗೊಂಡಿವೆ. ಡಯಲ್ ಕಂಪೆನಿಯು ಸುಮಾರು 4,799.09 ಎಕರೆ ಭೂಮಿಯನ್ನು ರೂ. 100ರ ವಾರ್ಷಿಕ ಲೀಸ್ ಬಾಡಿಗೆಗೆ ಸುಮಾರು 60 ವರ್ಷದ ಮಟ್ಟಿಗೆ ತನ್ನದಾಗಿಸಿಕೊಂಡಿದೆ. ಇದರ ಪಾಲು ಕೊಡುಗೆ ಕೇವಲ ರೂ. 1,813 ಕೋಟಿಯಷ್ಟಾಗುತ್ತದೆ. ಆದಾಗ್ಯೂ, ‘‘ನಾವು ವರದಿಯಲ್ಲಿ ಪತ್ತೆಯಾಗಿರುವ ಅಂಶಗಳನ್ನು ನಾವು ಇನ್ನೂ ಗಮನಿಸಿಲ್ಲ. ಹೀಗಾಗಿ ಪ್ರಸ್ತುತ ಏನೂ ಪ್ರತಿಕ್ರಿಯಿಸುವ ನಿಟ್ಟಿನಲ್ಲಿಲ್ಲ’’ ಎಂದು ಡಯಲ್ ವಕ್ತಾರ ತಿಳಿಸಿರುವುದಾಗಿ ಮೂಲಗಳು ವರದಿ ಮಾಡಿವೆ.
 
ಕಾರ್ಯ ನಿರ್ವಹಣೆ, ಆಡಳಿತ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಒಪ್ಪಂದಕ್ಕೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಸಹಿ ಮಾಡಿತ್ತು. ಈ ಭೂಮಿಯಲ್ಲಿ ಶೇ. 5 ಭಾಗವನ್ನು ಕಂಪೆನಿಗೆ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಒಪ್ಪಂದದಲ್ಲಿ ಅನುಮತಿ ನೀಡಲಾಗಿತ್ತು. ಸಮಾಲೋಚನಾ ಸಂಸ್ಥೆ ಮೆರಿಲ್ ಲಿಂಚ್, ಇಲ್ಲಿನ ಭೂಮಿಯ ವೌಲ್ಯ ಪ್ರತಿ ಎಕರೆಗೆ ರೂ 100 ಕೋಟಿಯಷ್ಟಾಗುತ್ತದೆ ಎಂದು ಅಂದಾಜಿಸಿದೆ.
ಹೀಗಾಗಿ ಪ್ರಸ್ತುತ ಡಯಲ್‌ಗೆ ವಾಣಿಜ್ಯ ಉದ್ದೇಶಕ್ಕೆ ಬಳಸಲು ಸಿಗುವ ಒಟ್ಟು ಭೂಮಿಯ ವೌಲ್ಯವೇ ರೂ. 24,000 ಕೋಟಿಗಳಷ್ಟಾಗುತ್ತದೆ ಎಂದು ಅಂದಾಜಿಸಲಾಗಿದೆ. ‘‘ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿಗೆ ಡಯಲ್ ಬರೆದಿರುವ ಪತ್ರದಲ್ಲಿ ರಿಯಾಯತಿ ಅವಧಿಯಾದ 58 ವರ್ಷಗಳಲ್ಲಿ ಈ ಭೂಮಿ (239.95 ಎಕರೆ)ಯ ಉತ್ಪಾದನೆ ವೌಲ್ಯವೇ ಪ್ರತಿ ಎಕರೆಗೆ ರೂ. 681.63 ಕೋಟಿ ಎಂದು ಹೇಳಲಾಗಿದೆ’’ ಎಂದು ಸಿಎಜಿ ವರದಿಯು ತಿಳಿಸಿರುವುದಾಗಿ ವರದಿಗಳು ಹೇಳಿವೆ.
ಯೋಜನಾ ವೆಚ್ಚವನ್ನು ಅಭಿವೃದ್ಧಿ ಶುಲ್ಕದಲ್ಲಿ ಸಂಗ್ರಹಿಸುವಂತೆ ಮೂಲ ಒಪ್ಪಂದದಲ್ಲಿ ತಿಳಿಸಿಲ್ಲ. ಶುಲ್ಕದಲ್ಲಿ ತೆರಿಗೆ ಸಂಗ್ರಹಿಸುವುದಕ್ಕೆ ಜಂಟಿ ಉದ್ಯಮಕ್ಕೆ ಅನುಮತಿಯಿದ್ದಲ್ಲಿ, ಅದನ್ನು ಇತರ ಹರಾಜುದಾರರಿಗೂ ತಿಳಿಸಬೇಕಾಗಿತ್ತು ಎಂದು ಲೆಕ್ಕಪರಿಶೋಧಕರು ತಿಳಿಸಿದ್ದಾರೆ. ದಿಲ್ಲಿ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರಯಾಣಿಕರಿಂದ ಕ್ರಮವಾಗಿ ರೂ. 1,300 ಮತ್ತು ರೂ. 200 ಶುಲ್ಕವನ್ನು ಸ್ವೀಕರಿಸುತ್ತದೆ. ಅಲ್ಲದೆ, ಮೇ 15ರಿಂದ ಡಯಲ್ ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ರೂ. 436-1,068 ಮತ್ತು ದೇಶೀಯ ಪ್ರಯಾಣಿಕರಿಂದ ರೂ. 195-462ರಷ್ಟು ಅಭಿವೃದ್ಧಿ ಶುಲ್ಕವನ್ನೂ ವಸೂಲು ಮಾಡುತ್ತಿದೆ ಎಂದು ವರದಿಯಾಗಿದೆ.
ಆದಾಗ್ಯೂ, ದಿಲ್ಲಿ ವಿಮಾನ ನಿಲ್ದಾಣವನ್ನು ಆಧುನಿಕೀಕರಣಗೊಳಿಸುವ ಮತ್ತು ಮರು ವಿನ್ಯಾಸಗೊಳಿಸುವ ನಿರ್ಧಾರವು ಸಚಿವ ಸಂಪುಟದ್ದಾಗಿದೆ. ಷರತ್ತುಗಳು ಮತ್ತು ನಿಯಮಗಳನ್ನು ಸಚಿವರ ಸಮೂಹವು ಅಂತಿಮಗೊಳಿಸಿತ್ತು ಎಂಬುದಾಗಿ ಲೆಕ್ಕಪರಿಶೋಧಕರಿಗೆ ನಾಗರಿಕ ವಿಮಾನಯಾನ ಸಚಿವಾಲಯವು ತಿಳಿಸಿರುವುದಾಗಿ ವರದಿಯಾಗಿದೆ.

ಪೆಟ್ರೋಲ್ ಬೆಲೆಯೇರಿಕೆ ವಿರುದ್ಧ ಪ್ರತಿಪಕ್ಷಗಳ ಆಕ್ರೋಶ: ಮೇ 31 ಭಾರತ ಬಂದ್

ಪೆಟ್ರೋಲ್ ಬೆಲೆಯೇರಿಕೆ ವಿರುದ್ಧ ಪ್ರತಿಪಕ್ಷಗಳ ಆಕ್ರೋಶ: ಮೇ 31 ಭಾರತ ಬಂದ್
 


  ಮೇ -25-2012

ಹೊಸದಿಲ್ಲ:ಪೆಟ್ರೋಲ್ ಬೆಲೆಯೇರಿಕೆ ಪ್ರತಿಭಟಿಸಿ ಕೇಂದ್ರ ಸರಕಾರದ ವಿರುದ್ಧ ಸಂಘಟಿತ ಹೋರಾಟಕ್ಕೆ ಪ್ರತಿಪಕ್ಷಗಳು ಸನ್ನದ್ಧ ವಾಗುತ್ತಿದ್ದು, ಮೇ 31ರಂದು ಭಾರತ ಬಂದ್ ಆಚರಿಸುವ ಬಗ್ಗೆ ತಮ್ಮ ನಡುವೆ ಸಹಮತವನ್ನು ರೂಪಿಸಲು ತೀವ್ರವಾಗಿ ಪ್ರಯತ್ನಿಸುತ್ತಿವೆ.ಪೆಟ್ರೋಲ್‌ನ ಬೆಲೆಯೇರಿಕೆ ವಿರುದ್ಧ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ಮೇ 31ರಂದು ಭಾರತ್ ಬಂದ್‌ಗೆ ಕರೆ ನೀಡಿದ್ದರೆ, ಎಡಪಕ್ಷಗಳು ‘ಅಖಿಲ ಭಾರತ ಪ್ರತಿಭಟನಾ ದಿನ’ ಆಚರಿಸಲಿವೆ. ಅಂದು ಎಡಪಕ್ಷಗಳು ದೇಶಾದ್ಯಂತ ಮುಷ್ಕರ, ಪಿಕೆಟಿಂಗ್, ಚಳವಳಿ, ರಾಸ್ತಾ ರೋಕೋ ಹಾಗೂ ರ್ಯಾಲಿಗಳನ್ನು ನಡೆಸಲಿವೆ. ಬುಧವಾರದ ಪೆಟ್ರೋಲ್ ಬೆಲೆಯೇರಿಕೆಯನ್ನು ವಿರೋಧಿಸಿರುವ ಯುಪಿಎ ಒಕ್ಕೂಟದ ಜೊತೆಗಾರರಾದ ತೃಣಮೂಲ ಕಾಂಗ್ರೆಸ್ ಹಾಗೂ ಡಿಎಂಕೆಯನ್ನು ಮೇ 31ರ ಮುಷ್ಕರದಲ್ಲಿ ಕೈಜೋಡಿಸುವಂತೆ ಮಾಡಲು ಪ್ರಯತ್ನಗಳು ನಡೆಯುತ್ತಿವೆಯೆಂದು ಪ್ರತಿಪಕ್ಷ ಮೂಲಗಳು ತಿಳಿಸಿವೆ.ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿಕೆ ನೀಡಿ, ಎಲ್ಲ ಮಿತ್ರಪಕ್ಷಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಎಲ್.ಕೆ.ಆಡ್ವಾಣಿ, ಎನ್‌ಡಿಎ ಪರವಾಗಿ ಹೇಳಿಕೆ ನೀಡಿ, ಮೇ 31ರಂದು ಭಾರತ ಬಂದ್ ಆಚರಿಸುವ ಘೋಷಣೆ ಮಾಡಿದರೆಂದು ತಿಳಿಸಿದ್ದಾರೆ.
ಏತನ್ಮಧ್ಯೆ ಜೆಡಿಯು ಅಧ್ಯಕ್ಷ ಶರದ್ ಯಾದವ್, ಮೇ 31ರ ಭಾರತ ಬಂದ್ ಯಶಸ್ವಿಗೊಳಿಸುವ ಬಗ್ಗೆ ಎಡಪಕ್ಷಗಳು ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂಸಿಂಗ್ ಯಾದವ್ ಜೊತೆ ಮಾತುಕತೆ ನಡೆಸಿದ್ದಾರೆ. ಪೆಟ್ರೋಲ್ ಬೆಲೆಯು ಸರಕಾರದ ನಿಯಂತ್ರಣದಿಂದ ಹೊರತುಪಡಿಸಿರುವುದರಿಂದ, ಬೆಲೆಯೇರಿಕೆಗೆ ತೈಲ ಕಂಪೆನಿಗಳೇ ಹೊಣೆಯೆಂಬ ಕೇಂದ್ರ ಸರಕಾರದ ವಾದವನ್ನು ತಳ್ಳಿಹಾಕಿರುವ ಯಾದವ್, ಇಂತಹ ಹೇಳಿಕೆಗಳು ಬರೀ ಕಣ್ಣೊರೆಸುವ ತಂತ್ರವೆಂದು ಟೀಕಿಸಿದ್ದಾರೆ.   ಎಡಪಕ್ಷಗಳಾದ ಸಿಪಿಎಂ, ಸಿಪಿಐ,ಆರ್‌ಎಸ್ಪಿ ಹಾಗೂ ಫಾರ್ವಡ್ ಬ್ಲಾಕ್ ಗುರುವಾರ ಜಂಟಿ ಹೇಳಿಕೆಯೊಂದನ್ನು ನೀಡಿ, ಪೆಟ್ರೋಲ್ ದರದಲ್ಲಿ ತೀವ್ರ ಹೆಚ್ಚಳವನ್ನು ತಾವು ಬಲವಾಗಿ ಖಂಡಿಸುವುದಾಗಿ ಹೇಳಿವೆ.
ಈಗಾಗಲೇ ಅವಶ್ಯಕ ವಸ್ತುಗಳ ನಿರಂತರ ಬೆಲೆಯೇರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರ ಮೇಲೆ ನಡೆದ ಬರ್ಬರ ದಾಳಿ ಇದಾಗಿದೆ’’ ಎಂದು ಅವು ಆಕ್ರೋಶ ವ್ಯಕ್ತಪಡಿಸಿವೆ.ಪೆಟ್ರೋಲ್ ದರದಲ್ಲಿ ವಿಪರೀತ ಹೆಚ್ಚಳದ ವಿರುದ್ಧ ಎಡಪಕ್ಷಗಳು ವಿವಿಧ ರಾಜ್ಯಗಳಲ್ಲಿ ಹರತಾಳಕ್ಕೆ ಕರೆ ನೀಡಿವೆಯೆಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ತಿಳಿಸಿದ್ದಾರೆ.ಪೆಟ್ರೋಲ್ ಬೆಲೆಯೇರಿಕೆಯನ್ನು ಬಲವಾಗಿ ಖಂಡಿಸಿರುವ ಜೆಡಿಯು ಅಧ್ಯಕ್ಷ ಶರದ್‌ಯಾದವ್, ಅಗತ್ಯವಸ್ತುಗಳ ದರಗಳನ್ನು ನಿಯಂತ್ರಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆಯೆಂದು ದೂರಿದ್ದಾರೆ.
ರಾಷ್ಟ್ರಪತಿ ಚುನಾವಣೆಯ ಬಳಿಕ ಡೀಸೆಲ್ ಹಾಗೂ ಎಲ್‌ಪಿಜಿ ಧಾರಣೆಯಲ್ಲೂ ಏರಿಕೆಯಾಗುವ ಸಂಭವವಿದೆಯೆಂದು ಅವರು ಎಚ್ಚರಿಕೆ ನೀಡಿದ್ದಾರೆ.ಸಂಸತ್ ಅಧಿವೇಶನ ನಡೆಯುತ್ತಿರುವಾಗ ಪೆಟ್ರೋಲ್‌ದರ ಹೆಚ್ಚಳವನ್ನು ಯಾಕೆ ಪ್ರಕಟಿಸಲಿಲ್ಲ ಹಾಗೂ ಬಜೆಟ್ ಅಧಿವೇಶನ ಮುಕ್ತಾಯಗೊಂಡ ಮಾರನೆ ದಿನವೇ ತೈಲ ಕಂಪೆನಿಗಳು ಬೆಲೆಯೇರಿಕೆ ಮಾಡಿದ್ದರ ಹಿಂದಿನ ಮರ್ಮವೇನು ಎಂದು ಯಾದವ್ ಪ್ರಶ್ನಿಸಿದ್ದಾರೆ.ಈ ನಡುವೆ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ, ತೈಲ ಸಚಿವ ಜೈಪಾಲ್ ರೆಡ್ಡಿ, ಟರ್ಕ್‌ಮೆನಿಸ್ತಾನಕ್ಕೆ ತನ್ನ ಅಧಿಕೃತ ಪ್ರವಾಸವನ್ನು ಒಂದು ದಿನದ ಮಟ್ಟಿಗೆ ಮುಂದೂಡಿದ್ದಾರೆ. ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಪೆಟ್ರೋಲ್‌ದರದಲ್ಲಿ ಲೀಟರ್‌ಗೆ 7.54ರೂ. ಭಾರೀ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ತಲೆದೋರಿರುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವ ಉದ್ದೇಶದಿಂದ ಟರ್ಕ್‌ಮೆನಿಸ್ತಾನ ಭೇಟಿಯನ್ನು ಮುಂದೂಡಿದ್ದಾರೆ.

ಮಹಿಳೆಗೆ ನಿಂದನೆ ಹಾಗು ಜೀವ ಬೆದರಿಕೆ ನೀಡಿದ ಚಾಲಕನ ಗೂಂಡಾಗಿರಿಯನ್ನು ಸಮರ್ತಿಸಿದ ಗ್ಯಾಸ್ ಏಜನ್ಸಿ ಮಾಲಕಿ:ಗ್ರಾಹಕರ ವೇದಿಕೆ ಆರೋಪ

ಮಂಜೇಶ್ವರ್ ಟೈಮ್ಸ್ ಮೇ 24-2012 ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕ್ಷುಲ್ಲಕ ವಿಷಯಕ್ಕೆ ಸಂಭಂಧಿಸಿ ವೃದ್ದ ಮಹಿಳೆಯನ್ನು ಅವಾಚ್ಯ ಶಭ್ದಗಳಿಂದ ನಿಂದಿಸಿ ಜೀವ ಬೆದರಿಕೆ ನೀಡಿದ ಚಾಲಕನ  ಗೂಂಡಾಗಿರಿಯನ್ನುಸಮರ್ತಿಸಿದ ಮಂಜೇಶ್ವರ ಅನಂತ ಗ್ಯಾಸ್ ಏಜನ್ಸಿ ಮಾಲಕಿ  ಚಾಲಕನ ವಿರುದ್ದ ಯಾವುದೇ ಕ್ರಮವನ್ನು ಕೈಗೊಂಡಿಲ್ಲವೆಂದು ಮಂಜೇಶ್ವರ ಗ್ರಾಹಕರ ವೇದಿಕೆ ಆರೋಪಿಸಿದೆ.
ಇತ್ತೀಚೆಗೆ ಮಂಜೇಶ್ವರ ಅನಂತ ಗ್ಯಾಸ್ ಏಜನ್ಸಿ ಯ ಚಾಲಕ ಅನಿಲ್ ಕುಮಾರ್ ಎಂಬಾತ ಮಂಜೇಶ್ವರ ರಾಗಂ ಜಂಕ್ಷನ್ ನ ಹಾಜಿರಾ(60) ಎಂಬವರಿಗೆ ಕ್ಷುಲ್ಲಕ ವಿಷಯಕ್ಕೆ ಸಂಭಂಧಿಸಿ ಅವಾಚ್ಯ ಶಭ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದ ಈ ಪ್ರಕರಣಕ್ಕೆ ಸಂಭಂಧಿಸಿ ಹಾಜಿರಾ ಮಂಜೇಶ್ವರ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಿದ್ದರು.ದೂರನ್ನು ಪರಿಶೀಲಿಸಿದ ಮಂಜೇಶ್ವರ ಗ್ರಾಹಕರ ವೇದಿಕೆಯ ಕಾರ್ಯದರ್ಶಿ ಗ್ಯಾಸ್ ಮಾಲಕಿಯನ್ನು ದೂರವಾಣಿ  ಮೂಲಕ ಸಂಪರ್ಕಿಸಿದಾಗ ವೃದ್ದ ಮಹಿಳೆಯ ಬಗ್ಗೆ ಸ್ವಲ್ಪವೂ ಅನುಕಂಪ ತೋರದ ಗ್ಯಾಸ್ ಏಜನ್ಸಿ ಮಾಲಕಿ ತನ್ನ ಚಾಲಕನನ್ನೇ ಸಮರ್ಥಿಸಿಕೊಂಡಿರುವುದಾಗಿ ಗ್ರಾಹಕರ ವೇದಿಕೆ ಆರೋಪಿಸಿದೆ. 


 ಆದರೆ ತೀರಾ ಬೇಸರದ ಬೆಲವಣಿಗೆಯೆಂದರೆ ಪ್ರಕರಣ ನಡೆದು ಒಂದು ವಾರಕಳೆದರೂ  ಗ್ಯಾಸ್ ಏಜನ್ಸಿ ಮಾಲಕಿ ಇದರ ಬಗ್ಗೆ ಯಾವುದೇ ತನಿಖೆಯನ್ನು ನಡೆಸದೇ  ಅದನ್ನು ಸಾಧ್ಯವಾದಷ್ಟು ಮಟ್ಟಿಗೆ ಮರೆಮಾಚಲು ಪ್ರಯತ್ನಿಸಿ ಅದೇ ರೂಟಿನಲ್ಲಿ ಅದೇ ಚಾಲಕನನ್ನು ನಿಂದನೆಗೊಳಗಾದ ಮಹಿಳೆಯ ಮನೆಯ ಮುಂಬಾಗದಲ್ಲೇ ಅಡುಗೆ ಅನಿಲ ವಿತರಿಸಲು ಕಳಿಸುತ್ತಿರುವುದು ತುಂಬಾ ವಿಪರ್ಯಾಸಕರವೆಂದು  ಗ್ರಾಹಕರ ವೇದಿಕೆಯ ಅಧ್ಯಕ್ಷರಾದ ಮುರಳೀಧರ್ ಭಟ್ ತಿಳಿಸಿದ್ದಾರೆ.
 ಚಾಲಕನ ವಿರುದ್ದ ಯಾವುದೇ ಕ್ರಮವನ್ನು ಕೈಗೊಳ್ಳದೆ ಗ್ರಾಹಕರ ಪಾಲಿಗೆ ಮುಳ್ಳಾಗುತ್ತಿರುವ ಗ್ಯಾಸ್ ಏಜನ್ಸಿ ಹಾಗು ಚಾಲಕನ ವಿರುದ್ದ ಈಗಾಗಲೇ ಹಾಜಿರಾ ರವರು ಹೆಚ್.ಪಿ.ಸಿ.ಎಲ್.ನ ವಿಜಿಲೆನ್ಸ್ ಸಹಿತ ಉನ್ನತ ಅಧಿಕಾರಿಗಳಿಗೆ ದೂರು ರವಾನಿಸಿ ನ್ಯಾಯವನ್ನು ದೊರಕಿಸಿಕೊಡಲು ವಿನಂತಿಸಿಕೊಂಡಿರುತ್ತಾರೆ.ಇದರಿಂದಲೂ ನ್ಯಾಯ ದೊರಕದೇ ಇದ್ದರೆ ಹಾಜಿರಾರವರ ನ್ಯಾಯದ ಹೋರಾಟಕ್ಕೆ ಸಂಪೂರ್ಣವಾದ ಬೆಂಬಲವನ್ನು ನೀಡಿ  ಕಾನೂನಿನ ಚೌಕಟ್ಟಿನಲ್ಲಿ ಹೋರಾಟವನ್ನು ಮುಂದುವರಿಸುವುದಾಗಿ ಗ್ರಾಹಕರ ವೇದಿಕೆ ತಿಳಿಸಿದೆ.ಮಾತ್ರವಲ್ಲದೆ ಇದು ಕೇವಲ ಹಾಜಿರಾ ರವರ ಪ್ರಶ್ನೆ ಅಲ್ಲ ಎಲ್ಲಾ ಗ್ರಾಹಕರ ಮಾನದ ಪ್ರಶ್ನೆ ಆದ್ದರಿಂದ ಗ್ರಾಹಕರೆಲ್ಲರೂ ಆ ನಿಟ್ಟಿನಲ್ಲಿ ಸಕ್ರಿಯವಾಗಿ ಹೋರಾಡಬೇಕಾದ ಕಾಲ ಬಂದಿದೆ ಎಂದು ಕೂಡಾ ತಿಳಿಸಿದೆ.
ಚಾಲಕರಿಂದ ತನ್ನ ಗ್ರಾಹಕರನ್ನು ನಿಂದಿಸುವಷ್ಟು ಬಲ ಬೆಳಸಿಕೊಂಡಿರುವ ಗ್ಯಾಸ್ ಏಜನ್ಸಿಗಳ ವಿರುದ್ದ ಗ್ರಾಹಕರೇ ಧ್ವನಿ ಎತ್ತುವುದು ಅನಿವಾರ್ಯವಾಗಿದ್ದು ಇಂತಹ ಗ್ಯಾಸ್ ಏಜನ್ಸಿಗಳ ವಿರುದ್ದ ಗ್ರಾಹಕರು ಕಾನೂನು ರೀತಿಯಲ್ಲಿ ಹೋರಾಟವನ್ನು ಮುಂದುವರಿಸಬೇಕೆಂದು ಗ್ರಾಹಕರ ವೇದಿಕೆ ಗ್ರಾಹಕರಿಗೆ ಕರೆಯಿತ್ತಿದೆ.
ಮಂಜೇಶ್ವರ ಗ್ರಾಹಕರ ವೇದಿಕೆಯಲ್ಲಿ ಅನಂತ  ಗ್ಯಾಸ್ ಏಜನ್ಸಿಯ ವಿರುದ್ದ ದಿನದಿಂದ ದಿನಕ್ಕೆ ಹಲವು ರೀತಿಯ ದೂರುಗಳು ದಾಖಲಾಗುತಿದ್ದು ಮುಂದಿನ ದಿನಗಳಲ್ಲಿ ಗ್ರಾಹಕರನ್ನು ಒಟ್ಟು ಗೂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲು ಸಭೆಯಲ್ಲಿ ಒಮ್ಮತದ  ತೀರ್ಮಾನವನ್ನು ಕೈಗೊಳ್ಳಲಾಗುವುದೆಂದು ಗ್ರಾಹಕರ ವೇದಿಕೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

Thursday 24 May 2012

ಸಂಬಳ ಎಷ್ಟು ಅಂತ ಮೊದಲು ಹೆಂಡ್ತಿಗೆ ಹೇಳಿ:ಕೋರ್ಟ್


  ಮೇ 24, 2012, ManjeshwarTimes
 Wife Entitled To Know Husband Income Court
 
ನವದೆಹಲಿ: ಬಹಳಷ್ಟು ಉದ್ಯೋಗಿಗಳಿಗೆ ಇದು increment letter ಕೈಸೇರುವ ಶುಭ ಘಳಿಗೆ. ಇದೇ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ ಮಹಿಳೆಯರಿಗೂ ಶುಭವೆನಿಸುವ ಆದೇಶ ನೀಡಿದೆ.

ಡೈವೋರ್ಸ್ ನಂತಹ ದುರ್ಭರ ಪರಿಸ್ಥಿತಿಗಳಲ್ಲಿ ಈ ಸಂಬಳದ ವಿಚಾರ ಅತಿ ಮಹತ್ವ ಪಡೆದುಕೊಳ್ಳುತ್ತದೆ. ಆದ್ದರಿಂದ ಡೈವೋರ್ಸ್ ನಂತರ ಪರಿಹಾರ ಪಡೆಯುವ ಸಲುವಾಗಿ ಹೆಂಡತಿಯು ತನ್ನ ಗಂಡನ ಸಂಬಳ, ಆದಾಯ ತಿಳಿದುಕೊಳ್ಳುವುದು ಅವಶ್ಯಕವಾಗುತ್ತದೆ. ಅದು ಆಕೆಯ ಹಕ್ಕೂ ಆಗಿದೆ ಎಂದು ಕೋರ್ಟ್ ತೀರ್ಪು ನೀಡಿದೆ.

ವಿಚ್ಛೇಧನ ಪ್ರಕರಣಗಳಲ್ಲಿ ಮಹಿಳೆಗೆ ಪರಿಹಾರ ಮೊತ್ತ ಪ್ರಕಟಿಸಲು ಕೋರ್ಟಿಗೆ ಅಗತ್ಯ ಮಾಹಿತಿ ಬೇಕಾಗುತ್ತದೆ. ಆದ್ದರಿಂದ ಪರಿತ್ಯಕ್ತ ಗಂಡ ತನ್ನ ಹೆಂಡತಿಗೆ ತನ್ನ ಆದಾಯ ಮತ್ತು ಸಂಬಳದ ಬಗ್ಗೆ ಮಾಹಿತಿ ನೀಡುವುದು ಅತ್ಯವಶ್ಯ ಎಂದು ಹೆಚ್ಚುವರಿ ಸೆಷನ್ಸ್ ಜಡ್ಜ್ ಕಾಮಿನಿ ಲಾವ್ ಹೇಳಿದ್ದಾರೆ.

ವಕೀಲರ ಪತ್ನಿಯೊಬ್ಬರು ವಿಚ್ಛೇಧನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಪರಿಹಾರ ಪಡೆಯುವ ಸಂಬಂಧ ಪತಿಯ ಆದಾಯದ ಪ್ರಮಾಣವನ್ನು ತಿಳಿದುಕೊಳ್ಳಲು ಅರ್ಜಿದಾರ ಮಹಿಳೆ ಗಂಡನಿಗೆ ಕೇಳಿದರು. 'ಅದು ಸಾಧ್ಯವಿಲ್ಲ. ಗಂಡನ ಸಂಬಳ ಮತ್ತು ಹೆಂಡತಿಯ ವಯಸ್ಸನ್ನು ಕೇಳುವುದುಂಟೆ!? ಅಕಟಕಟಾ' ಎಂದು ಪತಿರಾಯ ಕೋರ್ಟ್ ಮೆಟ್ಟಿಲೇರಿದರು. ಆಗ ಜಡ್ಜ್ ಕಾಮಿನಿ ಈ ತೀರ್ಪು ನೀಡಿದ್ದಾರೆ
One India 

ಮೂಡಿಗೆರೆ: ಓಮ್ನಿ ಢಿಕ್ಕಿ; ಅಂಗನವಾಡಿ ಪುಟಾಣಿಯ ಸಾವು


  ಮೇ -24-2012

 ಓಮ್ನಿ ಕಾರು ಢಿಕ್ಕಿಯಾದ ಪರಿಣಾಮ ಅಂಗನವಾಡಿಗೆ ತೆರಳುತ್ತಿದ್ದ ಪುಟಾಣಿಯೋರ್ವ ಸಾವನ್ನಪ್ಪಿದ ದಾರುಣ ಘಟನೆ ಇಂದು ಬೆಳಗ್ಗೆ ಮೂಡಿಗೆರೆ ಸಮೀಪದ ಸುಣ್ಣಳ್ಳಿಯಲ್ಲಿ ನಡೆದಿದೆ.
ದುರ್ಘಟನೆಯಿಂದ ಸುಣ್ಣಳ್ಳಿಯ ಚಂದ್ರು ಹಾಗೂ ಸುಜಾತ ದಂಪತಿಯ ಪುತ್ರ ಸುಮಂತ್ (4) ಸಾವಿಗೀಡಾಗಿದ್ದಾನೆ. ಎಂದಿನಂತೆ ಇಂದು ಬೆಳಗ್ಗೆಯೂ ತನ್ನ ತಾಯಿಯೊಂದಿಗೆ ಸಮೀಪದ ಅಂಗನವಾಡಿ ಕೇಂದ್ರಕ್ಕೆ ತೆರಳುತ್ತಿದ್ದಾಗ ಸಂದರ್ಭ ಹಿಂಬದಿಯಿಂದ ಅತೀ ವೇಗದಿಂದ ಬಂದ ಓಮ್ನಿಯೊಂದು ಈತನಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ.
ಈ ಸಂದರ್ಭ ಈತ ಓಮ್ನಿಯಡಿಗೆ ಬಿದ್ದಿದ್ದು, ಈತನ ತಲೆಯ ಮೇಲೆಯೇ ಓಮ್ನಿ ಹರಿದು ಹೋಯಿತೆನ್ನಲಾಗಿದೆ. ಘಟನೆಯಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಎನ್ನಲಾಗಿದೆ. ಅಪಘಾತವೆಸಗಿದ ಚಾಲಕ ಓಮ್ನಿಯೊಂದಿಗೆ ಪರಾರಿಯಾಗಿದ್ದಾನೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆಟ್ರೋಲ್ ಬೆಲೆ ಏರಿಕೆ: ಕೇರಳ ಬಂದ್; ಬಸ್ ಸಂಚಾರ ಸ್ಥಗಿತ


- ಮೇ -24-2012

ಕಾಸರಗೋಡು: ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ, ಎಡರಂಗ ಹಾಗೂ ಎಸ್‌ಡಿಪಿಐಯ ಕರೆಯಂತೆ ಇಂದು ಕೇರಳ ಬಂದ್ ಆಗಿದ್ದು, ಬಸ್ ಸಂಚಾರ ಸ್ಥಗಿತಗೊಂಡಿವೆ.
ಪೆಟ್ರೋಲ್ ಬೆಲೆ ಏರಿಕೆ ನಿನ್ನೆ ಘೋಷಣೆಯಾದ ಕೂಡಲೇ ಇದನ್ನು ಖಂಡಿಸಿ ಬಿಜೆಪಿ, ಎಡರಂಗ ಹಾಗೂ ಎಸ್‌ಡಿಪಿಐ ಪಕ್ಷಗಳು ಕೇರಳ ಬಂದ್‌ಗೆ ಕರೆ ನೀಡಿದ್ದವು. ಅದರಂತೆ ಇಂದು ಕೇರಳ ಬಂದ್ ಆಗಿದ್ದು, ಕಾಸರಗೋಡಿನಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ನಗರದಲ್ಲಿ ಜನ ಸಂಚಾರ ಸ್ಥಗಿತಗೊಂಡಿದ್ದು, ಬಂದ್‌ನ ಮಾಹಿತಿ ತಿಳಿಯದೆ ನಗರಕ್ಕಾಗಮಿಸಿದ ಜನರು ಪರದಾಡುವಂತಾಗಿದೆ.

Wednesday 23 May 2012

ಕೃತಿಸ್ವಾಮ್ಯ ಕಾಯ್ದೆ ತಿದ್ದುಪಡಿಗೆ ಸಂಸತ್ತಿನಲ್ಲಿ ಒಮ್ಮತ

  ಮೇ -23-2012

ಹೊಸದಿಲ್ಲಿ: ಗೀತೆ ರಚನಕಾರರು, ಕಲಾವಿದರು ಮತ್ತು ಪ್ರದರ್ಶನ ನೀಡುವವರು ತಮ್ಮ ಗೌರವ ಧನವನ್ನು ಪಡೆಯಬಹುದು. ಬಹುಕಾಲದ ಬೇಡಿಕೆಯ ಈ ಸಂಬಂಧದ ಕಾನೂನಿಗೆ ಸಂಸತ್ತು ಸಮ್ಮತಿ ನೀಡಿದೆ. ಲೋಕಸಭೆಯಲ್ಲಿ ಕೃತಿಸ್ವಾಮ್ಯ ಕಾಯ್ದೆ (ತಿದ್ದುಪಡಿ) ಮಸೂದೆ 2012ಕ್ಕೆ ಲೋಕಸಭೆಯಲ್ಲಿ ಅವಿರೋಧ ವಾಗಿ ಜಾರಿಯಾಗಿದೆ.
ಸಂಸತ್ತಿನಲ್ಲಿ ಎಲ್ಲ ಪಕ್ಷಗಳು ಈ ವಿಷಯದಲ್ಲಿ ಒಮ್ಮತದ ನಿರ್ಧಾರಕ್ಕೆ ಬರುವ ಮೂಲಕ, ನಿರ್ಮಾಪಕರಿಂದ ತಾರತಮ್ಯ ಕ್ಕೊಳಗಾಗುತ್ತಿದ್ದ ರಚನಾತ್ಮಕ ಕಲಾವಿದರಿಗೆ ನ್ಯಾಯ ದೊರಕಿಸಿಕೊಡುವ ಕಾನೂನು ಜಾರಿಯಾಯಿತು ಎಂದು ಮೂಲಗಳು ವರದಿ ಮಾಡಿವೆ.

ರಾಜ್ಯಸಭೆಯಲ್ಲಿ ಮೇ 17ರಂದು ಮಸೂದೆ ಜಾರಿಗೊಂಡಿದ್ದು, ತಮ್ಮ ಕೃತಿಗಳಿಗೆ ಮಾಲಕರು ಇನ್ನು ಮುಂದೆ ಲೇಖಕರೇ ಆಗಿರುತ್ತಾರೆ ಎಂದು ನೂತನ ಕಾನೂನಿನಲ್ಲಿ ಹೇಳಲಾಗಿದೆ. ನೂತನ ಮಸೂದೆಯ ಪ್ರಕಾರ, ನಿರ್ಮಾಪಕರಿಗೆ ಈ ಹಕ್ಕನ್ನು ನಿರಾಕರಿಸಲಾಗಿದೆ. ಬಹುತೇಕ ಲೇಖಕನ್ನು ನಿರ್ಮಾಪಕರು ಗೌರವ ಧನವನ್ನು ನೀಡದೆ ನಿರ್ಲಕ್ಷಿಸಲಾಗುತ್ತಿದ್ದುದನ್ನು ಗಮನಿಸಿರುವ ನೂತನ ಮಸೂದೆಯಲ್ಲಿ, ಲೇಖಕರಿಗೆ ತಮ್ಮ ಬರಹಗಳಿಗೆ ಉತ್ತಮ ಪಾಲನ್ನು ಪಡೆಯುವ ಮೂಲಕ ವೃದ್ಧಾಪ್ಯದಲ್ಲೂ ಉತ್ತಮ ಜೀವನ ನಡೆಸಲು ಸಾಧ್ಯವಾಗುವಂತೆ ಮಾಡಲಾಗಿದೆ ಎಂದು ಎಚ್‌ಆರ್‌ಡಿ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.
ಶೆಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ಮತ್ತು ಸಂಗೀತ ನಿರ್ದೇಶಕ ರವಿ ಮುಂತಾದ ಜನಪ್ರಿಯ ಲೇಖಕರಿಗೆ ತಮ್ಮ ಜೀವಿತದ ಕೊನೆ ಗಳಿಗೆಯಲ್ಲಿ ಸರಿಯಾದ ಸಂಭಾವನೆ ದೊರೆಯದ ಹಿನ್ನೆಲೆಯಲ್ಲಿ ಅವರ ಬದುಕು ಕಷ್ಟವಾಗಿತ್ತು ಎಂಬುದನ್ನು ಈ ಸಂದರ್ಭ ಸಿಬಲ್ ಸ್ಮರಿಸಿದರು.

ರೇಡಿಯೊ ಮತ್ತು ಟಿವಿಗಳು ಕಲಾವಿದರ ಕಾರ್ಯಕ್ರಮಗಳನ್ನು ಪ್ರತಿಯೊಂದು ಬಾರಿ ಪ್ರಸಾರಿಸು ವಾಗಲೂ, ಅವರಿಗೆ ಅವರ ಕಲಾ ಪ್ರಕಾರಗಳಿಗೆ ಉತ್ತಮ ಸಂಭಾವನೆಯನ್ನು ಪಾವತಿಸಲೇಬೇಕೆಂದು ಮಸೂದೆಯು ಪ್ರಸಾರಕರಿಗೆ ಕಡ್ಡಾಯಗೊಳಿಸಿದೆ.

ಮೂಗ, ಕಿವುಡರೂ ಸಾಕ್ಷಿಗಳಾಗಬಹುದು: ಸುಪ್ರೀಂ ಕೋರ್ಟ್


  ಮೇ -23-2012

ಹೊಸದಿಲ್ಲಿ: ಕೇವಲ ದೈಹಿಕ ಅಸಮರ್ಥತೆಯ ಕಾರಣಕ್ಕಾಗಿ ಮೂಗ ಮತ್ತು ಕಿವುಡರನ್ನು ನ್ಯಾಯಾಲಯದಲ್ಲಿ ಸಾಕ್ಷಿ ನೀಡುವುದಕ್ಕೆ ವಿರೋಧಿಸುವಂತಿಲ್ಲ, ಅವರು ಲಿಖಿತವಾಗಿ ಅಥವಾ ಅಭಿನಯ ಸಂಕೇತಗಳಿಂದ ಸಾಕ್ಷಿ ನುಡಿಯಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪೊಂದರಲ್ಲಿ ತಿಳಿಸಿದೆ.

ಕೊಲೆ ಆರೋಪಿ ದರ್ಶನ್ ಸಿಂಗ್‌ನ ಶಿಕ್ಷೆಯನ್ನು ರದ್ದುಗೊಳಿಸಿ 2005, ಮಾರ್ಚ್ 29ರಂದು ರಾಜಸ್ಥಾನ ಹೈಕೋರ್ಟ್ ನೀಡಿರುವ ತೀರ್ಪೊಂದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಕೇವಲ ದೈಹಿಕ ಅಸಮರ್ಥತೆಯ ಕಾರಣಕ್ಕಾಗಿ ಓರ್ವ ಮೂಗನು ನೀಡಬಹುದಾದ ನಂಬಲರ್ಹ ಮತ್ತು ಸತ್ಯಾಸತ್ಯತೆಯ ಸಾಕ್ಷಿಯನ್ನು ತಡೆಯುವಂತಿಲ್ಲ. ಮಾತನಾಡಲಾಗದ ಅಂತಹ ಸಾಕ್ಷಿಗಳು ಅಕ್ಷರಸ್ಥರಾಗಿದ್ದರೆ ಲಿಖಿತವಾಗಿ ಅಥವಾ ಬರೆಯಲು ಹಾಗೂ ಓದಲು ಆತ ಅಸಮರ್ಥನಾಗಿದ್ದರೆ ಸಂಕೇತ ಅಥವಾ ಅಭಿನಯದ ಮೂಲಕ ಸಾಕ್ಷ ನೀಡಬಹುದು ಎಂದು ಸುಪ್ರೀಂ ಕೋರ್ಟ್‌ಗಳಾದ ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ಮತ್ತು ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.
‘‘ಭಾಷೆಯು ಶಬ್ದಗಳಿಗಿಂತ ಮಿಗಿಲು. ಇತರ ಎಲ್ಲ ಭಾಷೆಗಳಂತೆ, ಸಂಕೇತದ ಸಂವಹನಕ್ಕೆ ತನ್ನದೇ ಆದ ಕೆಲವು ಮೂಲ ಸ್ವರೂಪಗಳಿವೆ. ಹೀಗಾಗಿ ಅದರ ಬಳಕೆದಾರ ಏನನ್ನು ಹೇಳಲು ಬಯಸುತ್ತಿದ್ದಾನೆ ಎಂಬುದನ್ನು ಅರ್ಥೈಸಿಕೊಳ್ಳುವುದು ಕೊಂಚ ಕಷ್ಟದಾಯಕವಾದುದು’’ ಎಂದು ಚೌಹಾಣ್ ಹೇಳಿದ್ದಾರೆ.
ಮೂಗ ಮತ್ತು ಕಿವುಡರನ್ನು ನ್ಯಾಯಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ, ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಮತ್ತು ನ್ಯಾಯಾಲಯದ ಪ್ರಮಾಣದ ನಿಯಮಗಳನ್ನು ಅಥೈಸಿಕೊಳ್ಳುವಷ್ಟು ಸಾಮರ್ಥ್ಯ ಆತನಿಗಿದೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಎಚ್ಚರಿಕೆಯನ್ನೂ ನೀಡಿದೆ.

ರಾಷ್ಟ್ರೀಯ ರಜೆಗಳಿಗೆ ಸ್ಪಷ್ಟ ಆದೇಶಇಲ್ಲ: ಆರ್‌ಟಿಐ ಮಾಹಿತಿ


  ಮೇ -23-2012

ಲಕ್ನೊ, : ಜನವರಿ 26, ಆಗಸ್ಟ್ 15 ಮತ್ತು ಅಕ್ಟೋಬರ್ 2ರಂದು ಸರಕಾರ ರಾಷ್ಟ್ರೀಯ ರಜೆ ಎಂದು ಸರ್ವೇ ಸಾಮಾನ್ಯವಾಗಿ ಸಾರಿಕೊಂಡು ಬಂದಿದೆ.ಆದರೆ ಈ ರಜೆಗಳನ್ನು ಯಾವ ಅಧಿಕೃತ ಸುತ್ತೋಲೆಯ ಆಧಾರದಲ್ಲಿ ನೀಡಲಾಗುತ್ತದೆ ಎಂಬುದರ ಬಗ್ಗೆ ಸರಕಾರದಲ್ಲಿ ಸ್ಪಷ್ಟತೆಯಿಲ್ಲ ಎಂಬುದು ಬಾಲಕಿಯೊಬ್ಬಳು ಸಲ್ಲಿಸಿರುವ ಆರ್‌ಟಿಐ ಮಾಹಿತಿಯಿಂದ ತಿಳಿದು ಬಂದಿದೆ.ಲಕ್ನೊದ ಹತ್ತರ ಹರೆಯದ ಹುಡುಗಿ ಐಶ್ವರ್ಯಾ ಪರಾಶರ್ ಮಾಹಿತಿ ಹಕ್ಕು ಕಾಯ್ದೆ 2005ರನ್ವಯ ಮಾಹಿತಿ ಕೋರಿದ ಅರ್ಜಿಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವಾಲಯವು ನೀಡಿರುವ ಪ್ರತಿಕ್ರಿಯೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ.ಮೂರು ಸರಕಾರಿ ರಜೆಗಳಿಗೆ ಸಂಬಂಧಿಸಿದ ಆದೇಶದ ಸುತ್ತೋಲೆಯ ಪ್ರತಿಯನ್ನು ನೀಡುವಂತೆ ಆರನೆ ತರಗತಿಯ ಬಾಲಕಿ ಎಪ್ರಿಲ್ 25ರಂದು ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದಳು. ಜನವರಿ 26, ಆಗಸ್ಟ್ 15 ಮತ್ತು ಅಕ್ಟೋಬರ್‌ರಂದು ಕೇಂದ್ರ, ರಾಜ್ಯ ಹಾಗೂ ಖಾಸಗಿ ವಲಯದಲ್ಲಿ ರಜೆ ನೀಡಲಾಗುತ್ತದೆ. ಆದರೆ ಈ ರಜೆಗಳಿಗೆ ಅಂತಹ ಯಾವುದೇ ಆದೇಶ ಇಲ್ಲಿಯವರೆಗೂ ನೀಡಲಾಗಿಲ್ಲ ಎಂದು ಗೃಹ ಸಚಿವಾಲಯವು ಉತ್ತರಿಸಿರುವುದಾಗಿ ಸಿಟಿ ಮಾಂಟೆಸರಿ ಶಾಲೆಯ ವಿದ್ಯಾರ್ಥಿನಿ ಐಶ್ವರ್ಯಾ ಹೇಳಿದ್ದಾಳೆ.
ಗಾಂಧೀಜಿಗೆ ‘ರಾಷ್ಟ್ರಪಿತ’ ಎಂಬ ಹೆಸರನ್ನು ಯಾವ ಆದೇಶದಲ್ಲಿ ನೀಡಲಾಗಿದೆ ಎಂದು ಈ ಹಿಂದೆ ಐಶ್ವರ್ಯಾ ಪ್ರಧಾನಿ ಸಚಿವಾಲಯವನ್ನು ಕೇಳಿ, ದೇಶದ ಗಮನ ಸೆಳೆದಿದ್ದಳು.ಆದರೆ ಈ ಬಗ್ಗೆಯೂ ಯಾವುದೇ ಆದೇಶ ನೀಡಲಾಗಿಲ್ಲ ಎಂದು ಕೇಂದ್ರವು ಆಕೆಯ ಅರ್ಜಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ತಿಳಿಸಿತ್ತು. ಈ ಬಾರಿ ಗಾಂಧಿ ಜಯಂತಿಯಾದ ಅಕ್ಟೋಬರ್ 2ರಂದು ಸರಕಾರಿ ರಜೆ ನೀಡಲೂ ಯಾವುದೇ ಸರಕಾರಿ ಆದೇಶವಿಲ್ಲ ಎಂಬುದನ್ನು ಐಶ್ವರ್ಯಾ ಸಚಿವಾಲಯದಿಂದ ದೃಢ ಪಡಿಸಿಕೊಂಡಿದ್ದಾಳೆ.

ಪೆಟ್ರೋಲ್‌ಗೆ ಮತ್ತೆ ಬೆಂಕಿಲೀ.ಗೆ ರೂ. 7.5ರಷ್ಟು ಹೆಚ್ಚಳ


  ಮೇ -23-2012

ಹೊಸದಿಲ್ಲಿ:ಪೆಟ್ರೋಲ್‌ನ ಬೆಲೆಯು ಇಂದು ಮಧ್ಯ ರಾತ್ರಿಯಿಂದ ಲೀಟರ್‌ಗೆ ರೂ. 7.50ರಷ್ಟು ತೀವ್ರ ಹೆಚ್ಚಳವಾಗಲಿದೆ.ರೂಪಾಯಿಯ ಬೆಲೆ ಡಾಲರ್‌ನೆದುರು ಭಾರೀ ಕುಸಿತ ಕಂಡಿರುವುದರಿಂದ ಈ ಹೆಚ್ಚಳ ವನ್ನು ನಿರೀಕ್ಷಿಸಲಾಗಿತ್ತು. ಬುಧವಾರ ರೂಪಾಯಿ ಯ ಬೆಲೆ ಡಾಲರ್‌ಗೆ 56ರಕ್ಕೆ ಕುಸಿದಿದೆ.ಸ್ಥಳೀಯ ತೆರಿಗೆ ಅಥವಾ ವ್ಯಾಟನ್ನು ಹೊರತುಪಡಿಸಿ ಪೆಟ್ರೋಲ್‌ನ ಬೆಲೆಯನ್ನು ಲೀ.ಗೆ ರೂ. 6.26ರಷ್ಟು ಏರಿಸಲು ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ನಿರ್ಧರಿಸಿವೆ. ಇದರಿಂದಾಗಿ ದಿಲ್ಲಿಯಲ್ಲಿ ಪೆಟ್ರೋಲ್‌ನ ಬೆಲೆ ರೂ. 7.50ರಷ್ಟು ಹೆಚ್ಚಾಗಲಿದ್ದು, ಇದು ಭಾರೀ ಪ್ರಮಾಣದ ಬೆಲೆಯೇರಿಕೆಯಾಗಿದೆ.ದಿಲ್ಲಿಯಲ್ಲಿ ಪೆಟ್ರೋಲ್‌ನ ಬೆಲೆ ಪ್ರಕೃತ ಲೀ.ಗೆ ರೂ. 65.64 ಇದ್ದು, ಬೆಲೆ ಹೆಚ್ಚಳದಿಂದಾಗಿ ಅದು ರೂ. 73.14ಕ್ಕೆ ತಲುಪಲಿದೆ. ಪೆಟ್ರೋಲ್‌ನ ಬೆಲೆಯನ್ನು ಕನಿಷ್ಠ ರೂ. 4ರಷ್ಟು ಏರಿಸುವಂತೆ ತೈಲ ಸಂಸ್ಥೆಗಳು ಸರಕಾರ ವನ್ನು ಕೋರಿದ್ದವು.ತಕ್ಷಣವೇ ತೈಲ ಬೆಲೆ ಏರಿಸುವ ಅಗತ್ಯವಿದೆ ಯೆಂದು ಪೆಟ್ರೋಲಿಯಂ ಸಚಿವ ಎಸ್.ಜೈಪಾಲ ರೆಡ್ಡಿ ಮಂಗಳವಾರ ಹೇಳಿದ್ದರಾದರೂ ಯಾವಾಗಿನಿಂದ ಎಂಬುದನ್ನು ತಿಳಿಸಿರಲಿಲ್ಲ.
2010ರ ಜೂನ್‌ನಲ್ಲಿ ಸರಕಾರವು ಪೆಟ್ರೋಲ್ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಿತ್ತು. ಕಳೆದ ನ.4ರಂದು ಪೆಟ್ರೋಲ್ ಬೆಲೆಯನ್ನು ಕೊನೆಯ ಬಾರಿ ಹೆಚ್ಚಿಸಲಾಗಿತ್ತು.ಡೀಸೆಲ್, ಸೀಮೆಣ್ಣೆ ಹಾಗೂ ಅಡುಗೆ ಅನಿಲದ ಬೆಲೆಯನ್ನು 2011ರ ಜೂನ್‌ನಲ್ಲಿ ಕೊನೆಯ ಬಾರಿ ಏರಿಸಲಾಗಿದೆ. 2012ರ ಮಾರ್ಚ್‌ಗೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ತೈಲ ಸಂಸ್ಥೆಗಳು ಪೆಟ್ರೋಲ್ ಮಾರಾಟದಲ್ಲಿ ರೂ. 4,860 ಕೋಟಿ ನಷ್ಟ ಅನುಭವಿಸಿತು. ಈಗಲೂ ಲೀಟರ್ ಪೆಟ್ರೋಲಿನ ಮೇಲೆ ರೂ. 6.28 ನಷ್ಟವಾಗುತ್ತಿದೆ.

Tuesday 22 May 2012

ಮದ್ಯ ಕುಡಿಸಿ, ಬಾಲಕಿಯ ಮೇಲೆ ಅತ್ಯಾಚಾರ


  ಮೇ 22, 2012,

 
ಅಮರಾವತಿ: ಅಪ್ರಾಪ್ತ ವಯಸಿನ ಬಾಲಕಿಗೆ ಮದ್ಯ ಕುಡಿಸಿ, ಅತ್ಯಾಚಾರವೆಸಗಿದ ಆರೋಪದ ಮೇಲೆ ಮಧ್ಯವಯಸ್ಕ ಮದ್ಯವ್ಯಸನಿಯನ್ನು ನಗರದ ಕೊತ್ವಾಲಿ ಪೊಲೀಸರು ಬಂಧಿಸಿದ್ದಾರೆ.

ಗಜಾನನ ಸಾವರ್ಕರ್ ಮತ್ತು ಅವನ ಸಹಚರ ನಗರದ ನಮೂನಾ ಪ್ರದೇಶದಲ್ಲಿ 9ನೇ ತರಗತಿಯ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ 14 ವರ್ಷದ ಬಾಲಕಿಯನ್ನು ಗಜಾನನ ಮೊದಲು ತಡೆದು ನಿಲ್ಲಿಸಿದ್ದಾನೆ. ತಮ್ಮೊಂದಿಗೆ ಬರಲು ಬಲವಂತಪಡಿಸಿದ್ದಾರೆ. ಬಾಲಕಿ ಅದನ್ನು ತಿರಸ್ಕರಿಸಿದಾಗ ಬಲವಂತವಾಗಿ ಆಕೆಗೆ ಮದ್ಯ ಕುಡಿಸಿ ಕರೆದೊಯ್ದಿದ್ದಾರೆ.

ನಂತರ ಗಜಾನನ ಬಾಲಕಿಯನ್ನು ತನ್ನ ಬೈಕಿನಲ್ಲಿ ಎಸ್ ಟಿ ಸ್ಟಾಂಡಿಗೆ ಕರೆದೊಯ್ದಿದ್ದಾನೆ. ಅಲ್ಲಿಂದ ಮುಂದೆ ಆಟೋ ರಿಕ್ಷಾದಲ್ಲಿ ಪ್ರಶಾಂತ್ ನಗರ ಗಾರ್ಡನಿಗೆ ಕರೆದೊಯ್ದು ಅಲ್ಲಿ ಮತ್ತೆ ಮದ್ಯ ಕುಡಿಸಿ, ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಘಟನೆ ನಡೆದು 2 ದಿನ ಕಳೆದಿದ್ದರೂ ಪ್ರಕರಣ ಬಯಲಿಗೆ ಬಂದಿರಲಿಲ್ಲ. ಪೊಲೀಸರಿಗೆ ಮಾಹಿತಿ ನೀಡದಂತೆ ಜಗಾನನ ಬಾಲಕಿಗೆ ಹೆದರಿಸಿದ್ದ ಎಂದು ವರದಿಯಾಗಿದೆ.

ಆದರೆ ಶನಿವಾರ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗಜಾನನನ ಬೆನ್ನುಹತ್ತಿದ್ದಾರೆ. ಅವ ಪರಾರಿಯಾಗಿದ್ದಾನೆ.

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ


  - ಮೇ -22-2012 
ಮಹಾದೇವ ಹಡಪದ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನು ಪರಿಶೀಲಿಸಿ ಪ್ರತಿಕ್ರಿಯಿಸುವ ಅಗತ್ಯವಿರಲಿಲ್ಲ. ಮತ್ತು ಇಂದಿಗೂ ಆ ವ್ಯಂಗ್ಯಚಿತ್ರ ಅಂಬೇಡ್ಕರ್ ಅವರ ಘನತೆಯನ್ನೇನೂ ಕಡಿಮೆ ಮಾಡಲಾರದು. ಆದರೆ ಅದನ್ನು ಪಠ್ಯದಲ್ಲಿ ಹಾಕಿರುವುದು ಒಂದು ಅಪರಾಧವೇ ಸೈ.ಆ ಚಿತ್ರ ಅವತ್ತಿನ ಭಾರತದ ಆ ಸಂದರ್ಭಕ್ಕೆ ಸರಿಯಾಗಿ ಕಲಾವಿದನ ಮೊನಚು ನೋಟದಲ್ಲಿ ಅರಳಿರುವುದು ಒಪ್ಪೋಣ.ಹಾಗೆಂದ ಮಾತ್ರಕ್ಕೆ ಇಂದಿನ ಭಾರವಾದ ಬದುಕಿನ ಮೆಕಾಲೆ ಮೊಮ್ಮಕ್ಕಳಿಗೆ ಆ ಚಿತ್ರದ ಬಗ್ಗೆ ಏಕಮುಖಿ ಅಭಿಪ್ರಾಯ ಹೋಗುತ್ತದೆ. ಅದು ಭವಿಷ್ಯದಲ್ಲಿ ತಪ್ಪು ತಿಳುವಳಿಕೆ ನೀಡಲಾರದು ಎನ್ನುವುದು ಗ್ರಹಿಕೆಗೆ ನಿಲುಕಲಾರದ್ದೇನಲ್ಲ.ಒಂದು ಉದಾಹರಣೆ ಹೇಳುತ್ತೇನೆ- ಹೆಗ್ಗೋಡು ಹೈಸ್ಕೂಲಿನ ಒಬ್ಬ ಮಾಸ್ತರರು ಗಾಂಧಿಯ ಪಾಠವನ್ನು ಮತಾಂಧ ಹಿಂದುತ್ವ ಪ್ರತಿಪಾದನೆಯ ಮಾದರಿಯಲ್ಲಿಯೇ ಮಾಡುತ್ತಾರೆ.ಅವರ ಶಿಷ್ಯನು ಇತಿಹಾಸಕ್ಕೆ ಜಾಣಕುರುಡನಾಗಿ ಗಾಂಧಿಯನ್ನು ದ್ವೇಷಿಸುತ್ತಾನೆ.ಆ ಹುಡುಗ ಆ ಶಾಲೆಯ ಅತ್ಯುತ್ತಮ ವಿದ್ಯಾರ್ಥಿ.(ನಾನು ಹೆಗ್ಗೋಡಿನಲ್ಲಿದ್ದಾಗ ಆತ ನನ್ನ ನೆರೆಮನೆಯಾತನೂ ಆಗಿದ್ದ.) ಹೀಗಿರುವಾಗ ವ್ಯಂಗ್ಯಚಿತ್ರವನ್ನು ಪಾಠವಾಗಿ ವಿವರಿಸುವ ಆಸಾಮಿ ದೇವರ ಸೇವೆಗೆ ಬಂದವನಾಗಿದ್ದರೆ ಅಥವಾ ಅಂಬೇಡ್ಕರ್ ಕುರಿತು ಗೌರವ ಇಲ್ಲದವನಾಗಿದ್ದರೆ ಹೇಗೆ ಅದನ್ನು ಚಿತ್ರಿಸಬಹುದು ಎಂಬುದನ್ನು ಯೋಚಿಸುವುದು ಸದ್ಯದ ಅವಶ್ಯಕತೆಯಾಗಿದೆ.ಆದ್ದರಿಂದ ಅದು ಅಂಬೇಡ್ಕರರಿಗೆ ಮಾಡಿದ ಅವಮಾನವೇ ಆಗಿದೆ.

1949ರಲ್ಲಿ ಶಂಕರಪಿಳ್ಳೆ ಬರೆದ ಆ ಚಿತ್ರ ಮೂರು ವರ್ಷದ ವಿಳಂಬವನ್ನು ವಿಡಂಬಿಸಿರುವುದು ರಾಜ್ಯಶಾಸ್ತ್ರ, ಸಮಾಜವಿಜ್ಞಾನವೇನೂ ಆಗಲಾರದು. ಆ ಶ್ರಮದ ಫಲವನ್ನು ಕಾಣುತ್ತಿರುವ ಈ ಸಂದರ್ಭದಲ್ಲಿ ಪಠ್ಯವೊಂದರಲ್ಲಿ ಸೇರಿಸುವ ಮೂಲಕ (ಯಾದವ್ ಮತ್ತು ಫಲೀಷ್ಕರ್ ಅವರು ಯಾವ ಕುತಂತ್ರವನ್ನು ಹೊಂದಿದವರಲ್ಲ) ಅಂಬೇಡ್ಕರ್ ಅವರ ರಥದ ಗಾಲಿಗೆ ಕೈ ಹಾಕಿದವರ ಅಭಿಮಾನಕ್ಕೆ ಧಕ್ಕೆ ಆಗಿರುವುದಂತು ಸತ್ಯವಾದ ಮಾತು. ಆದರೆ ಪ್ರಿಯ ಪ್ರಗತಿಪರ ಚಿಂತಕರು ಆ ಪಠ್ಯವನ್ನು ಸ್ವತಃ ಸರಕಾರವೇ ಪಠ್ಯದಿಂದ ಕೈ ಬಿಡುವಾಗ ಅದನ್ನು ಪಠ್ಯದಿಂದ ಕೈ ಬಿಟ್ಟರೆ ಅಂಬೇಡ್ಕರ್ ಅವರಿಗೆ ಅವಮಾನ ಎಂದೆಲ್ಲ ಹೇಳಿ ತಮ್ಮ ಫೇಸ್‌ಬುಕ್ಕಿನ ಹಾಳೆಗಳಿಗೆ ಪ್ರತಿಕ್ರಿಯೆಯನ್ನು ಸಂಪಾದಿಸುತ್ತಿದ್ದಾರೆ. ಅವರಿಗೆ ಗೊತ್ತಿರಲಿಕ್ಕಿಲ್ಲ.. ಹಸಿವೆಗಿಂತಲೂ ಅವಮಾನದ ಕಹಿ ನುಂಗಲಾರದ ತುತ್ತೆಂಬುದು.
ಈ ಇಂಡಿಯಾದ ವರ್ಣ-ವರ್ಗ ವ್ಯವಸ್ಥೆಯಲ್ಲಿ ಇಂದಿಗೂ ಬೂದಿ ಮುಚ್ಚಿದ ಕೆಂಡದಂತಿರುವ ಅಸ್ಪೃಶ್ಯತೆ ಮತ್ತೆ ಯಾವ ಮಾದರಿಯಲ್ಲಿ ಹುಟ್ಟಿಕೊಳ್ಳುತ್ತದೋ ತಿಳಿಯದು.ಇವತ್ತಿನ ಖಾಸಗೀಕರಣದಲ್ಲಿ ಅವರವರದೇ ಸಂವಿಧಾನಗಳು, ಅವರವರಿಗೆ ಬೇಕಾದ ರೀತಿಯಲ್ಲಿ ಆಡಳಿತ ನಡೆಸುತ್ತಿವೆ.ನ್ಯಾಯಕಟ್ಟೆಗಳು ಅವರ ಇಚ್ಛೆಯಂತೆ ಅವರಿಗೆ ಬೇಕಾದವರಿಗೆ ಬೇಕುಬೇಕಾದಂತೆ ನ್ಯಾಯ ಹೇಳುತ್ತಿವೆ.ರಾಳೇಗಾಂವ್ ಸಿದ್ಧಿಯ ಗಾಂಧಿಟೋಪಿ ಬಾಬಾನೂ ಅವರೂರಿನಲ್ಲಿ ಅವರೇ ನ್ಯಾಯಾಧೀಶ, ಸರಕಾರ ಎಲ್ಲವೂ ಆಗಿದ್ದಾರೆ.ಹಾಗೆ ಮಾಡುವವರು ಸಂವಿಧಾನವನ್ನೆ ಧಿಕ್ಕರಿಸುವ ನಿಲುವುಳ್ಳವರು.ಇಂದಿಗೂ ಕರ್ನಾಟಕದ ಮಧ್ಯಭಾಗದಲ್ಲಿ ಒಂದು ಮಠ (ತರಳಬಾಳು) ಸ್ವಂತ ನ್ಯಾಯಾಲಯವನ್ನು ನಡೆಸುತ್ತದೆ ಎಂದರೆ ನಂಬುತ್ತೀರಾ? ಅಲ್ಲಿ ನ್ಯಾಯಾಧೀಶರು ಒಬ್ಬ ಪ್ರಗತಿಪರ ಮಠಾಧೀಶರು.ಹೀಗೇ ತಮ್ಮ ಸುಪರ್ದಿಯ ಯಾವ ಹಕ್ಕನ್ನೂ ಬಿಟ್ಟುಕೊಡದ ಒಂದು ವ್ಯವಸ್ಥೆ ಹನ್ನೆರಡನೆಯ ಶತಮಾನದಿಂದ ಏಕೆ ಅನಾದಿ ಕಾಲದಿಂದಲೂ ನಿರಂತರವಾಗಿ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವಾಗ ಆ ಪಠ್ಯವನ್ನು ಖಂಡಿಸಲೇಬೇಕಾಗಿತ್ತು.

ಆದ್ದರಿಂದ ಆ ಸಂಘಟನೆಯ ಮುಖಂಡನಿಗೆ ಅದು ಬರೀ ಕುರುಡು ಅಭಿಮಾನ ಇದ್ದಿರಬಹುದು. ಹಾಗೆಂದ ಮಾತ್ರಕ್ಕೆ ಅವರ ಹಲ್ಲೆಯನ್ನು ತಿರಸ್ಕರಿಸುವಷ್ಟು ಅಪರಾಧವೇನೂ ಅಲ್ಲ. ಯಾಕೆಂದರೆ ಯಾವ ಹುತ್ತದಲ್ಲಿ ಎಂಥ ವಿಷಕಾರಿ ಹಾವು ಕೂತಿರುತ್ತದೆಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಜಾತಿ ರಾಜಕಾರಣದ ನಡುವೆ ತಳ ಸಮುದಾಯಗಳು ಒಡೆದ ಮನೆಗಳಂತೆ ಮೇಲುಕೀಳಿನ ಅಂದಾಜು ಲೆಕ್ಕಾಚಾರದಲ್ಲಿ ನನೆಗುದಿಗೆ ಬಿದ್ದಿರುವಾಗ ಮತ್ತೆ ಸನಾತನ ವ್ಯವಸ್ಥೆ ಸ್ಥಾಪಿಸುವ ಎಲ್ಲ ತಯಾರಿಯನ್ನು ಈ ಮೇಲ್ಜಾತಿಗಳು ಮಾಡಿ ಕೊಂಡು ಕೂತಿರುವುದನ್ನು ಕಾಣುತ್ತಿದ್ದೇವೆ. ಅಲ್ಲಾ ಸ್ವಾಮಿ, ಕನ್ನಡ ಪಿಚ್ಚರ್ ಒಂದರಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ ಎಂದು ಕಿರಚಾಡುವ ಕಪಿ ಸೈನ್ಯದಂತೆ ದಲಿತ ಸಂಘಟನೆಗಳೂ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪುಗ್ರಹಿಕೆ. ನಿಜವಾಗಲೂ ದಲಿತ ಸಂಘಟನೆಗಳಿಗೆ ಈಗಲೂ ಬದ್ಧತೆ ಇದೆ. ಬದುಕಿನ ಬಗ್ಗೆ ತೀವ್ರ ಕಾಳಜಿ ಇದೆ.

ಅದೆಷ್ಟೋ ವರ್ಷಗಳಿಂದ ಕತ್ತಿನ ಮೇಲೆ ಕಾಲಿಟ್ಟು ಒತ್ತಲ್ಪಟ್ಟ ಉಸುರಿಗೆ ಹೊಸ ಚೈತನ್ಯ ಕೊಟ್ಟ ಜೀವಧಾತುವಿನ ವಿಳಂಬದ ವ್ಯಂಗ್ಯ ಚಿತ್ರವನ್ನಿಟ್ಟುಕೊಂಡು ಇತಿಹಾಸದ ಪಾಠ ಮಾಡುವುದಾದರೆ ಇವತ್ತಿನ ವಾಸ್ತವವನ್ನು ಕಲಿಯುವ ವಿದ್ಯಾರ್ಥಿಗೆ ಸ್ವತಃ ಅನುಭವಕ್ಕೆ ಬರುವಂತೆ ಮಾಡಲು ತಹಶೀಲ್ದಾರನೊಬ್ಬ ತನ್ನ ಸ್ವಂತ ಮಗಳಿಗೆ ತಟ್ಟೆ ಕೊಟ್ಟು ದೇವಸ್ಥಾನದ ಮುಂದೆ ಕೂತು ಭಿಕ್ಷೆ ಬೇಡುವುದನ್ನು ಪಠ್ಯವಾಗಿ ಇಡಲು ಬಯಸುತ್ತೀರಾ?  ಸರಕಾರ ವ್ಯಂಗ್ಯಚಿತ್ರವನ್ನು ಪುಸ್ತಕದಿಂದ ನಿಷೇಧ ಮಾಡಿರುವುದು ಸ್ವಾಗತಾರ್ಹ.

ಐಪಿಎಲ್ ಕೊರಳಿಗೆ ಬೀಳಲಿ ಕಾನೂನಿನ ಉರುಳು


  ಮೇ -22-2012

ಕುಡಿದು ತೂರಾಡುವುದು, ಕಾವಲು ಸಿಬ್ಬಂದಿಯೊಂದಿಗೆ ಅವಾಚ್ಯ ಮಾತನಾಡುವುದು, ರೇವ್‌ಪಾರ್ಟಿಗಳಲ್ಲಿ ಕುಡಿದು ಬಂಧನ ಕ್ಕೊಳಗಾಗುವುದು, ಅತ್ಯಾಚಾರಕ್ಕೆ ಯತ್ನಿಸುವುದು, ಬುಕ್ಕಿಗಳ ಜೊತೆ ಶಾಮೀಲಾಗುವುದು ಇವುಗಳೆಲ್ಲವೂ ಕ್ರಿಕೆಟ್‌ನ ಅನಿವಾರ್ಯ ಭಾಗಗಳೇ? ಹೌದು ಎನ್ನುತ್ತಿದೆ ಐಪಿಎಲ್. ಕೇವಲ ಕಳೆದ ಒಂದು ವಾರದ ಘಟನೆಗಳನ್ನು ಅವಲೋಕಿಸಿದರೆ ಸಾಕು, ಐಪಿಎಲ್ ಹೆಸರಿನಲ್ಲಿ ನಡೆಯುತ್ತಿರುವ ದಂಧೆಯ ಕರಾಳ ಮುಖದ ಪರಿಚಯವಾಗುತ್ತಿದೆ. ಹೆಸರಿಗಷ್ಟೇ ಕ್ರಿಕೆಟನ್ನು ಮುಂದಿಟ್ಟುಕೊಂಡು, ಹಣ, ಹೆಂಡ, ಹೆಣ್ಣುಗಳ ನಡುವೆ ಹೊರಳಾಡುತ್ತಿರುವ ಮಂದಿಯ ನಿಜ ಮುಖ ಕಳೆದ ಒಂದು ವಾರದಲ್ಲೇ ಬೇರೆ ಬೇರೆ ಪ್ರಕರಣಗಳಲ್ಲಿ ಬೆಳಕಿಗೆ ಬಂದಿದೆ.ಜನ ಮಾತ್ರ, ಇದೆಲ್ಲವೂ ಕ್ರಿಕೆಟ್‌ನ ಅನಿವಾರ್ಯ ಭಾಗವಾಗಿರಬೇಕು ಎಂಬಂತೆ ಮಗ್ನರಾಗಿ ನೋಡುತ್ತಿದ್ದಾರೆ. ಆದರೆ ಹಿತ್ತಲಿಂದ ತಮ್ಮ ಮನೆಯ ಬಾಗಿಲನ್ನು ಒಡೆದು ಹಣವನ್ನು ದೋಚುತ್ತಿರುವುದರ ಅರಿವೇ ಇವರಿಗಿಲ್ಲ.
ಐಪಿಎಲ್‌ನ ವಿರುದ್ಧ ಟೀಕೆಗಳು ಕೇಳಿ ಬರುತ್ತಿರುವುದು ಇಂದು ನಿನ್ನೆಯಲ್ಲ. ಪ್ರಜ್ಞಾವಂತರ ಟೀಕೆ, ಆಕ್ರೋಶದ ನಡುವೆಯೇ ಐಪಿಎಲ್‌ನ ಹರಾಜಿಗೆ ಚಾಲನೆ ದೊರಕಿತು. ಕ್ರಿಕೆಟ್ ತಾರೆಯರು ವೇಶ್ಯೆಯರಂತೆ ತಮ್ಮನ್ನು ತಾವು ಹರಾಜು ಹಾಕಿಕೊಂಡರು. ಮಲ್ಯ, ಶಾರುಕ್‌ರಂತಹ ಹಣವಂತರು ಅವರನ್ನು ಹಾಡಹಗಲು ಹಣ ಕೊಟ್ಟು ಕೊಂಡುಕೊಂಡರು. ಕ್ರಿಕೆಟ್ ಒಂದು ಆಟ ಎಂದೇ ಆ ವರೆಗೆ ನಂಬಲಾಗಿತ್ತು. ಅದೆಲ್ಲವನ್ನೂ ಐಪಿಎಲ್ ಉದ್ಯಮ ಸುಳ್ಳು ಎಂದು ಘೋಷಿಸಿತು.
ಕ್ರಿಕೆಟ್ ಕೇವಲ ಆಟವೇ ಆಗಿದ್ದರೆ ಅಲ್ಲಿ ಮಲ್ಯರಿಗೇನು ಕೆಲಸ? ಶಾರುಕ್, ಪ್ರೀತಿ ಝಿಂಟಾರಿಗೇನು ಕೆಲಸ? ಅಷ್ಟೇ ಅಲ್ಲ ಅಂಗೈ ಅಗಲದ ಬಟ್ಟೆ ಹಾಕಿ ಕುಣಿಯುತ್ತಿರುವ ಹುಡುಗಿಯರಿಗೇನು ಕೆಲಸ? ಕ್ರಿಕೆಟ್ ಎಂದರೆ ಆಟ ಅಲ್ಲ. ಅದೊಂದು ಉದ್ಯಮ. ಮನೋರಂಜನಾ ಉದ್ಯಮ. ಚಿತ್ರೋದ್ಯಮವಿದ್ದಂತೆ. ಅದರ ಮುಖ್ಯ ಉದ್ದೇಶ ಜನರನ್ನು ರಂಜಿಸಿ, ಅವರಿಂದ ಹಣವನ್ನು ದೋಚುವುದು. ಬಾಲಿವುಡ್‌ನಲ್ಲಿ ನಡೆಯುತ್ತಿರುವುದು ಅದೇ ತಾನೆ? ಮಲ್ಯ ತನ್ನ ಕುದುರೆ ರೇಸ್‌ನಲ್ಲಿ, ಬಿಯರ್ ಬಾಟಲ್‌ಗಳ ಮೂಲಕ ಮಾಡುತ್ತಿರುವುದು ಅದೇ ತಾನೆ? ಸೌಹಾರ್ದಕ್ಕಾಗಿ ಕ್ರಿಕೆಟ್, ಮೈತ್ರಿಗಾಗಿ ಕ್ರಿಕೆಟ್ ಎಂಬೆಲ್ಲ ಮೌಲ್ಯಗಳು ದೂರ ಸರಿದು, ಐಪಿಎಲ್ ಮೂಲಕ ಹಣದಿಂದ, ಹಣಕ್ಕಾಗಿ, ಹಣದ ಮೂಲಕ ಕ್ರಿಕೆಟ್ ಎನ್ನುವ ಹೊಸ ನಿಯಮವೊಂದು ಸೃಷ್ಟಿಯಾಯಿತು. ಆ ವರೆಗೆ ಕದ್ದು ಮುಚ್ಚಿ ನಡೆಯುತ್ತಿದ್ದ ಮೋಸಗಳೆಲ್ಲವನ್ನೂ ಸಕ್ರಮೀಕರಿಸಲಾಯಿತು.
ಮೋಸ, ಜೂಜು, ಅನೈತಿಕತೆ ಇವೆಲ್ಲವನ್ನೂ ಮನೋರಂಜನಾತ್ಮಕ ಕ್ರಿಕೆಟ್ ಎಂದು ನೋಡುಗರಿಗೆ ಉಣಿಸಲಾ ಯಿತು. ಇಂದು ಅದರ ಪರಿಣಾಮವನ್ನು ದೇಶ ಉಣ್ಣುತ್ತಿದೆ. ಜನಸಾಮಾನ್ಯರ ಮೇಲೆ, ಹೊಸ ತಲೆಮಾರುಗಳ ಮೇಲೆ ಈ ಕ್ರಿಕೆಟ್ ಮಾಡುತ್ತಿರುವ ದುಷ್ಪರಿಣಾಮ ಊಹಿಸಲಸಾಧ್ಯ. ಈ ಕ್ರಿಕೆಟ್ ಆಡುವವರೆಲ್ಲ ಯುವಕರಿಗೆ ಆದರ್ಶವಾಗುತ್ತಿದ್ದಾರೆ. ಅವರ ಆಟ ಮಾತ್ರವಲ್ಲ, ರೇವ್ ಪಾರ್ಟಿ, ಕುಡಿತ, ಸಿಗರೇಟ್ ಎಲ್ಲವನ್ನೂ ನಮ್ಮ ಯುವ ತಲೆಮಾರು ಆದರ್ಶವಾಗಿ ಸ್ವೀಕರಿಸುತ್ತಿದೆ. ಹರಿಯುತ್ತಿರುವ ಹಣದ ಹೊಳೆ ಯಲ್ಲಿ ಈ ಆಟಗಾರರನ್ನು, ಅದರ ಪ್ರಾಯೋಜಕ ರನ್ನು, ಬುಕ್ಕಿಗಳನ್ನು ತಡೆದು ನಿಲ್ಲಿಸುವವರೇ ಇಲ್ಲವಾಗಿದೆ.
ಇದೀಗ ಐಪಿಎಲ್ ಕ್ರಿಕೆಟ್‌ನ ವಿರುದ್ಧ ಹಲವರು ಧ್ವನಿಯೆತ್ತಿದ್ದಾರೆ. ಮಾಜಿ ಕ್ರಿಕೆಟಿಗ, ಬಿಜೆಪಿಯ ಮುಖಂಡ ಕೀರ್ತಿ ಅಜಾದ್ ಇದರ ವಿರುದ್ಧ ಉಪವಾಸ ಕುಳಿತು ಸುದ್ದಿ ಮಾಡಿದರು. ಮಧ್ಯ ಪ್ರದೇಶ ಸರಕಾರ, ಐಪಿಎಲ್‌ಗೆ ಅವಕಾಶವಿಲ್ಲ ಎಂದು ಖಡಕ್ಕಾಗಿ ಹೇಳಿದೆ. ರಾಜಕೀಯ ಕಾರಣ ಏನೇ ಇರಲಿ, ಮಧ್ಯಪ್ರದೇಶ ಸರಕಾರದ ನಿರ್ಧಾರವನ್ನು ನಾವು ಸ್ವಾಗತಿಸಲೇ ಬೇಕು. ಇಂಡಿಯನ್ ಪ್ರೀಮಿಯರ್ ಲೀಗ್ ಒಂದು ನಾಚಿಗೆಗೇಡು ಎಂದು ಅಲ್ಲಿನ ಮುಖ್ಯಮಂತ್ರಿ ಕರೆದಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ಕಪ್ಪು ಹಣದ ಬಳಕೆ ಐಪಿಎಲ್‌ನಲ್ಲಿ ವ್ಯಾಪಕವಾಗಿದೆ ಎನ್ನುವುದೂ ಗುಟ್ಟಿನ ಸಂಗತಿಯಾಗಿ ಉಳಿದಿಲ್ಲ. ಈ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು ಎಂದು ಈಗಾಗಲೇ ಕ್ರೀಡಾ ಸಚಿವಾಲಯವು ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದೆ.
ಬಿಸಿಸಿಐ ಮತ್ತು ಇತರ ನೋಂದಾಯಿತ ಕ್ರೀಡಾ ಸಂಸ್ಥೆಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ಸ್ವತಂತ್ರ ವ್ಯಕ್ತಿಗಳಿಂದ ವಿಶೇಷ ಲೆಕ್ಕ ಪರಿಶೋಧನೆ ನಡೆಸ ಬೇಕೆಂದೂ ಕ್ರೀಡಾ ಸಚಿವಾಲಯವನ್ನು ಒತ್ತಾಯಿಸಲಾಗಿದೆ.ಈ ಮೂಲಕ ಐಪಿಎಲ್ ಹೆಸರಿನಲ್ಲಿ ನಿಜಕ್ಕೂ ನಡೆಯುತ್ತಿರುವುದು ಏನು ಎನ್ನುವುದನ್ನು ಸಂಪೂರ್ಣವಾಗಿ ತೆರೆದಿಡಲು ಸಾಧ್ಯವಾಗಲಿದೆ.ಐಪಿಎಲ್ಲನ್ನು ತಕ್ಷಣ ನಿಷೇಧಿಸುವುದಂತೂ ಅಸಾಧ್ಯ.ಬದಲಿಗೆ ಕಾನೂನಿನ ಉರುಳನ್ನಾದರೂ ಬಿಗಿ ಮಾಡಬೇಕು.ಕಪ್ಪು ಹಣದ ಕುಳಗಳ ಕುತ್ತಿಗೆಯನ್ನು ಕಾನೂನು ಬಿಗಿದರೆ, ಐಪಿಎಲ್‌ನ ಸ್ವೇಚ್ಛಾಚಾರಕ್ಕೂ ಕಡಿವಾಣ ಬೀಳುತ್ತದೆ.
ಹಾಗೆಯೇ ಕ್ರೀಡಾಳುಗಳು ಮತ್ತು ನಟರ ಪುಂಡಾಟಗಳನ್ನು ಕಠಿಣ ಕ್ರಮಗಳ ಮೂಲಕ ತಡೆಯ ಬೇಕಾಗಿದೆ.ಕಾನೂನು ಎಲ್ಲರಿಗೂ ಒಂದೇ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಬೇಕಾಗಿದೆ.ಐಪಿಎಲ್ ಎನ್ನುವ ಉದ್ಯಮ ಒಂದು ರೋಗದಂತೆ ನಮ್ಮ ಸಮಾಜವನ್ನು ಸುತ್ತಿಕೊಳ್ಳುವ ಮೊದಲು ಅದನ್ನು ಹೆಡೆಮುರಿ ಕಟ್ಟಿ ಅರಬೀ ಸಮುದ್ರಕ್ಕೆ ಎಸೆಯುವುದು ಅತ್ಯಗತ್ಯವಾಗಿದೆ.

ಅಡುಗೆ ಅನಿಲ ವಿತರಣೆಯ ಬಗ್ಗೆ ಮಾಹಿತಿ ಹಕ್ಕು ಖಾಯಿದೆ ನಿಯಮ 2005 ರಂತೆ ಮಂಜೇಶ್ವರ ಗ್ರಾಹಕರ ವೇದಿಕೆಗೆ ಲಭಿಸಿದ ಉತ್ತರಗಳು


ಮಂಜೇಶ್ವರ್ ಟೈಮ್ಸ್ ಮೇ 22-2012
ಮಂಜೇಶ್ವರ:ಮಂಜೇಶ್ವರ ಗ್ರಾಹಕರ ವೇದಿಕೆಯು  ಅಡುಗೆ ಅನಿಲ ಗ್ರಾಹಕರ ಸಂಶಯಾಸ್ಪದ ಪ್ರಶ್ನೆಗಳನ್ನು  ಕ್ರೂಡೀಕರಿಸಿ ಕಾಸರಗೋಡು  ತಾಲೂಕು ಸಪ್ಲೈ ಅಧಿಕಾರಿಗೆ ಮಾಹಿತಿ ಹಕ್ಕು ಖಾಯಿದೆ ನಿಯಮ 2005 ರಂತೆ ಮನವಿಯನ್ನು ಸಲ್ಲಿಸಿದಾಗ ಅದಕ್ಕೆ ಅಧಿಕಾರಿಗಳು ನೀಡಿದ ಉತ್ತರಗಳನ್ನು ಈ ಕೆಳಗೆ ಕೊಡಲಾಗಿದೆ.ಇದು ಜಿಲ್ಲೆಯಲ್ಲಿರುವ ಎಲ್ಲಾ ಅಡುಗೆ ಅನಿಲ ವಿತರಕರಿಗೂ ಅನ್ವಯವಾಗಿದೆ.
ಪ್ರಶ್ನೆ 1) ಗ್ರಾಹಕರಿಗೆ ಒಂದು ಅಡುಗೆ ಅನಿಲ ಸಿಲಿಂಡರ್ ಸಿಕ್ಕಿ ಬುಕ್ಕಿಂಗ್ ಮಾಡಿದ ನಂತ್ರ ಎಷ್ಟು ದಿನದೊಳಗೆ ಇನ್ನೊಂದು ಸಿಲಿಂಡರನ್ನು ವಿತರಕರು ಗ್ರಾಹಕರೀಗೆ ತಲುಪಿಸಬೇಕಾಗಿದೆ?
ಉತ್ತರ:ಬುಕ್ಕಿಂಗ್ ಮಾಡಿದ ದಿನಾಂಕದಿಂದ 21 ದಿವಸಗಳು
ಪ್ರಶ್ನೆ 2) ವಿತರಕರು (ಏಜನ್ಸಿಗಳು) ಗ್ರಾಹಕರಿಗೆ ದಾರಿ ಮಧ್ಯೆ ಅಥವಾ ಅಂಗಡಿಗಳನ್ನು ಕೇಂದ್ರೀಕರಿಸಿಕೊಂಡು ಅಡುಗೆ ಅನಿಲವನ್ನು ವಿತರಿಸಬಹುದೇ?
ಉತ್ತರ: ವಿತರಿಸಬಾರದು,ವಿತರಿಸುವುದು ನಿಯಮ ವಿರುದ್ದವಾಗಿದೆ.
ಪ್ರಶ್ನೆ 3) ಅಡುಗೆ ಅನಿಲ ವಿತರಕರು ಗ್ರಾಹಕರನ್ನು ತಮ್ಮ ಕಛೇರಿಗೆ ಕರೆಸಿ ತಮ್ಮ ಗೋಡಾನ್ ನಿಂದ ನೇರವಾಗಿ ಗ್ಯಾಸ್ ಸಿಲಿಂಡರನ್ನು ನೀಡಬಹುದೇ?ಹಾಗೆ ಒಂದು ವೇಳೆ ವಿತರಿಸಿದರೂ ಅದು ನಿಯಮ ವಿರುದ್ದವೇ?
ಉತ್ತರ:ಗ್ರಾಹಕರನ್ನು ನೇರವಾಗಿ ಗೋಡಾನ್ ಗೆ ಕರೆಸಿ ಗ್ಯಾಸ್ ಸಿಲಿಂಡರ್ ವಿತರಿಸಬಾರದಾಗಿದೆ. ಒಂದು ವೇಳೆ ಹಾಗೇನಾದರೂ ಯಾವುದಾದರೂ ಗ್ಯಾಸ್ ಏಜನ್ಸಿ ವಿತರಿಸಿದರೆ ಅದು ನಿಯಮ ವಿರುದ್ದ ಅಂದ್ರೆ(ಕಾನೂನಿನ ಉಲ್ಲಂಘನೆ) ಆಗಿರುತ್ತದೆ.
ವಿ.ಸೂ: ಗ್ರಾಹಕರಿಗೆ ಜಿಲ್ಲೆಯಲ್ಲಿರುವ ಯಾವುದಾದರೂ ಅಡುಗೆ ಅನಿಲ ವಿತರಕರ  ಬಗ್ಗೆ ದೂರುಗಳೇನಾದರೂ ಇದ್ದರೆ ಲಿಖಿತವಾಗಿ ಬರೆದು ಮಂಜೇಶ್ವರ ಗ್ರಾಹಕರ ವೇದಿಕೆಯ ಕಛೇರಿಗೆ ತಲುಪಿಸಿದರೆ ಕಾನೂನು ಸಲಹೆ ಗಳನ್ನು ನೀಡಿ ಗ್ರಾಹಕರ ಹೋರಾಟಕ್ಕೆ ಬೆಂಬಲ ನೀಡಲಾಗುವುದೆಂದು ಗ್ರಾಹಕರ ವೇದಿಕೆಯ ಕಾರ್ಯದರ್ಶಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ


Monday 21 May 2012

ಮುಂದಿನ ರಾಷ್ಟ್ರಪತಿಯಾಗಿ ದೇವೇಗೌಡ ?



 ಮೇ 21, 2012, ಮಂಜೇಶ್ವರ್ ಟೈಮ್ಸ್

ಹಾಸನ: ಎಚ್ ಡಿ ದೇವೇಗೌಡರು ಪ್ರಧಾನಿಯಾಗಿದ್ದಾಗ ವಿಶ್ವವೇ ಮೆಚ್ಚುವಂತ ಆಡಳಿತ ನೀಡಿದ್ದರು. ದೇಶದ ಕೃಷಿಕರ ಪರ ಹೋರಾಟ ನಡೆಸಿ ತನ್ನ ಜೀವನವನ್ನು ರೈತರಿಗಾಗಿಯೇ ಮೀಸಲಾಗಿಟ್ಟಿರುವ ದೇವೇಗೌಡರು ರಾಷ್ಟ್ರಪತಿ ಗಾದಿಗೆ ಅತ್ಯಂತ ಸೂಕ್ತ ಆಯ್ಕೆಯೆಂದು ಮಾಜಿ ಸ್ಪೀಕರ್, ಜೆಡಿಎಸ್ ಮುಖಂಡ ಕೃಷ್ಣ ಹೇಳಿಕೆ ನೀಡಿದ್ದಾರೆ.

ದೇವೇಗೌಡರು ರಾಷ್ಟ್ರಪತಿ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾರೆ. ನೈಋತ್ಯ ವಲಯ ರೈಲ್ವೆ ಕಚೇರಿ, ರೈಲ್ವೆಯಲ್ಲಿ ಕನ್ನಡಿಗರಿಗೆ ಉದ್ಯೋಗ, ರಸಗೊಬ್ಬರಗಳಿಗೆ ಸಬ್ಸಿಡಿ, ಕಾವೇರಿ ಸಮಸ್ಯೆ ಮುಂತಾದ ಹತ್ತು ಹಲವಾರು ವಿಚಾರಗಳ ಬಗ್ಗೆ ಹೋರಾಟ ನಡೆಸಿದ ದೇವೇಗೌಡ ನಮ್ಮ ಹೆಮ್ಮೆಯ ಕನ್ನಡಿಗ. ಇದನ್ನೆಲ್ಲಾ ಪರಿಗಣಿಸಿ ರಾಷ್ಟ್ರೀಯ ಪಕ್ಷಗಳು ಕ್ರಿಯಾತ್ಮಕವಾಗಿ ಆಲೋಚನೆ ಮಾಡಿ ಹೆಜ್ಜೆ ಇಡಲಿ ಎಂದು ಕೃಷ್ಣ ಹೇಳಿಕೆ ನೀಡಿದ್ದಾರೆ.

ದೇವೇಗೌಡ ಅವರ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕೃಷ್ಣ, ಜೆಡಿಎಸ್ ಕಾರ್ಯಕತರು ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಜನಪರ ಕಾರ್ಯಕ್ರಮಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ರಾಜ್ಯದ ಅಭಿವೃದ್ದಿಯನ್ನು ಆಡಳಿತ ಬಿಜೆಪಿ ಸಂಪೂರ್ಣ ಕಡೆಗಣಿಸಿದೆ. ಸಮರ್ಥ ವಿರೋಧ ಪಕ್ಷವಾಗಿ ಕಾಂಗ್ರೆಸ್ ಕೂಡಾ ವಿಫಲವಾಗಿದೆ. ಹಾಗಾಗಿ ಈ ಬಾರಿ ಮತದಾರರು ದೇವೇಗೌಡರ ಹೋರಾಟವನ್ನು ಬೆಂಬಲಿಸಿ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಕೃಷ್ಣ ಆಶಯ ವ್ಯಕ್ತ ಪಡಿಸಿದ್ದಾರೆ.

സ്വകാര്യ വാഹനക്കാര്‍ക്കെതിരെ ടാക്‌സി വാഹന ഉടമകള്‍ പരാതിയുമായി രംഗത്ത്


: 2012-05-21

kasaragod.com, news, vartha, kasaragodvartha, kasaragodnews മഞ്ചേശ്വരം : സ്വകാര്യ വാഹന ഉടമകള്‍ക്കെതിരെ ടാക്‌സി വാഹന ഉടമകള്‍ പരാതിയുമായി രംഗത്ത്. ജില്ലാ കളക്ടര്‍, മംഗലാപുരം ആര്‍ ടി ഒ തുടങ്ങിയവര്‍ക്ക് പരാതി നല്‍കിയതായി പറയുന്നു.

മഞ്ചേശ്വരം. കുഞ്ചത്തൂര്‍, മാട തുടങ്ങിയ സ്ഥലങ്ങളിലെ ടാക്‌സി ജീവനക്കാര്‍ വര്‍ഷങ്ങളായി തങ്ങളുടെ വാഹനം വാടകയ്ക്ക് നല്‍കി അവരുടെ തൊഴിലായി ജീവിച്ചു വരുന്നു. എന്നാല്‍ ഇപ്പോള്‍ കുറച്ചു കാലമായി സ്വകാര്യ വാഹനക്കാര്‍ അനധികൃതമായി അവരുടെ വാഹനങ്ങള്‍ വാടകയ്ക്ക് കൊടുക്കുന്നു. അതിനാല്‍ തങ്ങള്‍ക്ക് തൊഴില്‍ തടസ്സമുണ്ടാക്കിയിരിക്കുകയാണെന്നാണ് ടാക്‌സി വാഹന ഉടമകളുടെ പരാതി. അതിനാല്‍ അനധികൃതമായി വാഹനം വാടകയ്ക്ക് നല്‍കുന്ന സ്വകാര്യ വാഹനക്കാര്‍ക്കെതിരെ ശക്തമായ നടപടി സ്വീകരിക്കണമെന്ന് എന്ന് ആവശ്യപ്പെട്ടാണ് ടാക്‌സി ഡ്രൈവര്‍മാരുടെ പ്രതിനിധിയായ സുലൈമാന്‍ മംഗലാപുരം, കാസര്‍കോട് ആര്‍ ടി ഒ, ജില്ലാ കളക്ടര്‍ എന്നിവര്‍ക്ക് പരാതി നല്‍കിയത്.

ವೆಬ್‌ಸೈಟ್‌ ಮೂಲಕ ವೇಶ್ಯಾ ದಂಧೆ, ಮೂವರು ಸೆರೆ


  ಮೇ 21, 2012, 
 Prostitution Racket Busted Koramangala Ccb Bangalore
 
ಬೆಂಗಳೂರು: ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿ ಹೈಟೆಕ್‌ ವೈಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ ಮೂವರನ್ನು ಭಾನುವಾರ(ಮೇ.20) ರಾತ್ರಿ ಬಂಧಿಸಿದ್ದಾರೆ.

ಯುವತಿಯೊಬ್ಬಳ ಹೆಸರಿನಲ್ಲಿ ಜಾಹೀರಾತು ನೀಡಿ ಮೊಬೈಲ್‌ಫೋನ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆಪಾದನೆಯ ಮೇಲೆ  ಬಂಗಾಳ ಮೂಲದ ಯುವತಿ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಪ್ರಕರಣ ದಾಖಲಿಸಿದ್ದಾರೆ.

ಬಂಧಿತರನ್ನು ಹಾಸನ ಮೂಲದ ಜಗದೀಶ್ (24), ಬಸವನಗುಡಿಯ ರಘು ಪ್ರಕಾಶ್ (25) ಹಾಗೂ ಪಶ್ಚಿಮ ಬಂಗಾಳ ಮೂಲದ ಕಾಜೋಲ್ ಪಾಲ್ (24) ಎಂದು ಗುರುತಿಸಲಾಗಿದೆ.

ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋರಮಂಗಲದ 8ನೇ ಬ್ಲಾಕ್‌ನಲ್ಲಿರುವ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಇಬ್ಬರು ಪರಾರಿಯಾಗಿದ್ದಾರೆ.

ಬಂಧಿತರಿಂದ 25,000 ರೂ.ನಗದು, ಮೂರು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಕ್ಕಿ ಮತ್ತು ರಾಹುಲ್ ಎಂಬವರು ತಲೆ ಮರೆಸಿಕೊಂಡಿದ್ದು, ಹುಡುಕಾಟ ಜಾರಿಯಲ್ಲಿದೆ ಎಂದು ಆಡುಗೋಡಿ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ

ಐಪಿಎಲ್ ರದ್ದತಿಗೆ ಆಗ್ರಹಿಸಿ ಕೀರ್ತಿ ಆಝಾದ್ ಉಪವಾಸ


  ಮೇ -21-2012

ಹೊಸದಿಲ್ಲಿ: ಹಲವಾರು ವಿವಾದಗಳಿಂದ ಕೂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಭಾರತದ ಮಾಜಿ ಕ್ರಿಕೆಟಿಗ ಕೀರ್ತಿ ಆಝಾದ್ ರವಿವಾರದಿಂದ ಉಪವಾಸ ಮುಷ್ಕರ ಆರಂಭಿಸಿದ್ದಾರೆ. ಬಿಜೆಪಿ ನಾಯಕರೂ ಆಗಿರುವ ಆಝಾದ್, ಫಿರೋಝ್ ಶಾ ಕೋಟ್ಲಾ ಮೈದಾನದ ಹೊರಭಾಗದಲ್ಲಿ ಉಪವಾಸ ಆರಂಭಿಸಿದ್ದಾರೆ.
‘‘ವೀಕ್ಷಿಸುತ್ತಿರುವ ಎಲ್ಲರಿಗೂ ನನ್ನದೊಂದು ಪ್ರಶ್ನೆ, ಅದರಲ್ಲಿ ಪಾರದರ್ಶಕತೆ ಇದೆ ಎಂದು ನಿಮಗನಿಸುತ್ತದೆಯೇ? ಕ್ರೀಡೆಯಲ್ಲಿ ತುಂಬಾ ರಾಜಕೀಯವಿದೆ’’ ಎಂದು ತನ್ನ ಉಪವಾಸ ಮುಷ್ಕರವನ್ನು ಬೆಂಬಲಿಸಿ ನೆರೆದಿದ್ದ ಜನರನ್ನುದ್ದೇಶಿಸಿ ಆಝಾದ್ ಹೇಳಿದ್ದಾರೆ. ರಾಜಕೀಯದಲ್ಲಿ ಕ್ರೀಡಾಳುಗ
ಳಿರಬೇಕೇ ಹೊರತು, ಕ್ರೀಡೆಯಲ್ಲಿ ರಾಜಕೀಯವಿರಕೂಡದು ಎಂಬರ್ಥದಲ್ಲಿ ಕೀರ್ತಿ ಆಝಾದ್ ಮಾತನಾಡಿದ್ದಾರೆ. ‘‘ನಮ್ಮ ದೇಶದಲ್ಲಿ ಕ್ರಿಕೆಟ್ ಒಂದು ಧರ್ಮವಾಗಿದೆ. ಆದರೆ ಐಪಿಎಲ್‌ನಲ್ಲಿ ಆಟವಾಡಲು ಬಯಸುವ ಯುವಕರು, ದೇಶಕ್ಕಾಗಿ ಆಡುತ್ತಿಲ್ಲ ಎಂಬುದನ್ನು ತಿಳಿದಾಗ ನನಗೆ ತುಂಬಾ ಬೇಸರವಾಗುತ್ತಿದೆ’’ ಎಂದು ಕೀರ್ತಿ ಆಝಾದ್ ಹೇಳಿದ್ದಾರೆ.
ಆಝಾದ್‌ರ ಉಪವಾಸ ತಾಣದಲ್ಲಿ ಇನ್ನೋರ್ವ ಕ್ರಿಕೆಟಿಗ ವಿವೇಕ್ ರಝ್ದಿನ್ ಕೂಡ ಉಪಸ್ಥಿತರಿದ್ದರು. ರಾಷ್ಟ್ರೀಯ ತಂಡದ ಪರವಾಗಿ ಇನ್ನೂ ಆಡದ ಐವರು ಆಟಗಾರರನ್ನು ಖಾಸಗಿ ಸುದ್ದಿ ವಾಹಿನಿಯೊಂದು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಲುಕಿಸಿದ ಹಿನ್ನೆಲೆಯಲ್ಲಿ, ಬಿಸಿಸಿಐ ಅವರನ್ನು ಅಮಾನತುಗೊಳಿಸಿದೆ. ಅದರ ಬೆನ್ನಿಗೇ, ಕೋಲ್ಕತಾ ನೈಟ್ ರೈಡರ್ಸ್‌ ತಂಡದ ಸಹ ಮಾಲಕ ಶಾರುಕ್ ಖಾನ್ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್‌ನ ಸಿಬ್ಬಂದಿಯ ಜೊತೆ ವಾಂಖೇಡೆ ಸ್ಟೇಡಿಯಂನಲ್ಲಿ ಅಸಭ್ಯವಾಗಿ ವರ್ತಿಸಿ ವಿವಾದಕ್ಕೊಳಗಾದರು. ವಾಂಖೇಡೆ ಸ್ಟೇಡಿಯಂಗೆ ಪ್ರವೇಶಿಸುವುದನ್ನು ಎಂಸಿಎ ಶಾರುಕ್‌ಗೆ ಐದು ವರ್ಷದ ಮಟ್ಟಿಗೆ ನಿಷೇಧ ಹೇರಿದೆ.
ಅದರ ನಂತರ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಆಟಗಾರ ಲೂಕ್ ಪೊಮೆರ್ಸ್‌ಬ್ಯಾಕ್ ಅಮೆರಿಕನ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದಾರೆ. ಅವರಿಗೆ ದಿಲ್ಲಿ ನ್ಯಾಯಾಲಯ ಶನಿವಾರ ಜಾಮೀನು ನೀಡಿದೆ. ಆದರೆ ತನಿಖೆಯು ಪೂರ್ಣಗೊಳ್ಳುವವರೆಗೆ ದೇಶ ಬಿಟ್ಟು ಹೋಗಲಾಗದು.

ಶಿಲಾಯುಗದ ಸಂಸ್ಕೃತಿ

  ಮೇ -21-2012

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ. ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕೊಳ್ಳುತ್ತಾ ಬರುತ್ತಿದೆ.ಇತ್ತೀಚೆಗೆ ಕಾರವಾರ ಸಮೀಪದ ದಾಂಡೇಲಿಯಲ್ಲಿ ಓರ್ವ ಎಸಿಎಫ್‌ನನ್ನು ಕೊಂದು ಹಾಕಲಾಯಿತು.ಈ ಹಿನ್ನೆಲೆಯಲ್ಲಿ ಆರು ಮಂದಿಯನ್ನು ಬಳಿಕ ಬಂಧಿಸಲಾಯಿತು ಕೂಡ.ಆದರೆ ಇಲ್ಲಿ ನಾವು ಗಮನಿಸಬೇಕಾದುದೆಂದರೆ, ಆ ಎಸಿಎಫ್‌ನ್ನು ಕೊಂದ ಕಾರಣ ಮತ್ತು ಕೊಂದವರ ಹಿನ್ನೆಲೆ.ಯಾವ ಕಾರಣವೇ ಇರಲಿ.ಒಬ್ಬನನ್ನು ಥಳಿಸಿ ಕೊಲ್ಲುವುದು ಬರ್ಬರ, ಶಿಲಾಯುಗದ ಮನಸ್ಥಿತಿ. ‘ಮೊಸಳೆಗೆ ಮಾಂಸ ಹಾಕಬೇಡಿ’ ಎಂದು ಒಬ್ಬ ಎಸಿಎಫ್ ಹೇಳಿದ ಮಾತು, ಆತನನ್ನು ಕೊಲ್ಲುವಷ್ಟು ದೊಡ್ಡ ತಪ್ಪೆ? ಇಲ್ಲಿ ಅದಕ್ಕಿಂತಲೂ ಮುಖ್ಯವಾದುದೆಂದರೆ, ಕೊಂದವರಾರೂ ಗೂಂಡಾಗಳಲ್ಲ. ಅವರು ನಮ್ಮ ನಿಮ್ಮಂತೆಯೇ ನಾಗರಿಕ ಸಮಾಜದಲ್ಲಿ, ಕಾನೂನು ವ್ಯವಸ್ಥೆಯ ನಡುವೆಯೇ ಬದುಕುತ್ತಿರುವವರು.ಸಾಧಾರಣವಾಗಿ ಇಂತಹ ಕ್ರೂರ ಕೃತ್ಯಗಳು ನಡೆಯುವುದು, ಜವಾಬ್ದಾರಿ ರಹಿತ, ದುಷ್ಕರ್ಮಿಗಳಿಂದ ಎಂದು ನಂಬುತ್ತಾ ಬಂದಿದ್ದೇವೆ.
ಆದರೆ ಇಲ್ಲಿ ಎಸಿಎಫ್‌ನ ಮೇಲೆ ಥಳಿಸಿದವರಲ್ಲಿ ಸರಕಾರಿ ಅಧಿಕಾರಿಗಳೂ ಇದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇವರೆಲ್ಲ ಸಮಾಜದಲ್ಲಿ ಸಭ್ಯರೆಂಬ ಹಣೆಪಟ್ಟಿ ಕಟ್ಟಿಕೊಂಡು ಬದುಕುತ್ತಿರುವವರು. ಆದರೆ ಇವರೊಳಗೆ ತಣ್ಣಗೆ ಬಚ್ಚಿಟ್ಟುಕೊಂಡಿದ್ದ ಕ್ರೌರ್ಯ ಇಂತಹ ಕೃತ್ಯವನ್ನು ಎಸಗುವಂತೆ ಮಾಡಿದೆ. ಇದು ನಿಜಕ್ಕೂ ಆತಂಕಕಾರಿ ವಿಷಯ. ಮತ್ತು ನಾಗರಿಕರು ತಲೆತಗ್ಗಿಸುವಂತಹ ಕೃತ್ಯ.ಇದೇ ಸಂದರ್ಭದಲ್ಲಿ ಕನ್ನಡದ ಹೆಸರಿನಲ್ಲಿ ನಿನ್ನೆ ಚಿಕ್ಕೋಡಿಯಲ್ಲಿ ಒಂದು ಘಟನೆ ನಡೆಯಿತು. ಎಂಇಎಸ್ ಮಹಾಮೇಳವನ್ನು ವಿರೋಧಿಸಿ ಈ ಕೃತ್ಯವನ್ನು ನಡೆಸಲಾಗಿದೆಯಂತೆ.
ಕನ್ನಡದ ಈ ಹೋರಾಟಗಾರರು ಒಂದು ಮಹಾ ಹತ್ಯಾಕಾಂಡವನ್ನೇ ನಡೆಸುವಂತಹ ಮನಸ್ಥಿತಿಯಲ್ಲಿದ್ದರು. ಶನಿವಾರ ಮಧ್ಯಾಹ್ನ 12ಗಂಟೆಯ ಹೊತ್ತಿಗೆ ಕೊಲ್ಲಾಪುರದಿಂದ ಬೆಳಗಾವಿಗೆ ಬರುತ್ತಿದ್ದ ಬಸ್‌ನ್ನು ತಡೆದ ಈ ಹೋರಾಟಗಾರರು ಬಸ್ಸಿಗೆ ಕಲ್ಲುತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲ, ಪ್ರಯಾಣಿಕರು ಬಸ್ಸಿನೊಳಗೆ ಇರುವಾಗಲೇ ಪೆಟ್ರೋಲನ್ನು ಎರಚಿ ಅದನ್ನು ಸುಡಲು ಯತ್ನಿಸಿದ್ದಾರೆ. ಪ್ರಯಾಣಿಕರೇನಾದರೂ ಇಳಿಯದೇ ಇದ್ದರೆ ಭಾರೀ ಅನಾಹುತ ನಡೆಯುತ್ತಿತ್ತು. ಅಷ್ಟೇ ಅಲ್ಲ, ಬೆಂಕಿಗೆ ನೀರು ಹಾಕುತ್ತಿದ್ದ ಚಾಲಕನ ಮೇಲೆ ರಾಕ್ಷಸರಂತೆ ಹಲ್ಲೆ ನಡೆಸಿದ್ದಾರೆ. ವಿಷಾದನೀಯ ಸಂಗತಿಯೆಂದರೆ, ಇದೆಲ್ಲವನ್ನು ಇವರು ಮಾಡಿರುವುದು ಕನ್ನಡದ ಹೆಸರಲ್ಲಿ. ಈ ಕೃತ್ಯವನ್ನು ಎಸಗಿದವರು ಯಾವ ಸಂಘಟನೆಗೇ ಸೇರಿರಲಿ, ಅವರಿಗೆ ಕನ್ನಡ ಪರಂಪರೆಯ, ಕನ್ನಡತನದ ಗಂಧಗಾಳಿಯಿಲ್ಲ.
ಕನ್ನಡವನ್ನು ಉಳಿಸುವುದೆಂದರೆ ಬಸ್ಸಿಗೆ ಬೆಂಕಿ ಹಚ್ಚುವುದು, ಅಮಾಯಕರ ಮೇಲೆ ದೌರ್ಜನ್ಯವೆಸಗುವುದು ಎಂದು ತಿಳಿದುಕೊಂಡ ಇವರು ಕನ್ನಡ ವಿರೋಧಿಗಳೇ ಹೊರತು, ಕನ್ನಡ ಪ್ರೇಮಿಗಳಾಗಲು ಸಾಧ್ಯವಿಲ್ಲ. ಕನ್ನಡ ಹೋರಾಟಗಾರರ ಮುಖವಾಡದಲ್ಲಿರುವ ದುಷ್ಕರ್ಮಿಗಳು, ಗೂಂಡಾಗಳು ಇವರು. ಇವರನ್ನು ಬಂಧಿಸಿ, ತಕ್ಷಣ ಜೈಲಿಗೆ ತಳ್ಳಬೇಕಾಗಿದೆ.ನಾಡಿನ ಆತ್ಮಸಾಕ್ಷಿಯನ್ನು ಕಲಕಿದ ಇನ್ನೊಂದು ಘಟನೆ, ದುಷ್ಕರ್ಮಿಗಳಿಂದ ಹಲ್ಲೆಗೀಡಾಗಿ ಗಂಭೀರ ಸ್ಥಿತಿಯಲ್ಲಿದ್ದ ಕೆಎಎಸ್ ಅಧಿಕಾರಿ ಮಹಂತೇಶ್ ಇಂದು ಮೃತರಾಗಿದ್ದಾರೆ. ಇಲಾಖೆಯ ಅವ್ಯವಹಾರಗಳನ್ನು ಹೊರಗೆಡಹಿದ ಹಿನ್ನೆಲೆಯಲ್ಲಿ ಕೆಎಎಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆ ಮೇ 15ರಂದು ನಡೆದಿದೆ. ಆದರೆ ಈವರೆಗೂ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಲು ನಮ್ಮ ಪೊಲೀಸ್ ಇಲಾಖೆಗೆ ಸಾಧ್ಯವಾಗಿಲ್ಲ.
ಇಂದು ಆ ಅಧಿಕಾರಿ ತನ್ನ ಪ್ರಾಣವನ್ನೇ ತೆತ್ತಿದ್ದಾನೆ. ಅದನ್ನೇ ಕಾಯುತ್ತಿದ್ದವರಂತೆ, ರಾಜಕಾರಣಿಗಳು ಒಮ್ಮಿಂದೊಮ್ಮೆಗೆ ಹತನಾದ ಸಂಬಂಧಿಕರೆಡೆಗೆ ಧಾವಿಸಿದ್ದಾರೆ. ಭರವಸೆಗಳ ಮಹಾಪೂರವನ್ನು ಹರಿಸಿದ್ದಾರೆ. ಸಿಓಡಿ ತನಿಖೆ, ಆ ತನಿಖೆ, ಈ ತನಿಖೆ ಎಂದು ಹೇಳಿಕೆಗಳನ್ನು ನೀಡಿದ್ದಾರೆ. ಈ ಮೂರು ಘಟನೆಗಳನ್ನಿಟ್ಟುಕೊಂಡು, ನಮ್ಮ ನಾಡು ಎತ್ತ ಸಾಗುತ್ತಿದೆ, ಹೇಗೆ ಹೃದಯಹೀನವಾಗುತ್ತಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ರಾಜಕಾರಣಿಗಳು ಜನರ ಕುರಿತಂತೆ ಯಾವ ಕಾಳಜಿಯೂ ಇಟ್ಟುಕೊಳ್ಳದೆ, ದೋಚುವುದನ್ನೇ ಆಡಳಿತ ಎಂದು ನಂಬಿಸುತ್ತಿದ್ದಾರೆ. ಜನರು ಪ್ರತಿಭಟಿಸುವ ಮನಸ್ಥಿತಿಯನ್ನು ಕಳೆದು ಕೊಂಡಿದ್ದಾರೆ. ಭ್ರಷ್ಟಾಚಾರವೇ ಸಮಾಜದ ಮೌಲ್ಯವಾಗಿ ಪ್ರತಿಬಿಂಬಿತವಾಗುತ್ತಿದೆ. ಜನರು ನಿಧಾನಕ್ಕೆ ಸಂವೇದನೆಗಳನ್ನು ಕಳೆದು ಕೊಳ್ಳುತ್ತಿದ್ದಾರೆ. ಮನುಷ್ಯನೊಬ್ಬನನ್ನು ಥಳಿಸಿ ಕೊಂದು ಹಾಕುವುದರ ಕುರಿತಂತೆ ಅವರಿಗೆ ಏನೂ ಅನ್ನಿಸುತ್ತಿಲ್ಲ. ಇದು ನಿಜಕ್ಕೂ ಆಘಾತಕಾರಿಯಾದುದು.
ನಾವು ನಾಗರಿಕ ಸಮಾಜದಲ್ಲಿ ಬದುಕುತ್ತಿರುವುದು ಸಾಬೀತಾಗಬೇಕಾದರೆ, ಕನಿಷ್ಠ ಈ ದುಷ್ಕರ್ಮಿಗಳಿಗೆ ಶಿಕ್ಷೆಯಾಗಬೇಕು. ಈ ಶಿಕ್ಷೆ ಇಂತಹ ಘಟನೆ ಮರುಕಳಿಸದಂತೆ ಒಂದು ಎಚ್ಚರಿಕೆಯೂ ಆಗಬೇಕು.ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮುನ್ನಡೆಯಬೇಕಾಗಿದೆ. ಗಂಭೀರ ತನಿಖೆಯನ್ನು ನಡೆಸಿ, ಇವುಗಳ ಹಿಂದಿರುವ ದುಷ್ಕರ್ಮಿಗಳನ್ನು ಗುರುತಿಸಿ, ಅವರ ಮೇಲೆ ಗಟ್ಟಿಯಾದ ಎಫ್‌ಐಆರ್ ದಾಖಲಿಸಿ ಜೈಲಿನಲ್ಲಿ ಕೊಳೆಯುವಂತೆ ಮಾಡಬೇಕು.ಹಾಗಾದಲ್ಲಿ ಮಾತ್ರ, ನಮ್ಮ ಸಮಾಜ ಮನುಷ್ಯರು ಬದುಕಲು ಯೋಗ್ಯವಾದ ಸಮಾಜ ಎಂದು ನಂಬಬಹುದಾಗಿದೆ.

Sunday 20 May 2012

ಕೇರಳ:ಮೀನುಗಾರರ ಹತ್ಯೆ ಕೇಸ್: ಇಟಲಿ ನೌಕಾ ಸಿಬ್ಬಂದಿಗೆ ಜಾಮೀನಿಲ್ಲ

, 20 ಮೇ 2012


ಇಬ್ಬರು ಭಾರತೀಯ ಮೀನುಗಾರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಇಟಲಿ ನೌಕಾ ಪಡೆಯ ಇಬ್ಬರು ಸಿಬ್ಬಂದಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನ್ಯಾಯಾಲಯ ಶನಿವಾರ ತಿರಸ್ಕರಿದೆ.

ಮೂರು ತಿಂಗಳಿನಿಂದ ಜೈಲಿನಲ್ಲಿರುವ ಲಾತೋರ್ ಮಾಸ್ಸಿಮಿಲಿಯಾನೊ ಮತ್ತು ಸಾಲ್ವತೋರ್ ಗಿರೋನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪಿ.ಡಿ ರಾಜನ್, ಈ ಸಂದರ್ಭದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದರೆ ಅದು ಪ್ರಕರಣದ ತನಿಖೆಗೆ ಮೇಲೆ ಪರಿಣಾಮ ಬೀರಬಹುದು ಎಂದು ಅಭಿಪ್ರಾಯಪಟ್ಟರು.

ಇಟಲಿಗೆ ಸೇರಿದ ಎನ್ರಿಕಾ ಲೆಕ್ಸಿ ಹಡಗಿನಲ್ಲಿದ್ದ ಇಬ್ಬರು ನೌಕಾ ಪಡೆ ಸಿಬ್ಬಂದಿ ಫೆಬ್ರುವರಿ 15ರಂದು, ಇಬ್ಬರು ಭಾರತೀಯ ಮೀನುಗಾರರನ್ನು ಕಡಲ್ಗಳ್ಳರು ಎಂದು ತಪ್ಪಾಗಿ ಭಾವಿಸಿ ಗುಂಡಿಟ್ಟು ಹತ್ಯೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಪೊಲೀಸರು ಫೆಬ್ರುವರಿ 19ರಂದು ಆರೋಪಿಗಳನ್ನು ಬಂಧಿಸಿದ್ದರು. ಇವರನ್ನು ತಿರುವನಂತಪುರದ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೊಲೀಸರು ಶುಕ್ರವಾರವಷ್ಟೇ ಆರೋಪಿಗಳ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದರು.